<p><strong>ಹರಿಹರ</strong>: ‘ದೇಶದ ಸಂವಿಧಾನಕ್ಕೆ ಮನುವಾದಿಗಳಿಂದ ಆಪತ್ತು ಎದುರಾಗಿದೆ’ ಎಂದು ‘ಎದ್ದೇಳು ಕರ್ನಾಟಕ’ ಸಂಘಟನೆಯ ಮುಖಂಡ ಅನೀಸ್ ಪಾಷಾ ಆತಂಕ ವ್ಯಕ್ತಪಡಿಸಿದರು. </p>.<p>‘ಸಂವಿಧಾನ ರಕ್ಷಣಾ ಪಡೆ’ ರಚಿಸುವ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಮಾತನಾಡಿದರು. </p>.<p>‘ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾದರೆ ದೇಶದ ಶೋಷಿತರು ಹಾಗೂ ಮಹಿಳೆಯರ ಹಕ್ಕುಗಳಿಗೆ ಘಾಸಿಯಾಗುವ ಅಪಾಯವಿದೆ. ಬಿಜೆಪಿ ಹಾಗೂ ಅದರ ಸಹ ಸಂಘಟನೆಗಳ ಮುಖಂಡರು ಸಂವಿಧಾನ ಬದಲಿಸುವ ಮಾತನ್ನು ಹೇಳುತ್ತಿರುವುದು ಆತಂಕ ಮೂಡಿಸಿದೆ’ ಎಂದು ಹೇಳಿದರು. </p>.<p>‘ಸಂವಿಧಾನ ರಕ್ಷಣಾ ಪಡೆಯನ್ನು ರಾಜ್ಯದ ಎಲ್ಲಾ ತಾಲ್ಲೂಕು, ಜಿಲ್ಲೆಗಳಲ್ಲಿ ರಚಿಸಲಾಗುತ್ತಿದೆ. ಪ್ರಜ್ಞಾವಂತರು ಈ ಪಡೆಗೆ ಶಕ್ತಿ ತುಂಬಬೇಕು’ ಎಂದರು. </p>.<p>ವಿವಿಧ ಧರ್ಮಗಳಿಗೆ ಒಂದೊಂದು ಧರ್ಮಗ್ರಂಥ ಇರುವಂತೆಯೇ ಸಂವಿಧಾನವು ಭಾರತೀಯರ ಧರ್ಮಗ್ರಂಥವಾಗಿದೆ ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಮುಖಂಡ ಜೆ.ಯಾದವರೆಡ್ಡಿ ಹೇಳಿದರು. </p>.<p>‘ಅಸಂಖ್ಯಾತ ಜಾತಿ, ಜನಾಂಗ, ಧರ್ಮ, ಸಂಸ್ಕೃತಿ, ಪರಂಪರೆಯ ಜನರನ್ನು ಹೊಂದಿರುವ ಜಗತ್ತಿನ ಬೃಹತ್ ರಾಷ್ಟ್ರ ಎನಿಸಿದ ಭಾರತಕ್ಕೆ ಸಂವಿಧಾನವೇ ಮೂಲ ಆಧಾರವಾಗಿದೆ. ಅದರ ರಕ್ಷಣೆಗೆ ಎಲ್ಲರೂ ಕೈ ಜೋಡಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಮುರುಗೇಶಪ್ಪ ಅಭಿಪ್ರಾಯಪಟ್ಟರು. </p>.<p>‘ಸಂವಿಧಾನದ ತಿರುಳನ್ನು ಜನಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ಕೈಪಿಡಿಯನ್ನು ಪ್ರಕಟಿಸಿ, ಹಂಚಿಕೆ ಮಾಡಿ ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಬಿ.ಮಗ್ದುಮ್ ಹೇಳಿದರು. </p>.<p>ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಚನ್ನಗಿರಿಯ ಟಿ.ರುದ್ರಪ್ಪ, ತಿಪ್ಪಣ್ಣ ಕತ್ತಲಗೆರೆ, ವೈ.ಮಲ್ಲಿನಾಥ, ಬಿಎಸ್ಪಿ ಮುಖಂಡ ಡಿ.ಹನುಮಂತಪ್ಪ, ಭಾಗ್ಯದೇವಿ, ಜಮೀಲಾಬಿ, ದೇವೇಂದ್ರಪ್ಪ, ಎಂ.ಕೃಷ್ಣ, ಪ್ರೀತಮ್ ಬಾಬು, ರಿಯಾಜ್ ಖಾದ್ರಿ, ಡಾ.ಮೊಹಮ್ಮದ್ ಇಸಾಕ್, ನಿಂಗಪ್ಪ, ಮೊಹಮ್ಮದ್ ಶಾಹೀದ್, ಮೊಹಮ್ಮದ್ ಅಶ್ಫಾಖ್, ಪಿ.ಪಕ್ಕೀರಪ್ಪ ಹಾಗೂ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ</strong>: ‘ದೇಶದ ಸಂವಿಧಾನಕ್ಕೆ ಮನುವಾದಿಗಳಿಂದ ಆಪತ್ತು ಎದುರಾಗಿದೆ’ ಎಂದು ‘ಎದ್ದೇಳು ಕರ್ನಾಟಕ’ ಸಂಘಟನೆಯ ಮುಖಂಡ ಅನೀಸ್ ಪಾಷಾ ಆತಂಕ ವ್ಯಕ್ತಪಡಿಸಿದರು. </p>.<p>‘ಸಂವಿಧಾನ ರಕ್ಷಣಾ ಪಡೆ’ ರಚಿಸುವ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಮಾತನಾಡಿದರು. </p>.<p>‘ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾದರೆ ದೇಶದ ಶೋಷಿತರು ಹಾಗೂ ಮಹಿಳೆಯರ ಹಕ್ಕುಗಳಿಗೆ ಘಾಸಿಯಾಗುವ ಅಪಾಯವಿದೆ. ಬಿಜೆಪಿ ಹಾಗೂ ಅದರ ಸಹ ಸಂಘಟನೆಗಳ ಮುಖಂಡರು ಸಂವಿಧಾನ ಬದಲಿಸುವ ಮಾತನ್ನು ಹೇಳುತ್ತಿರುವುದು ಆತಂಕ ಮೂಡಿಸಿದೆ’ ಎಂದು ಹೇಳಿದರು. </p>.<p>‘ಸಂವಿಧಾನ ರಕ್ಷಣಾ ಪಡೆಯನ್ನು ರಾಜ್ಯದ ಎಲ್ಲಾ ತಾಲ್ಲೂಕು, ಜಿಲ್ಲೆಗಳಲ್ಲಿ ರಚಿಸಲಾಗುತ್ತಿದೆ. ಪ್ರಜ್ಞಾವಂತರು ಈ ಪಡೆಗೆ ಶಕ್ತಿ ತುಂಬಬೇಕು’ ಎಂದರು. </p>.<p>ವಿವಿಧ ಧರ್ಮಗಳಿಗೆ ಒಂದೊಂದು ಧರ್ಮಗ್ರಂಥ ಇರುವಂತೆಯೇ ಸಂವಿಧಾನವು ಭಾರತೀಯರ ಧರ್ಮಗ್ರಂಥವಾಗಿದೆ ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಮುಖಂಡ ಜೆ.ಯಾದವರೆಡ್ಡಿ ಹೇಳಿದರು. </p>.<p>‘ಅಸಂಖ್ಯಾತ ಜಾತಿ, ಜನಾಂಗ, ಧರ್ಮ, ಸಂಸ್ಕೃತಿ, ಪರಂಪರೆಯ ಜನರನ್ನು ಹೊಂದಿರುವ ಜಗತ್ತಿನ ಬೃಹತ್ ರಾಷ್ಟ್ರ ಎನಿಸಿದ ಭಾರತಕ್ಕೆ ಸಂವಿಧಾನವೇ ಮೂಲ ಆಧಾರವಾಗಿದೆ. ಅದರ ರಕ್ಷಣೆಗೆ ಎಲ್ಲರೂ ಕೈ ಜೋಡಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಮುರುಗೇಶಪ್ಪ ಅಭಿಪ್ರಾಯಪಟ್ಟರು. </p>.<p>‘ಸಂವಿಧಾನದ ತಿರುಳನ್ನು ಜನಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ಕೈಪಿಡಿಯನ್ನು ಪ್ರಕಟಿಸಿ, ಹಂಚಿಕೆ ಮಾಡಿ ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಬಿ.ಮಗ್ದುಮ್ ಹೇಳಿದರು. </p>.<p>ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಚನ್ನಗಿರಿಯ ಟಿ.ರುದ್ರಪ್ಪ, ತಿಪ್ಪಣ್ಣ ಕತ್ತಲಗೆರೆ, ವೈ.ಮಲ್ಲಿನಾಥ, ಬಿಎಸ್ಪಿ ಮುಖಂಡ ಡಿ.ಹನುಮಂತಪ್ಪ, ಭಾಗ್ಯದೇವಿ, ಜಮೀಲಾಬಿ, ದೇವೇಂದ್ರಪ್ಪ, ಎಂ.ಕೃಷ್ಣ, ಪ್ರೀತಮ್ ಬಾಬು, ರಿಯಾಜ್ ಖಾದ್ರಿ, ಡಾ.ಮೊಹಮ್ಮದ್ ಇಸಾಕ್, ನಿಂಗಪ್ಪ, ಮೊಹಮ್ಮದ್ ಶಾಹೀದ್, ಮೊಹಮ್ಮದ್ ಅಶ್ಫಾಖ್, ಪಿ.ಪಕ್ಕೀರಪ್ಪ ಹಾಗೂ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>