<p><strong>ಕಡರನಾಯ್ಕನಹಳ್ಳಿ</strong>: ಮರವನ್ನೇರಿ ಕುರಿಗಳಿಗೆ ಸೊಪ್ಪು ಕಡಿದುಹಾಕುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಕುರಿಗಾಹಿ ಮೃತಪಟ್ಟ ಘಟನೆ ಸಮೀಪದ ಹೊಸಪಾಳ್ಯ ಗ್ರಾಮದ ಮಳಲಹಳ್ಳಿ ರಸ್ತೆಯಲ್ಲಿ ನಡೆದಿದೆ. </p>.<p>ಕೊಟ್ರೇಶ್ (21) ಮೃತ ವ್ಯಕ್ತಿ.</p>.<p>ವಿದ್ಯುತ್ ತಂತಿಗಳು ಹಾದುಹೋಗಿದ್ದ ಮರವನ್ನು ಬುಧವಾರ ಬೆಳಿಗ್ಗೆ ಹತ್ತಿದ್ದ ಕೊಟ್ರೇಶ್, ಕುರಿಗಳಿಗೆ ಸೊಪ್ಪು ಕಡಿಯುತ್ತಿದ್ದಾಗ ಅವಘಡ ಸಂಭವಿಸಿದೆ.</p>.<p>ಮೃತ ವ್ಯಕ್ತಿಗೆ ತಂದೆ, ತಾಯಿ, ಇಬ್ಬರು ಸಹೋದರಿಯರಿದ್ದಾರೆ. ಇವರು ಮೂಲತಃ ಹಾನಗಲ್ ತಾಲ್ಲೂಕು ಮಾಸ್ತಿಕಟ್ಟೆ ಗ್ರಾಮದವರು. </p>.<p>ಎಷ್ಟು ಹೊತ್ತಾದರೂ ಕೊಟ್ರೇಶ್ ಬಾರದೆ ಇದ್ದಾಗ ಅವರ ತಂದೆ ಹುಟುಕಾಟ ನಡೆಸಿದರು. ಮಗ ಮರದ ಮೇಲೆಯೇ ಒರಗಿಕೊಂಡು ಮೃತಪಟ್ಟಿರುವುದು ಕಂಡುಬಂತು ಎಂದು ತಂದೆ ಲಕ್ಷಣ ಹೇಳಿಕೆ ನೀಡಿದ್ದಾರೆ.</p>.<p>ಮಲೆಬೆನ್ನೂರು ಪಿಎಸ್ಐ ಪ್ರಭು ಡಿ. ಮತ್ತು ಪೋಲಿಸ್ ಸಿಬ್ಬಂದಿ ಪರಿಶೀಲನೆ ನಡೆಸಿದರು. ಮಲೆಬೆನ್ನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡರನಾಯ್ಕನಹಳ್ಳಿ</strong>: ಮರವನ್ನೇರಿ ಕುರಿಗಳಿಗೆ ಸೊಪ್ಪು ಕಡಿದುಹಾಕುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಕುರಿಗಾಹಿ ಮೃತಪಟ್ಟ ಘಟನೆ ಸಮೀಪದ ಹೊಸಪಾಳ್ಯ ಗ್ರಾಮದ ಮಳಲಹಳ್ಳಿ ರಸ್ತೆಯಲ್ಲಿ ನಡೆದಿದೆ. </p>.<p>ಕೊಟ್ರೇಶ್ (21) ಮೃತ ವ್ಯಕ್ತಿ.</p>.<p>ವಿದ್ಯುತ್ ತಂತಿಗಳು ಹಾದುಹೋಗಿದ್ದ ಮರವನ್ನು ಬುಧವಾರ ಬೆಳಿಗ್ಗೆ ಹತ್ತಿದ್ದ ಕೊಟ್ರೇಶ್, ಕುರಿಗಳಿಗೆ ಸೊಪ್ಪು ಕಡಿಯುತ್ತಿದ್ದಾಗ ಅವಘಡ ಸಂಭವಿಸಿದೆ.</p>.<p>ಮೃತ ವ್ಯಕ್ತಿಗೆ ತಂದೆ, ತಾಯಿ, ಇಬ್ಬರು ಸಹೋದರಿಯರಿದ್ದಾರೆ. ಇವರು ಮೂಲತಃ ಹಾನಗಲ್ ತಾಲ್ಲೂಕು ಮಾಸ್ತಿಕಟ್ಟೆ ಗ್ರಾಮದವರು. </p>.<p>ಎಷ್ಟು ಹೊತ್ತಾದರೂ ಕೊಟ್ರೇಶ್ ಬಾರದೆ ಇದ್ದಾಗ ಅವರ ತಂದೆ ಹುಟುಕಾಟ ನಡೆಸಿದರು. ಮಗ ಮರದ ಮೇಲೆಯೇ ಒರಗಿಕೊಂಡು ಮೃತಪಟ್ಟಿರುವುದು ಕಂಡುಬಂತು ಎಂದು ತಂದೆ ಲಕ್ಷಣ ಹೇಳಿಕೆ ನೀಡಿದ್ದಾರೆ.</p>.<p>ಮಲೆಬೆನ್ನೂರು ಪಿಎಸ್ಐ ಪ್ರಭು ಡಿ. ಮತ್ತು ಪೋಲಿಸ್ ಸಿಬ್ಬಂದಿ ಪರಿಶೀಲನೆ ನಡೆಸಿದರು. ಮಲೆಬೆನ್ನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>