<p><strong>ಹರಿಹರ</strong>: ‘ನಮ್ಮಜ್ಜ ನೆಟ್ಟ ಗಿಡಗಳನ್ನು ಕತ್ತರಿಸುವಾಗ ಕಣ್ಣಲ್ಲಿ ನೀರು ಬಂತು. ಮನೆಯಲ್ಲಿ ನಮ್ಮ ತಂದೆ, ತಾಯಿ, ಮಕ್ಕಳ ಮನಸ್ಸು ಭಾರವಾಗಿತ್ತು. ಏನು ಮಾಡೋದು? ನುಸಿ ಪೀಡೆಗೆ ಹೆದರಿ ಅನಿವಾರ್ಯವಾಗಿ ನಮ್ಮನ್ನು ಸಾಕಿದ ಗಿಡಗಳನ್ನೇ ಕತ್ತರಿಸಬೇಕಾಯಿತು...’</p>.<p>ತಮ್ಮ ಜಮೀನಿನಲ್ಲಿದ್ದ 220 ತೆಂಗಿನ ಮರಗಳ ಪೈಕಿ 100 ಗಿಡಗಳನ್ನು ಕೆಲ ದಿನಗಳ ಹಿಂದೆ ಕಡಿಸಿದ ತಾಲ್ಲೂಕಿನ ಹೊಳೆಸಿರಿಗೆರೆಯ ರೈತ ಎಂ.ಎಚ್. ಪಟೇಲ್ ಅವರ ಈ ಮಾತು ಸದ್ಯದ ತೆಂಗಿನ ಬೆಳೆಯ ದುಃಸ್ಥಿತಿಯನ್ನು ಬಿಂಬಿಸುತ್ತದೆ.</p>.<p>‘ಕಲ್ಪವೃಕ್ಷದ ಕಣಜ’ ಎಂಬ ಖ್ಯಾತಿಯ ಹೊಳೆಸಿರಿಗೆರೆಯಲ್ಲಿ ಅವರಷ್ಟೇ ಅಲ್ಲ, ಅವರಂತೆಯೇ ಇನ್ನೂ ಹಲವು ರೈತರು ತೆಂಗಿನ ಮರಗಳನ್ನು ಕತ್ತರಿಸಿದ್ದಾರೆ.</p>.<p>ರೈತರಾದ ಮಾಗೋಡು ರಾಜಣ್ಣ 100 ಮರ, ಮಾಗನೂರು ಶ್ರೀನಿವಾಸ್ ಅವರು 46 ಮರ ಸೇರಿದಂತೆ ಹತ್ತಾರು ರೈತರು ಇದುವರೆಗೆ ಒಟ್ಟು 500ಕ್ಕೂ ಹೆಚ್ಚು ತೆಂಗಿನ ಮರಗಳನ್ನು ತೆಗೆಯಿಸಿದ್ದಾರೆ.</p>.<p><strong>ನುಸಿ ರೋಗ:</strong></p>.<p>ತಾಲ್ಲೂಕಿನಲ್ಲಿ ಹೊಳೆಸಿರಿಗೆರೆ ತೆಂಗಿನ ಬೆಳೆಗೆ ಪ್ರಸಿದ್ಧಿ. ಕೆಲವು ವರ್ಷಗಳಿಂದ ಈ ಭಾಗದ ತೆಂಗಿನ ತೋಟಗಳಿಗೆ ಹಬ್ಬಿದ ನುಸಿ ಪೀಡೆಯು ಮರದಲ್ಲಿ ತೆಂಗಿನ ಹರಳು ಕಟ್ಟಲೂ ಅವಕಾಶ ನೀಡುತ್ತಿಲ್ಲ. ಹಸಿರು ಗರಿಗಳು ಕಪ್ಪಾಗಿ, ಶಕ್ತಿಹೀನವಾಗಿ ಮುರಿದು ಬೀಳುತ್ತಿವೆ.</p>.<p>ತಮ್ಮ ಮನೆಯಲ್ಲಿ ಬಳಸುವುದಲ್ಲದೆ ಸಂಬಂಧಿಕರ ಮನೆಗೂ ತೆಂಗಿನಕಾಯಿ ಕಳಿಸಿಕೊಡುತ್ತಿದ್ದ ಗ್ರಾಮದ ಹಲವು ರೈತರು ಈಗ ತಮ್ಮ ಮನೆಯ ನಿತ್ಯ ಬಳಕೆಗೂ ತೆಂಗಿನಕಾಯಿಯನ್ನು ಅಂಗಡಿಯಿಂದ ಖರೀದಿಸಬೇಕಾಗಿದೆ. ಇದು ನುಸಿ ರೋಗದ ಭಯಾನಕತೆ ತೆರೆದಿಡುತ್ತದೆ.</p>.<p>ಸದ್ಯಕ್ಕೆ ಗ್ರಾಮದಲ್ಲಿ ಒಂದೂವರೆ ತಿಂಗಳಿಂದ ತೆಂಗಿನ ಮರಗಳನ್ನು ಕತ್ತರಿಸುವುದು ಸಾಮಾನ್ಯ ಎಂಬಂತಾಗಿದೆ. ತಮಿಳುನಾಡಿನ ಫ್ಲೈವುಡ್ ಕಾರ್ಖಾನೆಯವರು ಮರಗಳನ್ನು ಕತ್ತರಿಸಿ ಲಾರಿಯಲ್ಲಿ ಸಾಗಿಸುತ್ತಿದ್ದಾರೆ. ಒಂದು ಗಿಡ ಕತ್ತರಿಸಿ ಸಾಗಿಸಲು ರೈತರೇ ₹ 200 ಪಾವತಿಸುತ್ತಿದ್ದಾರೆ.</p>.<p>ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ, ಈ ಗ್ರಾಮದ ಕಲ್ಪವೃಕ್ಷ ಬೆಳೆಗೆ ಕಾಡುತ್ತಿರುವ ನುಸಿ ರೋಗದಿಂದ ಮುಕ್ತಿ ದೊರಕಿಸಬೇಕಾಗಿದೆ ಎನ್ನುತ್ತಾರೆ ರೈತರು.</p>.<p>ಅಡಿಕೆ ಬೆಳೆ ವಾರ್ಷಿಕವಾಗಿ ಉತ್ತಮ ಆದಾಯ ಕೊಡುತ್ತದೆ ಎಂಬ ಭಾವನೆ ಸಾಮಾನ್ಯವಾಗಿದೆ. ತೆಂಗೂ ಅಷ್ಟೇ ಆದಾಯ ಕೊಡುವ ಬೆಳೆ. ಆದರೆ, ಈಗ ನುಸಿ ರೋಗದಿಮದ ರೈತರು ಕಂಗಾಲಾಗಿದ್ದಾರೆ ಎಂದು ರೈತ ಕುಂದೂರು ಮಂಜಪ್ಪ ಬೇಸರಿಸಿದರು.</p>.<p><strong>ರೋಗಪೀಡಿತ ಮರಗಳನ್ನು ತೆಗೆಯಿಸಿದ್ದೇನೆ. ಮತ್ತೆ ತೆಂಗಿನ ಸಸಿ ನೆಡುತ್ತೇನೆ. ಉತ್ತಮ ಸಸಿಗಳಿಗೆ ಹುಡುಕಾಡುತ್ತಿದ್ದೇನೆ </strong></p><p><strong>-ಎಂ.ಎಚ್. ಪಟೇಲ್ ರೈತ ಹೊಳೆಸಿರಿಗೆರೆ</strong></p>.<p> ಹೊಸ ಸಸಿ ಹಾಕಲು ಹೆಕ್ಟೇರ್ಗೆ ₹ 35000 ಸಹಾಯಧನ ಹೊಳೆಸಿರಿಗೆರೆ ಭಾಗದಲ್ಲಿ ತೆಂಗಿನಬೆಳೆಗೆ ನುಸಿ ರೋಗ ಕಾಡುತ್ತಿದೆ. ಈ ಬಗ್ಗೆ ರೈತರಿಗೆ ತಿಳಿವಳಿಕೆ ನೀಡಲಾಗಿದೆ. ರೋಗಪೀಡಿತ ಮರ ಕಡಿಸಿ ಹೊಸದಾಗಿ ಸಸಿ ನೆಡುವ ರೈತರಿಗೆ ಒಂದು ಹೆಕ್ಟೇರ್ ಪ್ರದೇಶಕ್ಕೆ ತೆಂಗು ಅಭಿವೃದ್ಧಿ ಮಂಡಳಿಯಿಂದ ₹ 35000 ಸಹಾಯಧನ ನೀಡುವ ಯೋಜನೆ ಇದೆ. ಈ ಬಗ್ಗೆ ರೈತರು ಮಾಹಿತಿ ಪಡೆಯಬೇಕು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್ ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ</strong>: ‘ನಮ್ಮಜ್ಜ ನೆಟ್ಟ ಗಿಡಗಳನ್ನು ಕತ್ತರಿಸುವಾಗ ಕಣ್ಣಲ್ಲಿ ನೀರು ಬಂತು. ಮನೆಯಲ್ಲಿ ನಮ್ಮ ತಂದೆ, ತಾಯಿ, ಮಕ್ಕಳ ಮನಸ್ಸು ಭಾರವಾಗಿತ್ತು. ಏನು ಮಾಡೋದು? ನುಸಿ ಪೀಡೆಗೆ ಹೆದರಿ ಅನಿವಾರ್ಯವಾಗಿ ನಮ್ಮನ್ನು ಸಾಕಿದ ಗಿಡಗಳನ್ನೇ ಕತ್ತರಿಸಬೇಕಾಯಿತು...’</p>.<p>ತಮ್ಮ ಜಮೀನಿನಲ್ಲಿದ್ದ 220 ತೆಂಗಿನ ಮರಗಳ ಪೈಕಿ 100 ಗಿಡಗಳನ್ನು ಕೆಲ ದಿನಗಳ ಹಿಂದೆ ಕಡಿಸಿದ ತಾಲ್ಲೂಕಿನ ಹೊಳೆಸಿರಿಗೆರೆಯ ರೈತ ಎಂ.ಎಚ್. ಪಟೇಲ್ ಅವರ ಈ ಮಾತು ಸದ್ಯದ ತೆಂಗಿನ ಬೆಳೆಯ ದುಃಸ್ಥಿತಿಯನ್ನು ಬಿಂಬಿಸುತ್ತದೆ.</p>.<p>‘ಕಲ್ಪವೃಕ್ಷದ ಕಣಜ’ ಎಂಬ ಖ್ಯಾತಿಯ ಹೊಳೆಸಿರಿಗೆರೆಯಲ್ಲಿ ಅವರಷ್ಟೇ ಅಲ್ಲ, ಅವರಂತೆಯೇ ಇನ್ನೂ ಹಲವು ರೈತರು ತೆಂಗಿನ ಮರಗಳನ್ನು ಕತ್ತರಿಸಿದ್ದಾರೆ.</p>.<p>ರೈತರಾದ ಮಾಗೋಡು ರಾಜಣ್ಣ 100 ಮರ, ಮಾಗನೂರು ಶ್ರೀನಿವಾಸ್ ಅವರು 46 ಮರ ಸೇರಿದಂತೆ ಹತ್ತಾರು ರೈತರು ಇದುವರೆಗೆ ಒಟ್ಟು 500ಕ್ಕೂ ಹೆಚ್ಚು ತೆಂಗಿನ ಮರಗಳನ್ನು ತೆಗೆಯಿಸಿದ್ದಾರೆ.</p>.<p><strong>ನುಸಿ ರೋಗ:</strong></p>.<p>ತಾಲ್ಲೂಕಿನಲ್ಲಿ ಹೊಳೆಸಿರಿಗೆರೆ ತೆಂಗಿನ ಬೆಳೆಗೆ ಪ್ರಸಿದ್ಧಿ. ಕೆಲವು ವರ್ಷಗಳಿಂದ ಈ ಭಾಗದ ತೆಂಗಿನ ತೋಟಗಳಿಗೆ ಹಬ್ಬಿದ ನುಸಿ ಪೀಡೆಯು ಮರದಲ್ಲಿ ತೆಂಗಿನ ಹರಳು ಕಟ್ಟಲೂ ಅವಕಾಶ ನೀಡುತ್ತಿಲ್ಲ. ಹಸಿರು ಗರಿಗಳು ಕಪ್ಪಾಗಿ, ಶಕ್ತಿಹೀನವಾಗಿ ಮುರಿದು ಬೀಳುತ್ತಿವೆ.</p>.<p>ತಮ್ಮ ಮನೆಯಲ್ಲಿ ಬಳಸುವುದಲ್ಲದೆ ಸಂಬಂಧಿಕರ ಮನೆಗೂ ತೆಂಗಿನಕಾಯಿ ಕಳಿಸಿಕೊಡುತ್ತಿದ್ದ ಗ್ರಾಮದ ಹಲವು ರೈತರು ಈಗ ತಮ್ಮ ಮನೆಯ ನಿತ್ಯ ಬಳಕೆಗೂ ತೆಂಗಿನಕಾಯಿಯನ್ನು ಅಂಗಡಿಯಿಂದ ಖರೀದಿಸಬೇಕಾಗಿದೆ. ಇದು ನುಸಿ ರೋಗದ ಭಯಾನಕತೆ ತೆರೆದಿಡುತ್ತದೆ.</p>.<p>ಸದ್ಯಕ್ಕೆ ಗ್ರಾಮದಲ್ಲಿ ಒಂದೂವರೆ ತಿಂಗಳಿಂದ ತೆಂಗಿನ ಮರಗಳನ್ನು ಕತ್ತರಿಸುವುದು ಸಾಮಾನ್ಯ ಎಂಬಂತಾಗಿದೆ. ತಮಿಳುನಾಡಿನ ಫ್ಲೈವುಡ್ ಕಾರ್ಖಾನೆಯವರು ಮರಗಳನ್ನು ಕತ್ತರಿಸಿ ಲಾರಿಯಲ್ಲಿ ಸಾಗಿಸುತ್ತಿದ್ದಾರೆ. ಒಂದು ಗಿಡ ಕತ್ತರಿಸಿ ಸಾಗಿಸಲು ರೈತರೇ ₹ 200 ಪಾವತಿಸುತ್ತಿದ್ದಾರೆ.</p>.<p>ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ, ಈ ಗ್ರಾಮದ ಕಲ್ಪವೃಕ್ಷ ಬೆಳೆಗೆ ಕಾಡುತ್ತಿರುವ ನುಸಿ ರೋಗದಿಂದ ಮುಕ್ತಿ ದೊರಕಿಸಬೇಕಾಗಿದೆ ಎನ್ನುತ್ತಾರೆ ರೈತರು.</p>.<p>ಅಡಿಕೆ ಬೆಳೆ ವಾರ್ಷಿಕವಾಗಿ ಉತ್ತಮ ಆದಾಯ ಕೊಡುತ್ತದೆ ಎಂಬ ಭಾವನೆ ಸಾಮಾನ್ಯವಾಗಿದೆ. ತೆಂಗೂ ಅಷ್ಟೇ ಆದಾಯ ಕೊಡುವ ಬೆಳೆ. ಆದರೆ, ಈಗ ನುಸಿ ರೋಗದಿಮದ ರೈತರು ಕಂಗಾಲಾಗಿದ್ದಾರೆ ಎಂದು ರೈತ ಕುಂದೂರು ಮಂಜಪ್ಪ ಬೇಸರಿಸಿದರು.</p>.<p><strong>ರೋಗಪೀಡಿತ ಮರಗಳನ್ನು ತೆಗೆಯಿಸಿದ್ದೇನೆ. ಮತ್ತೆ ತೆಂಗಿನ ಸಸಿ ನೆಡುತ್ತೇನೆ. ಉತ್ತಮ ಸಸಿಗಳಿಗೆ ಹುಡುಕಾಡುತ್ತಿದ್ದೇನೆ </strong></p><p><strong>-ಎಂ.ಎಚ್. ಪಟೇಲ್ ರೈತ ಹೊಳೆಸಿರಿಗೆರೆ</strong></p>.<p> ಹೊಸ ಸಸಿ ಹಾಕಲು ಹೆಕ್ಟೇರ್ಗೆ ₹ 35000 ಸಹಾಯಧನ ಹೊಳೆಸಿರಿಗೆರೆ ಭಾಗದಲ್ಲಿ ತೆಂಗಿನಬೆಳೆಗೆ ನುಸಿ ರೋಗ ಕಾಡುತ್ತಿದೆ. ಈ ಬಗ್ಗೆ ರೈತರಿಗೆ ತಿಳಿವಳಿಕೆ ನೀಡಲಾಗಿದೆ. ರೋಗಪೀಡಿತ ಮರ ಕಡಿಸಿ ಹೊಸದಾಗಿ ಸಸಿ ನೆಡುವ ರೈತರಿಗೆ ಒಂದು ಹೆಕ್ಟೇರ್ ಪ್ರದೇಶಕ್ಕೆ ತೆಂಗು ಅಭಿವೃದ್ಧಿ ಮಂಡಳಿಯಿಂದ ₹ 35000 ಸಹಾಯಧನ ನೀಡುವ ಯೋಜನೆ ಇದೆ. ಈ ಬಗ್ಗೆ ರೈತರು ಮಾಹಿತಿ ಪಡೆಯಬೇಕು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್ ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>