ಬಿಐಇಟಿ ಮೈದಾನದಲ್ಲಿ ‘ದಾವಣಗೆರೆ ಡಾನ್ಸ್’ ಹಾಗೂ ಚಿಕ್ಕಮಗಳೂರು ಜಿಲ್ಲೆಯ ತಂಡದ ನಡುವೆ ಪಂದ್ಯ ನಡೆಯುತ್ತಿದ್ದಾಗ ಮಧ್ಯಾಹ್ನ 2.30ರ ವೇಳೆಗೆ ಏಕಾಏಕಿ ಹೆಜ್ಜೇನು ದಾಳಿ ಮಾಡಿದೆ. ಆಟಗಾರರು, ಅಂಪೈರ್ಗಳ ಮೇಲೂ ದಾಳಿ ಮಾಡಿದೆ. ಹಲವರು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಆದರೆ, ಡಾ.ಸುರೇಶ್ ಅವರನ್ನು ಮುತ್ತಿಕ್ಕಿದ 100ಕ್ಕೂ ಹೆಚ್ಚು ಹುಳುಗಳು ಅಂಬುಗಳನ್ನು ಬಿಟ್ಟಿವೆ. ಜೇನು ಹುಳುಗಳಿಂದ ಅವರನ್ನು ರಕ್ಷಿಸಿ ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು.