ಆಸ್ಪತ್ರೆ ಆವರಣದಲ್ಲಿ ತಾಲ್ಲೂಕು ವೈದ್ಯಾಧಿಕಾರಿಗಳ ಕೊಠಡಿ, ಜನೌಷಧಿ ಕೇಂದ್ರ, ಹೋಟೆಲ್ ಇವೆ. ಇವುಗಳ ಮುಂದೆಯೇ ಚರಂಡಿ ಹಾಗೂಮಳೆ ನೀರು ನಿಂತು ಹೊಂಡಮಯ ವಾತಾವರಣ ನಿರ್ಮಾಣವಾಗುತ್ತದೆ.ಇದರಿಂದ ಸ್ಥಳೀಯರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಇದೇ ರಸ್ತೆಯಲ್ಲಿ ನಿತ್ಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಓಡಾಡಿದರೂ ಇದು ತಮಗೆ ಸಂಬಂಧವೇ ಇಲ್ಲವೇನೊ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಆಸ್ಪತ್ರೆಗೆ ಕಾಂಪೌಂಡ್ ಇಲ್ಲದ ಕಾರಣ ಒಳಗಡೆ ಪಾಳು ಬಿದ್ದಿರುವ ಕಟ್ಟಡ ಹಂದಿ ಹಾಗೂ ನಾಯಿಗಳಿಗೆ ಆಶ್ರಯ ತಾಣವಾದಂತಾಗಿದೆ.