ವಯಸ್ಸಾದವರು ಹೆಚ್ಚಾಗಿ ಸುಸ್ತು ಎಂದು ಹೇಳಿಕೊಂಡು ಚಿಕಿತ್ಸೆಗೆ ಬರುತ್ತಾರೆ. ಅದಕ್ಕೆ ಕಾರಣ ಡಿಹೈಡ್ರೇಶನ್. ಇದರಿಂದ ವಾಂತಿ, ಭೇದಿ, ಜ್ವರ ಹೆಚ್ಚಾಗುವ ಅಪಾಯಗಳೂ ಇವೆ. ಹೆಚ್ಚಾಗಿ ಶುದ್ಧ ನೀರು, ಎಳನೀರು ಕುಡಿಯಬೇಕು. ಹೊಲ ಗದ್ದೆಗಳಲ್ಲಿ ಕೆಲಸ ಮಾಡುವವರು, ಕಟ್ಟಡ ಕಾರ್ಮಿಕರೂ ಹೆಚ್ಚಾಗಿ ನೀರು ಕುಡಿಯಬೇಕು. ಇಲ್ಲದಿದ್ದರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ವೈದ್ಯಾಧಿಕಾರಿ ಡಾ. ಚಂದ್ರಪ್ಪ ಸಲಹೆ ನೀಡಿದರು.