‘ಜಯದೇವ ಶ್ರೀ’ ಹಾಗೂ ‘ಶೂನ್ಯಪೀಠ ಅಲ್ಲಮ ಪ್ರಭು’ ಪ್ರಶಸ್ತಿಗಳು ತಲಾ ₹ 50,000, ಚನ್ನಬಸವ ಹಾಗೂ ಅಕ್ಕನಾಗಮ್ಮ ಪ್ರಶಸ್ತಿಗಳು ತಲಾ ₹ 25,000 ನಗದು ಹಾಗೂ ಫಲಕ ಒಳಗೊಂಡಿರುತ್ತವೆ. ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಜುಲೈ
12ರಂದು ದಾವಣಗೆರೆಯಲ್ಲಿ ನಡೆಯುವ ಸಾಧಕರ ಸಮಾವೇಶದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿ ಪ್ರದಾನ ಮಾಡುವರು ಎಂದು ಹೇಳಿದರು.