<p><strong>ಮಲೇಬೆನ್ನೂರು</strong>: ಸಮೀಪದ ಜಿಗಳಿ ಗ್ರಾಮದ ರಂಗನಾಥ ಸ್ವಾಮಿ ರಥೋತ್ಸವ ಸೋಮವಾರ ಬ್ರಾಹ್ಮೀ ಮುಹೂರ್ತದಲ್ಲಿ ಚಳಿಗಾಳಿ ಹಿತಾನುಭವದ ನಡುವೆ ವೈಭವದಿಂದ ನಡೆಯಿತು.</p>.<p>ಸಾಂಪ್ರದಾಯಿಕ ಪೂಜಾವಿಧಾನಗಳ ನಂತರ, ಉತ್ಸವಮೂರ್ತಿ ಗ್ರಾಮ ಪ್ರದಕ್ಷಿಣೆ ನಂತರ ರಥಾರೋಹಣವಾಯಿತು.</p>.<p>ಗಣೇಶಪೂಜೆ, ಬಲಿದಾನ, ಚಕ್ರಪೂಜೆ ಮಾಡಿದ ನಂತರ ರಥವನ್ನು ‘ರಂಗನಾಥ ಸ್ವಾಮಿ ಗೋವಿಂದ’ ಎಂದು ಉದ್ಘೋಷ ಕೂಗುತ್ತ ಭಕ್ತ ಸಮೂಹ ರಥ ಎಳೆದು ಭಕ್ತಿ ಸಮರ್ಪಣೆ ಮಾಡಿತು.</p>.<p>ಸಂಪ್ರದಾಯದ ಪ್ರಕಾರ ಗಜ ಉತ್ಸವ, ಶಸ್ತ್ರ ಹಾಕುವ ಆಚರಣೆಗಳನ್ನು ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಯಲವಟ್ಟಿ, ಗುಡ್ಡದ ಬೇವಿನಹಳ್ಳಿ ಆಂಜನೇಯ, ಸ್ಥಳೀಯ ಬೀರಲಿಂಗೇಶ್ವರ ಉತ್ಸವಮೂರ್ತಿ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದವು. ರಥವನ್ನು ಬಣ್ಣಬಣ್ಣದ ಪಟ, ವಿವಿಧ ಹೂವಿನಿಂದ ಅಲಂಕರಿಸಲಾಗಿತ್ತು. ಮುಖ್ಯವೃತ್ತಕ್ಕೆ ವಿದ್ಯುತ್ ದೀಪಾಲಂಕಾರ ಮಾಡಿದ್ದರು.</p>.<p>ಮಂಗಳವಾದ್ಯ, ಡೊಳ್ಳು, ನಾಸಿಕ್ ಡೋಲು, ಕಹಳೆ ನಿನಾದ, ದಾಸ ಸಮುದಾಯದ ಜಾಗಟೆ ಮೇಳ, ಪುರವಂತರ ವೀರಭದ್ರದೇವರ ಕುಣಿತ, ಗೋರಪ್ಪ ಗೋರಮ್ಮ, ಜಾನಪದ ಕಲಾತಂಡ, ಉತ್ಸವಕ್ಕೆ ಮೆರಗು ತಂದಿದ್ದವು.</p>.<p>ಜವುಳ, ಹರಕೆ, ಮುದ್ರಾಧಾರಣೆ ಮಾಡಿದರು. ಗೋಧೂಳಿ ಸಮಯದಲ್ಲಿ ಓಕುಳಿಯಾಟ ನಡೆಯಿತು. ಗ್ರಾಮದ ಮುಖಂಡರು, ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು. ಅನ್ನ ಸಂತರ್ಪಣೆ ನಡೆಯಿತು. ಗ್ರಾಮ ಪಂಚಾಯಿತಿಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು</strong>: ಸಮೀಪದ ಜಿಗಳಿ ಗ್ರಾಮದ ರಂಗನಾಥ ಸ್ವಾಮಿ ರಥೋತ್ಸವ ಸೋಮವಾರ ಬ್ರಾಹ್ಮೀ ಮುಹೂರ್ತದಲ್ಲಿ ಚಳಿಗಾಳಿ ಹಿತಾನುಭವದ ನಡುವೆ ವೈಭವದಿಂದ ನಡೆಯಿತು.</p>.<p>ಸಾಂಪ್ರದಾಯಿಕ ಪೂಜಾವಿಧಾನಗಳ ನಂತರ, ಉತ್ಸವಮೂರ್ತಿ ಗ್ರಾಮ ಪ್ರದಕ್ಷಿಣೆ ನಂತರ ರಥಾರೋಹಣವಾಯಿತು.</p>.<p>ಗಣೇಶಪೂಜೆ, ಬಲಿದಾನ, ಚಕ್ರಪೂಜೆ ಮಾಡಿದ ನಂತರ ರಥವನ್ನು ‘ರಂಗನಾಥ ಸ್ವಾಮಿ ಗೋವಿಂದ’ ಎಂದು ಉದ್ಘೋಷ ಕೂಗುತ್ತ ಭಕ್ತ ಸಮೂಹ ರಥ ಎಳೆದು ಭಕ್ತಿ ಸಮರ್ಪಣೆ ಮಾಡಿತು.</p>.<p>ಸಂಪ್ರದಾಯದ ಪ್ರಕಾರ ಗಜ ಉತ್ಸವ, ಶಸ್ತ್ರ ಹಾಕುವ ಆಚರಣೆಗಳನ್ನು ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಯಲವಟ್ಟಿ, ಗುಡ್ಡದ ಬೇವಿನಹಳ್ಳಿ ಆಂಜನೇಯ, ಸ್ಥಳೀಯ ಬೀರಲಿಂಗೇಶ್ವರ ಉತ್ಸವಮೂರ್ತಿ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದವು. ರಥವನ್ನು ಬಣ್ಣಬಣ್ಣದ ಪಟ, ವಿವಿಧ ಹೂವಿನಿಂದ ಅಲಂಕರಿಸಲಾಗಿತ್ತು. ಮುಖ್ಯವೃತ್ತಕ್ಕೆ ವಿದ್ಯುತ್ ದೀಪಾಲಂಕಾರ ಮಾಡಿದ್ದರು.</p>.<p>ಮಂಗಳವಾದ್ಯ, ಡೊಳ್ಳು, ನಾಸಿಕ್ ಡೋಲು, ಕಹಳೆ ನಿನಾದ, ದಾಸ ಸಮುದಾಯದ ಜಾಗಟೆ ಮೇಳ, ಪುರವಂತರ ವೀರಭದ್ರದೇವರ ಕುಣಿತ, ಗೋರಪ್ಪ ಗೋರಮ್ಮ, ಜಾನಪದ ಕಲಾತಂಡ, ಉತ್ಸವಕ್ಕೆ ಮೆರಗು ತಂದಿದ್ದವು.</p>.<p>ಜವುಳ, ಹರಕೆ, ಮುದ್ರಾಧಾರಣೆ ಮಾಡಿದರು. ಗೋಧೂಳಿ ಸಮಯದಲ್ಲಿ ಓಕುಳಿಯಾಟ ನಡೆಯಿತು. ಗ್ರಾಮದ ಮುಖಂಡರು, ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು. ಅನ್ನ ಸಂತರ್ಪಣೆ ನಡೆಯಿತು. ಗ್ರಾಮ ಪಂಚಾಯಿತಿಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>