<p><strong>ದಾವಣಗೆರೆ</strong>: ದೇಹಕ್ಕೆ ಹಿತಾನುಭವ ನೀಡುವ ಖಾದಿ ಬಟ್ಟೆ, ನಾಲಿಗೆ ರುಚಿಗೆ ಕರುಕುಲು ತಿಂಡಿ, ಚಿಣ್ಣರ ಆಟಕ್ಕೆ ಚನ್ನಪಟ್ಟಣದ ಗೊಂಬೆ, ಸೌಂದರ್ಯಕ್ಕೆ ಗಿಡಮೂಲಿಕೆಗಳ ತೈಲ, ಆರೋಗ್ಯಕ್ಕೆ ಪಾರಂಪರಿಕ ಔಷಧ..</p>.<p>ಹೀಗೆ ತರಹೇವಾರಿ ಉತ್ಪನ್ನಗಳು ರೇಣುಕ ಮಂದಿರದ ಒಂದೇ ಸೂರಿನಡಿ ಸಿಗುತ್ತಿವೆ. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ 10 ದಿನ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ‘ಖಾದಿ ಸಂಭ್ರಮ’ಕ್ಕೆ ಶುಕ್ರವಾರ ಚಾಲನೆ ಸಿಕ್ಕಿದೆ. ಕಾಶ್ಮೀರ, ಬಿಹಾರ ಸೇರಿ ಹೊರರಾಜ್ಯದ ಉತ್ಪನ್ನಗಳು ಇಲ್ಲಿವೆ.</p>.<p>ಬಿದಿರಿನಿಂದ ತಯಾರಿಸಿದ ಬುಟ್ಟಿ, ಅಲಂಕಾರಿಕ ವಸ್ತುಗಳು ಹಾಗೂ ಮಣ್ಣಿನಿಂದ ಸಿದ್ಧಪಡಿಸಿದ ಉತ್ಪನ್ನಗಳು ವಸ್ತುಪ್ರದರ್ಶನಕ್ಕೆ ಸ್ವಾಗತ ಕೋರುತ್ತವೆ. ಕಣ್ಮನ ಸೆಳೆಯುವ ಬಿದಿರಿನ ಉತ್ಪನ್ನಗಳನ್ನು ಗಮನಿಸುತ್ತ ಮಂದಿರ ಪ್ರವೇಶಿಸಿದರೆ ಖಾದಿ ಲೋಕವೇ ತೆರೆದುಕೊಳ್ಳುತ್ತದೆ.</p>.<p>ದಾವಣಗೆರೆ, ಚಿತ್ರದುರ್ಗ, ಹಾವೇರಿ, ಚಿಕ್ಕಬಳ್ಳಾಪುರ, ಬಾಗಲಕೋಟೆ, ವಿಜಯಪುರ, ತುಮಕೂರು, ಧಾರವಾಡ ಸೇರಿ ರಾಜ್ಯದ ವಿವಿಧೆಡೆಯ ನೇಕಾರರ ಮಳಿಗೆಗೆಳು ಇಲ್ಲಿವೆ. ಸೀರೆ, ಪಂಚೆ, ಟವೆಲ್, ಕರವಸ್ತ್ರ ಸೇರಿದಂತೆ ಹಲವು ಖಾದಿ ಉತ್ಪನ್ನಗಳು ಗಮನ ಸೆಳೆಯುತ್ತವೆ. ಇಳಕಲ್ ಸೀರೆ, ರೇಷ್ಮೆ ಸೀರೆ, ಹತ್ತಿ ಬಟ್ಟೆಗಳ ಅಂಗಡಿಗಳು ಗ್ರಾಹಕರನ್ನು ಹಿಡಿದಿಡುತ್ತಿವೆ.</p>.<p>ಚನ್ನಪಟ್ಟಣದ ಬೊಂಬೆಗಳ ಮಳಿಗೆಯಲ್ಲಿ ಮಕ್ಕಳ ಆಟಿಕೆಗಳು ಆಕರ್ಷಕವಾಗಿವೆ. ಮಕ್ಕಳ ಕಲಿಕೆಗೆ ಪೂಕರವಾದ ಉಪಕರಣಗಳು ಇಲ್ಲಿವೆ. ₹ 50ರಿಂದ ₹ 2,000 ವರೆಗಿನ ಬೆಲೆಯಲ್ಲಿ ಇವು ಲಭ್ಯ ಇವೆ. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಆದಿವಾಸಿಗಳು ತಯಾರಿಸಿದ ಕೇಶ ತೈಲ, ಉತ್ತರ ಕರ್ನಾಟಕದ ರಾಗಿ, ಉದ್ದು, ಸಿರಿಧಾನ್ಯಗಳಿಂದ ಸಿದ್ಧಪಡಿಸಿದ ಹಪ್ಪಳ, ಕಾಂಡಿಮೆಂಟ್ಸ್ಗಳು ಬಾಯಲ್ಲಿ ನೀರೂರಿಸುತ್ತವೆ.</p>.<p>‘ಮಹಾತ್ಮ ಗಾಂಧೀಜಿ ಖಾದಿ ಉತ್ಪನ್ನಗಳಿಗೆ ಉತ್ತೇಜನ ನೀಡಿದರು. ಖಾದಿ ಬಟ್ಟೆ ಬಳಕೆ ಮಾಡುವುದರಿಂದ ನೇಕಾರರ ಬದುಕಿಗೆ ಅನುಕೂಲವಾಗುತ್ತದೆ. ಕೈಮಗ್ಗದ ಈ ಬಟ್ಟೆಗಳಿಗೆ ಮಾರುಕಟ್ಟೆ ಒದಗಿಸುವ ಪ್ರಯತ್ನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿವೆ’ ಎಂದು ವಸ್ತುಪ್ರದರ್ಶನ ಉದ್ಘಾಟಿಸಿದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಬಸನಗೌಡ ತುರುವಿಹಾಳ ಹೇಳಿದರು.</p>.<p>‘ಬೆಂಗಳೂರಿಗೆ ಸೀಮಿತವಾಗಿದ್ದ ಈ ವಸ್ತಪ್ರದರ್ಶನವನ್ನು ರಾಜ್ಯದ ಎಲ್ಲೆಡೆಗೆ ವಿಸ್ತರಿಸಲಾಗಿದೆ. ಐದು ಜಿಲ್ಲೆಯಲ್ಲಿ ಇಂತಹ ವಸ್ತುಪ್ರದರ್ಶನ ನಡೆಸಲಾಗಿದ್ದು, ಹಂತಹಂತವಾಗಿ ರಾಜ್ಯದ ವಿವಿಧ ಸ್ಥಳಗಳಲ್ಲಿ ವಸ್ತುಪ್ರದರ್ಶನ ಆಯೋಜಿಸುವ ಆಲೋಚನೆ ಇದೆ. ಖಾದಿ ಉತ್ಪನ್ನಗಳಿಗೆ ಶೇ 25ರಷ್ಟು ರಿಯಾಯಿತಿ ನೀಡಲಾಗಿದ್ದು, ಯುವಸಮೂಹ ಇತ್ತ ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ದೇಹಕ್ಕೆ ಹಿತಾನುಭವ ನೀಡುವ ಖಾದಿ ಬಟ್ಟೆ, ನಾಲಿಗೆ ರುಚಿಗೆ ಕರುಕುಲು ತಿಂಡಿ, ಚಿಣ್ಣರ ಆಟಕ್ಕೆ ಚನ್ನಪಟ್ಟಣದ ಗೊಂಬೆ, ಸೌಂದರ್ಯಕ್ಕೆ ಗಿಡಮೂಲಿಕೆಗಳ ತೈಲ, ಆರೋಗ್ಯಕ್ಕೆ ಪಾರಂಪರಿಕ ಔಷಧ..</p>.<p>ಹೀಗೆ ತರಹೇವಾರಿ ಉತ್ಪನ್ನಗಳು ರೇಣುಕ ಮಂದಿರದ ಒಂದೇ ಸೂರಿನಡಿ ಸಿಗುತ್ತಿವೆ. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ 10 ದಿನ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ‘ಖಾದಿ ಸಂಭ್ರಮ’ಕ್ಕೆ ಶುಕ್ರವಾರ ಚಾಲನೆ ಸಿಕ್ಕಿದೆ. ಕಾಶ್ಮೀರ, ಬಿಹಾರ ಸೇರಿ ಹೊರರಾಜ್ಯದ ಉತ್ಪನ್ನಗಳು ಇಲ್ಲಿವೆ.</p>.<p>ಬಿದಿರಿನಿಂದ ತಯಾರಿಸಿದ ಬುಟ್ಟಿ, ಅಲಂಕಾರಿಕ ವಸ್ತುಗಳು ಹಾಗೂ ಮಣ್ಣಿನಿಂದ ಸಿದ್ಧಪಡಿಸಿದ ಉತ್ಪನ್ನಗಳು ವಸ್ತುಪ್ರದರ್ಶನಕ್ಕೆ ಸ್ವಾಗತ ಕೋರುತ್ತವೆ. ಕಣ್ಮನ ಸೆಳೆಯುವ ಬಿದಿರಿನ ಉತ್ಪನ್ನಗಳನ್ನು ಗಮನಿಸುತ್ತ ಮಂದಿರ ಪ್ರವೇಶಿಸಿದರೆ ಖಾದಿ ಲೋಕವೇ ತೆರೆದುಕೊಳ್ಳುತ್ತದೆ.</p>.<p>ದಾವಣಗೆರೆ, ಚಿತ್ರದುರ್ಗ, ಹಾವೇರಿ, ಚಿಕ್ಕಬಳ್ಳಾಪುರ, ಬಾಗಲಕೋಟೆ, ವಿಜಯಪುರ, ತುಮಕೂರು, ಧಾರವಾಡ ಸೇರಿ ರಾಜ್ಯದ ವಿವಿಧೆಡೆಯ ನೇಕಾರರ ಮಳಿಗೆಗೆಳು ಇಲ್ಲಿವೆ. ಸೀರೆ, ಪಂಚೆ, ಟವೆಲ್, ಕರವಸ್ತ್ರ ಸೇರಿದಂತೆ ಹಲವು ಖಾದಿ ಉತ್ಪನ್ನಗಳು ಗಮನ ಸೆಳೆಯುತ್ತವೆ. ಇಳಕಲ್ ಸೀರೆ, ರೇಷ್ಮೆ ಸೀರೆ, ಹತ್ತಿ ಬಟ್ಟೆಗಳ ಅಂಗಡಿಗಳು ಗ್ರಾಹಕರನ್ನು ಹಿಡಿದಿಡುತ್ತಿವೆ.</p>.<p>ಚನ್ನಪಟ್ಟಣದ ಬೊಂಬೆಗಳ ಮಳಿಗೆಯಲ್ಲಿ ಮಕ್ಕಳ ಆಟಿಕೆಗಳು ಆಕರ್ಷಕವಾಗಿವೆ. ಮಕ್ಕಳ ಕಲಿಕೆಗೆ ಪೂಕರವಾದ ಉಪಕರಣಗಳು ಇಲ್ಲಿವೆ. ₹ 50ರಿಂದ ₹ 2,000 ವರೆಗಿನ ಬೆಲೆಯಲ್ಲಿ ಇವು ಲಭ್ಯ ಇವೆ. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಆದಿವಾಸಿಗಳು ತಯಾರಿಸಿದ ಕೇಶ ತೈಲ, ಉತ್ತರ ಕರ್ನಾಟಕದ ರಾಗಿ, ಉದ್ದು, ಸಿರಿಧಾನ್ಯಗಳಿಂದ ಸಿದ್ಧಪಡಿಸಿದ ಹಪ್ಪಳ, ಕಾಂಡಿಮೆಂಟ್ಸ್ಗಳು ಬಾಯಲ್ಲಿ ನೀರೂರಿಸುತ್ತವೆ.</p>.<p>‘ಮಹಾತ್ಮ ಗಾಂಧೀಜಿ ಖಾದಿ ಉತ್ಪನ್ನಗಳಿಗೆ ಉತ್ತೇಜನ ನೀಡಿದರು. ಖಾದಿ ಬಟ್ಟೆ ಬಳಕೆ ಮಾಡುವುದರಿಂದ ನೇಕಾರರ ಬದುಕಿಗೆ ಅನುಕೂಲವಾಗುತ್ತದೆ. ಕೈಮಗ್ಗದ ಈ ಬಟ್ಟೆಗಳಿಗೆ ಮಾರುಕಟ್ಟೆ ಒದಗಿಸುವ ಪ್ರಯತ್ನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿವೆ’ ಎಂದು ವಸ್ತುಪ್ರದರ್ಶನ ಉದ್ಘಾಟಿಸಿದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಬಸನಗೌಡ ತುರುವಿಹಾಳ ಹೇಳಿದರು.</p>.<p>‘ಬೆಂಗಳೂರಿಗೆ ಸೀಮಿತವಾಗಿದ್ದ ಈ ವಸ್ತಪ್ರದರ್ಶನವನ್ನು ರಾಜ್ಯದ ಎಲ್ಲೆಡೆಗೆ ವಿಸ್ತರಿಸಲಾಗಿದೆ. ಐದು ಜಿಲ್ಲೆಯಲ್ಲಿ ಇಂತಹ ವಸ್ತುಪ್ರದರ್ಶನ ನಡೆಸಲಾಗಿದ್ದು, ಹಂತಹಂತವಾಗಿ ರಾಜ್ಯದ ವಿವಿಧ ಸ್ಥಳಗಳಲ್ಲಿ ವಸ್ತುಪ್ರದರ್ಶನ ಆಯೋಜಿಸುವ ಆಲೋಚನೆ ಇದೆ. ಖಾದಿ ಉತ್ಪನ್ನಗಳಿಗೆ ಶೇ 25ರಷ್ಟು ರಿಯಾಯಿತಿ ನೀಡಲಾಗಿದ್ದು, ಯುವಸಮೂಹ ಇತ್ತ ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>