ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ವಿಪ್ಲವಗಳಾಗಲಿವೆ: ಸ್ವಾಮೀಜಿ

Last Updated 23 ನವೆಂಬರ್ 2020, 20:56 IST
ಅಕ್ಷರ ಗಾತ್ರ

ದಾವಣಗೆರೆ: ‘ಗ್ರಹಣದ ಪರಿಣಾಮ ಜಗತ್ತಿನಾದ್ಯಂತ ರಾಜಕೀಯ ವಿಪ್ಲವ ಆಗಲಿದೆ. ಅಮೆರಿಕದಲ್ಲಿ ಆಯಿತು. ಜಗ ತ್ತಿನ ಬೇರೆ ಬೇರೆ ದೇಶಗಳಲ್ಲಿ ಆಗುತ್ತಲಿದೆ. ಭಾರತದಲ್ಲಿಯೂ ಆಗಲಿದೆ’ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.

ನಗರದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ‘ಒಬ್ಬೊ ಬ್ಬರ ಬಗ್ಗೆ ನಿರ್ದಿಷ್ಟವಾಗಿ ಹೇಳು ವುದಿಲ್ಲ. ಆದರೆ, ಮುಂದಿನ 2 ತಿಂಗಳ ಕಾಲ ವಿಪ್ಲವ ಆಗುವುದು ನಿಜ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

‘ಸಿರಿವಂತ ಮಗ ಹುಟ್ಟಿ ಆಳುವನು ಮುನಿಪುರವ. ಯುದ್ಧವಿಲ್ಲದ ಮಣಿಯೇ ಪುರವೆಲ್ಲ ಕೂಡಾದೀತು ಎಂದು ಹಿಂದೆಯೇ ಹೇಳಿದ್ದೆ. ಮುನಿಪುರ ಅಂದರೆ ಅಮೆರಿಕ. ಅಲ್ಲಿ ಮೊನ್ನೆ ಹೋದನಲ್ಲ ಅವನ ಬಗ್ಗೆ ಹೇಳಿದ್ದು’ ಎಂದು ಟ್ರಂಪ್‌ ಬಗ್ಗೆ ತಿಳಿಸಿದರು.

‘ಕೊರೊನಾ ಹೊಸ ಕಾಯಿಲೆ ಅಲ್ಲ. ಗಂಟಲು, ಶ್ವಾಸಕೋಶ ಕಾಯಿಲೆಗಳು ಹಿಂದೆಯೇ ಇದ್ದವು. ಸ್ವಚ್ಛತೆಯ ಕೊರತೆಯಿಂದ ಈ ಕಾಯಿಲೆ ಬರುತ್ತದೆ. ತಿಳಿವಳಿಕೆ, ಜ್ಞಾನ, ಬುದ್ಧಿ ಇರುವ ಮನುಷ್ಯ ಅಜ್ಞಾನದ ದಾರಿ ಹಿಡಿದಾಗ ಕಾಯಿಲೆಗಳು ಬರುತ್ತವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT