<p><strong>ದಾವಣಗೆರೆ:</strong> ‘ಗ್ರಹಣದ ಪರಿಣಾಮ ಜಗತ್ತಿನಾದ್ಯಂತ ರಾಜಕೀಯ ವಿಪ್ಲವ ಆಗಲಿದೆ. ಅಮೆರಿಕದಲ್ಲಿ ಆಯಿತು. ಜಗ ತ್ತಿನ ಬೇರೆ ಬೇರೆ ದೇಶಗಳಲ್ಲಿ ಆಗುತ್ತಲಿದೆ. ಭಾರತದಲ್ಲಿಯೂ ಆಗಲಿದೆ’ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.</p>.<p>ನಗರದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ‘ಒಬ್ಬೊ ಬ್ಬರ ಬಗ್ಗೆ ನಿರ್ದಿಷ್ಟವಾಗಿ ಹೇಳು ವುದಿಲ್ಲ. ಆದರೆ, ಮುಂದಿನ 2 ತಿಂಗಳ ಕಾಲ ವಿಪ್ಲವ ಆಗುವುದು ನಿಜ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.</p>.<p>‘ಸಿರಿವಂತ ಮಗ ಹುಟ್ಟಿ ಆಳುವನು ಮುನಿಪುರವ. ಯುದ್ಧವಿಲ್ಲದ ಮಣಿಯೇ ಪುರವೆಲ್ಲ ಕೂಡಾದೀತು ಎಂದು ಹಿಂದೆಯೇ ಹೇಳಿದ್ದೆ. ಮುನಿಪುರ ಅಂದರೆ ಅಮೆರಿಕ. ಅಲ್ಲಿ ಮೊನ್ನೆ ಹೋದನಲ್ಲ ಅವನ ಬಗ್ಗೆ ಹೇಳಿದ್ದು’ ಎಂದು ಟ್ರಂಪ್ ಬಗ್ಗೆ ತಿಳಿಸಿದರು.</p>.<p>‘ಕೊರೊನಾ ಹೊಸ ಕಾಯಿಲೆ ಅಲ್ಲ. ಗಂಟಲು, ಶ್ವಾಸಕೋಶ ಕಾಯಿಲೆಗಳು ಹಿಂದೆಯೇ ಇದ್ದವು. ಸ್ವಚ್ಛತೆಯ ಕೊರತೆಯಿಂದ ಈ ಕಾಯಿಲೆ ಬರುತ್ತದೆ. ತಿಳಿವಳಿಕೆ, ಜ್ಞಾನ, ಬುದ್ಧಿ ಇರುವ ಮನುಷ್ಯ ಅಜ್ಞಾನದ ದಾರಿ ಹಿಡಿದಾಗ ಕಾಯಿಲೆಗಳು ಬರುತ್ತವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ‘ಗ್ರಹಣದ ಪರಿಣಾಮ ಜಗತ್ತಿನಾದ್ಯಂತ ರಾಜಕೀಯ ವಿಪ್ಲವ ಆಗಲಿದೆ. ಅಮೆರಿಕದಲ್ಲಿ ಆಯಿತು. ಜಗ ತ್ತಿನ ಬೇರೆ ಬೇರೆ ದೇಶಗಳಲ್ಲಿ ಆಗುತ್ತಲಿದೆ. ಭಾರತದಲ್ಲಿಯೂ ಆಗಲಿದೆ’ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.</p>.<p>ನಗರದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ‘ಒಬ್ಬೊ ಬ್ಬರ ಬಗ್ಗೆ ನಿರ್ದಿಷ್ಟವಾಗಿ ಹೇಳು ವುದಿಲ್ಲ. ಆದರೆ, ಮುಂದಿನ 2 ತಿಂಗಳ ಕಾಲ ವಿಪ್ಲವ ಆಗುವುದು ನಿಜ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.</p>.<p>‘ಸಿರಿವಂತ ಮಗ ಹುಟ್ಟಿ ಆಳುವನು ಮುನಿಪುರವ. ಯುದ್ಧವಿಲ್ಲದ ಮಣಿಯೇ ಪುರವೆಲ್ಲ ಕೂಡಾದೀತು ಎಂದು ಹಿಂದೆಯೇ ಹೇಳಿದ್ದೆ. ಮುನಿಪುರ ಅಂದರೆ ಅಮೆರಿಕ. ಅಲ್ಲಿ ಮೊನ್ನೆ ಹೋದನಲ್ಲ ಅವನ ಬಗ್ಗೆ ಹೇಳಿದ್ದು’ ಎಂದು ಟ್ರಂಪ್ ಬಗ್ಗೆ ತಿಳಿಸಿದರು.</p>.<p>‘ಕೊರೊನಾ ಹೊಸ ಕಾಯಿಲೆ ಅಲ್ಲ. ಗಂಟಲು, ಶ್ವಾಸಕೋಶ ಕಾಯಿಲೆಗಳು ಹಿಂದೆಯೇ ಇದ್ದವು. ಸ್ವಚ್ಛತೆಯ ಕೊರತೆಯಿಂದ ಈ ಕಾಯಿಲೆ ಬರುತ್ತದೆ. ತಿಳಿವಳಿಕೆ, ಜ್ಞಾನ, ಬುದ್ಧಿ ಇರುವ ಮನುಷ್ಯ ಅಜ್ಞಾನದ ದಾರಿ ಹಿಡಿದಾಗ ಕಾಯಿಲೆಗಳು ಬರುತ್ತವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>