ಕುಷ್ಠರೋಗ ಬಂದರೆ ಊರಿಂದ ಹೊರಹಾಕುವ ಕಾಲವೊಂದಿತ್ತು. ಅದಾದ ಬಳಿಕ ಮನೆಯಿಂದ ಹೊರಹಾಕದೇ ಇದ್ದರೂ ಹೊರಗೆ ತಿಳಿಸದೇ ಗುಪ್ತವಾಗಿ ಇಡುವ ಮನಃಸ್ಥಿತಿ ಇತ್ತು. ಈಗ ಅವರಾಗಿಯೇ ಹೇಳದೇ ಇದ್ದರೂ ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದಾಗ ಮಾಹಿತಿ ನೀಡುತ್ತಿದ್ದಾರೆ. ಮುಂದೆ ವೈದ್ಯಕೀಯ ಸಿಬ್ಬಂದಿ ಮನೆಮನೆಗೆ ಬರುವ ಬದಲು, ರೋಗದ ಲಕ್ಷಣ ಕಂಡ ತಕ್ಷಣ ಜನರೇ ಆಸ್ಪತ್ರೆಗೆ ಬರುವಂತಾಗಬೇಕು. ಆಗ ಕುಷ್ಠರೋಗವನ್ನು ಬೇರುಸಹಿತ ಕಿತ್ತು ಹಾಕಲು ಸಾಧ್ಯ.