<p><strong>ದಾವಣಗೆರೆ</strong>: ಕನ್ನಡಿಗರ ಪ್ರಾತಿನಿಧ್ಯ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸದಸ್ಯತ್ವ ಶುಲ್ಕ ಮತ್ತು ಕನ್ನಡ ನುಡಿ ಮಾಸಿಕ ಪತ್ರಿಕೆಯ ಶುಲ್ಕವನ್ನು ₹ 1 ಸಾವಿರಕ್ಕೆ ಏರಿಸಿರುವುದು ಸರಿಯಲ್ಲಿ ₹ 250ಕ್ಕೆ ಇಳಿಸಬೇಕು ಎಂದು ಯುವ ಸಾಹಿತಿಗಳು ಒತ್ತಾಯಿಸಿದ್ದಾರೆ.</p>.<p>ಕನ್ನಡ ನೆಲ, ಜಲ, ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಆಶಯಗಳೊಂದಿಗೆ 1915ರಲ್ಲಿ ಆರಂಭಗೊಂಡಿರುವ ಈ ಸಂಸ್ಥೆಯ ಸದಸ್ಯರ ಸಂಖ್ಯೆ ಕೇವಲ 3.10 ಲಕ್ಷ ಇದೆ. ಈಗ ಸದಸ್ಯತ್ವ ಶುಲ್ಕ ಏರಿಸಿದರೆ ಈ ಪ್ರಮಾಣ ಏರುವ ಸಾಧ್ಯತೆ ಇಲ್ಲ ಎಂಬುದು ಅವರ ಒತ್ತಾಯಕ್ಕೆ ಕಾರಣವಾಗಿದೆ.</p>.<p>ಕರುನಾಡಿನಲ್ಲಿ ಏಳು ಕೋಟಿ ಜನಸಂಖ್ಯೆ ಇದೆ. ಇದರ ಶೇ 10ರಷ್ಟು ಮಂದಿ ಸದಸ್ಯರಾಗಿದ್ದರೂ 70 ಲಕ್ಷ ಮಂದಿ ಪರಿಷತ್ತಿನಲ್ಲಿ ಇರುತ್ತಿದ್ದರು. ಈ ಕೊರತೆಯನ್ನು ನೀಗಿಸಿಕೊಳ್ಳಲು ಇತ್ತೀಚೆಗೆ ಪರಿಷತ್ತಿನ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಎಸ್. ರಂಗಪ್ಪ ನಿರ್ಧರಿಸಿದ್ದಾರೆ. ಸದಸ್ಯತ್ವ ಪ್ರಮಾಣವನ್ನು 50 ಸಾವಿರಕ್ಕೆ ಏರಿಸುವ ಸಂಕಲ್ಪದೊಂದಿಗೆ ಆನ್ಲೈನ್ನಲ್ಲಿ ಸದಸ್ಯತ್ವ ಅಭಿಯಾನ ಆರಂಭಿಸಿದ್ದಾರೆ. ಇದು ಸ್ವಾಗತಾರ್ಹ ವಿಚಾರ. ಆದರೆ ₹ 1000 ನೀಡಿ ಸದಸ್ಯರಾಗಲು ಈ ಕೋವಿಡ್ ಸಂಕಷ್ಟದ ಕಾಲದಲ್ಲಿ ಕನ್ನಡಾಭಿಮಾನಿಗಳು ಹಿಂದು ಮುಂದು ನೋಡುವ ಪರಿಸ್ಥಿತಿ ಇದೆ ಎಂದು ಕನ್ನಡಪರ ಚಿಂತಕ ಎಲ್.ಜಿ. ಮಧುಕುಮಾರ್ ಬಸವಾಪಟ್ಟಣ ವಿವರಿಸಿದ್ದಾರೆ.</p>.<p>ಕನ್ನಡ ಪ್ರೇಮಿಗಳಿಂದ ಹಿಂದೆ ಇದ್ದಷ್ಟೇ ಶುಲ್ಕ ಪಡೆಯಬೇಕು. ಮುದ್ರಣ ಕಾಗದ ಬೆಲೆ ಹೆಚ್ಚಳ, ಅಂಚೆ ವೆಚ್ಚ, ಸಾಗಾಣೆ ವೆಚ್ಚ ಮತ್ತು ಸಿಬ್ಬಂದಿಯ ವೇತನ ಎಂದೆಲ್ಲ ಹೆಚ್ಚುವರಿ ವೆಚ್ಚವನ್ನು ಸರ್ಕಾರದಿಂದ ಭರಿಸಲು ಒತ್ತಾಯಿಸಬೇಕು ಎಂದು ಸಲಹೆ ನೀಡಿದ್ದಾರೆ.</p>.<p>₹ 1000 ಇರುವ ಸದಸ್ಯತ್ವದ ಶುಲ್ಕವನ್ನು ₹ 250ಕ್ಕೆ ಇಳಿಸಿದರೆ ಗ್ರಾಮೀಣ ಭಾಗದ ಸಾಹಿತ್ಯಾಭಿಮಾನಿಗಳಿಗೆ ಅನುಕೂಲ ಆಗಲಿದೆ. ಸಾಹಿತ್ಯ ಕ್ಷೇತ್ರದಲ್ಲಿ ನಿಜವಾಗಿ ಆಸಕ್ತಿ ಇರುವ ಯೋಗ್ಯರು ಕ್ಷೇತ್ರದಲ್ಲಿ ಮುಂದೆ ಬರುತ್ತಾರೆ. ಇಲ್ಲವಾದಲ್ಲಿ ದುಡ್ಡು ಇರುವವರೇ ಪರಿಷತ್ತಿನ ಹಿಡಿತ ಸಾಧಿಸಲಿದ್ದಾರೆ ಎಂಬುದು ಸಾಹಿತ್ಯಾಭಿಮಾನಿ ದಾವಣಗೆರೆಯ ಮಂಜುಳಾ ಪ್ರಸಾದ್ ಅವರ ಅಭಿಪ್ರಾಯವಾಗಿದೆ.</p>.<p>ಈಗಲೇ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತಿಗಳಲ್ಲದವರು ಇದ್ದಾರೆ. ಮುಂದೆ ಪೂರ್ತಿ ಅವರೇ ತುಂಬಿಕೊಂಡರೆ ಕಷ್ಟ. ಅದಕ್ಕಾಗಿ ಶುಲ್ಕ ಇಳಿಸಬೇಕು. ಕನ್ನಡ ಸಾಹಿತಿಗಳು ಪರಿಷತ್ತಿನ ಸದಸ್ಯರಾಗುವಂತೆ ಮಾಡಬೇಕು ಎಂಬುದು ಮಂಜುಳಾ ಅವರ ಆಗ್ರಹವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ಕನ್ನಡಿಗರ ಪ್ರಾತಿನಿಧ್ಯ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸದಸ್ಯತ್ವ ಶುಲ್ಕ ಮತ್ತು ಕನ್ನಡ ನುಡಿ ಮಾಸಿಕ ಪತ್ರಿಕೆಯ ಶುಲ್ಕವನ್ನು ₹ 1 ಸಾವಿರಕ್ಕೆ ಏರಿಸಿರುವುದು ಸರಿಯಲ್ಲಿ ₹ 250ಕ್ಕೆ ಇಳಿಸಬೇಕು ಎಂದು ಯುವ ಸಾಹಿತಿಗಳು ಒತ್ತಾಯಿಸಿದ್ದಾರೆ.</p>.<p>ಕನ್ನಡ ನೆಲ, ಜಲ, ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಆಶಯಗಳೊಂದಿಗೆ 1915ರಲ್ಲಿ ಆರಂಭಗೊಂಡಿರುವ ಈ ಸಂಸ್ಥೆಯ ಸದಸ್ಯರ ಸಂಖ್ಯೆ ಕೇವಲ 3.10 ಲಕ್ಷ ಇದೆ. ಈಗ ಸದಸ್ಯತ್ವ ಶುಲ್ಕ ಏರಿಸಿದರೆ ಈ ಪ್ರಮಾಣ ಏರುವ ಸಾಧ್ಯತೆ ಇಲ್ಲ ಎಂಬುದು ಅವರ ಒತ್ತಾಯಕ್ಕೆ ಕಾರಣವಾಗಿದೆ.</p>.<p>ಕರುನಾಡಿನಲ್ಲಿ ಏಳು ಕೋಟಿ ಜನಸಂಖ್ಯೆ ಇದೆ. ಇದರ ಶೇ 10ರಷ್ಟು ಮಂದಿ ಸದಸ್ಯರಾಗಿದ್ದರೂ 70 ಲಕ್ಷ ಮಂದಿ ಪರಿಷತ್ತಿನಲ್ಲಿ ಇರುತ್ತಿದ್ದರು. ಈ ಕೊರತೆಯನ್ನು ನೀಗಿಸಿಕೊಳ್ಳಲು ಇತ್ತೀಚೆಗೆ ಪರಿಷತ್ತಿನ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಎಸ್. ರಂಗಪ್ಪ ನಿರ್ಧರಿಸಿದ್ದಾರೆ. ಸದಸ್ಯತ್ವ ಪ್ರಮಾಣವನ್ನು 50 ಸಾವಿರಕ್ಕೆ ಏರಿಸುವ ಸಂಕಲ್ಪದೊಂದಿಗೆ ಆನ್ಲೈನ್ನಲ್ಲಿ ಸದಸ್ಯತ್ವ ಅಭಿಯಾನ ಆರಂಭಿಸಿದ್ದಾರೆ. ಇದು ಸ್ವಾಗತಾರ್ಹ ವಿಚಾರ. ಆದರೆ ₹ 1000 ನೀಡಿ ಸದಸ್ಯರಾಗಲು ಈ ಕೋವಿಡ್ ಸಂಕಷ್ಟದ ಕಾಲದಲ್ಲಿ ಕನ್ನಡಾಭಿಮಾನಿಗಳು ಹಿಂದು ಮುಂದು ನೋಡುವ ಪರಿಸ್ಥಿತಿ ಇದೆ ಎಂದು ಕನ್ನಡಪರ ಚಿಂತಕ ಎಲ್.ಜಿ. ಮಧುಕುಮಾರ್ ಬಸವಾಪಟ್ಟಣ ವಿವರಿಸಿದ್ದಾರೆ.</p>.<p>ಕನ್ನಡ ಪ್ರೇಮಿಗಳಿಂದ ಹಿಂದೆ ಇದ್ದಷ್ಟೇ ಶುಲ್ಕ ಪಡೆಯಬೇಕು. ಮುದ್ರಣ ಕಾಗದ ಬೆಲೆ ಹೆಚ್ಚಳ, ಅಂಚೆ ವೆಚ್ಚ, ಸಾಗಾಣೆ ವೆಚ್ಚ ಮತ್ತು ಸಿಬ್ಬಂದಿಯ ವೇತನ ಎಂದೆಲ್ಲ ಹೆಚ್ಚುವರಿ ವೆಚ್ಚವನ್ನು ಸರ್ಕಾರದಿಂದ ಭರಿಸಲು ಒತ್ತಾಯಿಸಬೇಕು ಎಂದು ಸಲಹೆ ನೀಡಿದ್ದಾರೆ.</p>.<p>₹ 1000 ಇರುವ ಸದಸ್ಯತ್ವದ ಶುಲ್ಕವನ್ನು ₹ 250ಕ್ಕೆ ಇಳಿಸಿದರೆ ಗ್ರಾಮೀಣ ಭಾಗದ ಸಾಹಿತ್ಯಾಭಿಮಾನಿಗಳಿಗೆ ಅನುಕೂಲ ಆಗಲಿದೆ. ಸಾಹಿತ್ಯ ಕ್ಷೇತ್ರದಲ್ಲಿ ನಿಜವಾಗಿ ಆಸಕ್ತಿ ಇರುವ ಯೋಗ್ಯರು ಕ್ಷೇತ್ರದಲ್ಲಿ ಮುಂದೆ ಬರುತ್ತಾರೆ. ಇಲ್ಲವಾದಲ್ಲಿ ದುಡ್ಡು ಇರುವವರೇ ಪರಿಷತ್ತಿನ ಹಿಡಿತ ಸಾಧಿಸಲಿದ್ದಾರೆ ಎಂಬುದು ಸಾಹಿತ್ಯಾಭಿಮಾನಿ ದಾವಣಗೆರೆಯ ಮಂಜುಳಾ ಪ್ರಸಾದ್ ಅವರ ಅಭಿಪ್ರಾಯವಾಗಿದೆ.</p>.<p>ಈಗಲೇ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತಿಗಳಲ್ಲದವರು ಇದ್ದಾರೆ. ಮುಂದೆ ಪೂರ್ತಿ ಅವರೇ ತುಂಬಿಕೊಂಡರೆ ಕಷ್ಟ. ಅದಕ್ಕಾಗಿ ಶುಲ್ಕ ಇಳಿಸಬೇಕು. ಕನ್ನಡ ಸಾಹಿತಿಗಳು ಪರಿಷತ್ತಿನ ಸದಸ್ಯರಾಗುವಂತೆ ಮಾಡಬೇಕು ಎಂಬುದು ಮಂಜುಳಾ ಅವರ ಆಗ್ರಹವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>