‘ನಾವು ಸರಕನ್ನು ಖರೀದಿದಾರರು ಹೇಳಿದ ಸ್ಥಳಕ್ಕೆ ತಲುಪಿಸಿದ ಮೇಲೆ ಯಾವುದೇ ಡಿಸ್ಕೌಂಟ್, ಮಾಮೂಲು ವಜಾ ಮಾಡದೇ ಆ ಸರಕು ಸಾಗಿಸಲು ನಿರ್ಧಾರಿತ ಬಾಡಿಗೆ ಸ್ಥಳದಲ್ಲಿ ನೀಡಬೇಕು. ಲಾರಿ ಮಾಲೀಕರ ಹಕ್ಕನ್ನು ಕಸಿದು ಏಜೆಂಟರು ಬಾಡಿಗೆ ನಿಗದಿ ಮಾಡಬಾರದು. ಯಾವುದೇ ತರಹದ ರೀಫಂಡ್ ಪಡೆಯಬಾರದು. ಪಡೆದಿದ್ದು ಗೊತ್ತಾದಲ್ಲಿ ಆ ಟ್ರಾನ್ಸ್ಫೋರ್ಟ್ ಕಚೇರಿಯ ಮೇಲೆ ಪ್ರಕರಣ ದಾಖಲಿಸುವುದರ ಜೊತೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಸಿದರು.