<p><strong>ಮಲೇಬೆನ್ನೂರು: </strong>ಸಮೀಪದ ದೇವರಬೆಳಕೆರೆಯಲ್ಲಿ ಮೈಲಾರ ಲಿಂಗೇಶ್ವರಸ್ವಾಮಿ ರಥೋತ್ಸವ ಶುಕ್ರವಾರ ಗೋದೂಳಿ ಲಗ್ನದಲ್ಲಿ ವೈಭವಯುತವಾಗಿ ಜರುಗಿತು.</p>.<p>ಉತ್ಸವಮೂರ್ತಿ ಗ್ರಾಮ ಪ್ರದಕ್ಷಿಣೆ ಹಾಕಿದ ನಂತರ ರಥಶಾಂತಿ ಮಾಡಲಾಯಿತು. ದೇವಾಲಯ ಸಮಿತಿ ವತಿಯಿಂದ ದೇವರ ಪಟ, ಹೂವಿನಹಾರ, ಧ್ವಜ, ತೆಂಗಿನಕಾಯಿ ಹಾಗೂ ನಿಂಬೆಹಣ್ಣು ಹರಾಜು ಹಾಕಲಾಯಿತು. ಭಕ್ತರು ರಥದ ಗಾಲಿಗೆ ತೆಂಗಿನಕಾಯಿ ಒಡೆದರು. ಉತ್ತುತ್ತಿ, ಬಾಳೆಹಣ್ಣನ್ನು ಕಳಸಕ್ಕೆ ಎಸೆದು ನಮಿಸಿದರು. ಈ ವೇಳೆ ಏಳು ಕೋಟಿ, ಏಳು ಕೋಟಿ, ಏಳು ಕೋಟಿಗೋ ಚಾಂಗಮಲೋ... ಎಂಬ ಉದ್ಘೋಷ ಮುಗಿಲು ಮುಟ್ಟಿತ್ತು.</p>.<p>ಕೊಂಬು ಕಹಳೆ, ಮಂಗಳವಾದ್ಯ, ಡೊಳ್ಳು, ತಮಟೆ, ಜಾಂಚ್ ಮೇಳ, ಭಂಡಾರ ಧರಿಸಿ ಢಮರುಗ ಬಾರಿಸುವ ಗೊರವರು, ಚಾಮರ ಬೀಸುವವರು, ದೀವಟಿಗೆ ಹಿಡಿದ ಭಕ್ತರಿಂದ ಉತ್ಸವದ ಮೆರಗು ಹೆಚ್ಚಿತ್ತು. </p>.<p>ರಥವನ್ನು ಹೂವು, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮುಖ್ಯಬೀದಿ ಹಾಗೂ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕಡ್ಲೆಗೊಂದಿ, ಗುಳದಹಳ್ಳಿ, ಹಳೆ ಊರಿನ ದುರ್ಗಾದೇವಿ ಹಾಗೂ ಬಸವೇಶ್ವರ ದೇವರ ಉತ್ಸವಮೂರ್ತಿ ಇರಿಸಿದ್ದ ಪಲ್ಲಕ್ಕಿಗಳು ಪಾಲ್ಗೊಂಡಿದ್ದವು. ಸುತ್ತಮುತ್ತಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿದ್ದರು.</p>.<p>ದೇವಾಲಯ ಅಕ್ಕಪಕ್ಕ ಹಾಗೂ ರಾಜಬೀದಿಯಲ್ಲಿ ಬಳೆ, ಅರಿಶಿಣ–ಕುಂಕುಮ, ಪೂಜಾ ಸಾಮಗ್ರಿ, ಬಲೂನು, ಆಟಿಕೆ ಸಾಮಾನು, ಸಿಹಿ ತಿಂಡಿ ಅಂಗಡಿಗಳ ಜಾತ್ರೆ ನೆರೆದಿತ್ತು. </p>.<p><strong>ಕಾಲಶಸ್ತ್ರ ಪವಾಡ:</strong> ಮೈಲಾರ ಜಾತ್ರೆ ನಂತರ ‘ರಥೋತ್ಸವ’, ‘ಕಾಲಶಸ್ತ್ರ ಪವಾಡ’ ಕಾರ್ಯಕ್ರಮ ನಡೆಸುವುದು ಸಂಪ್ರದಾಯ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು. ದೇವಾಲಯದ ಆವರಣದಲ್ಲಿ ಫೆ.7ರಂದು ಸಂಜೆ ‘ಕಾಲಶಸ್ತ್ರ ಪವಾಡ’ ಕಾರ್ಯಕ್ರಮ ಏರ್ಪಡಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು: </strong>ಸಮೀಪದ ದೇವರಬೆಳಕೆರೆಯಲ್ಲಿ ಮೈಲಾರ ಲಿಂಗೇಶ್ವರಸ್ವಾಮಿ ರಥೋತ್ಸವ ಶುಕ್ರವಾರ ಗೋದೂಳಿ ಲಗ್ನದಲ್ಲಿ ವೈಭವಯುತವಾಗಿ ಜರುಗಿತು.</p>.<p>ಉತ್ಸವಮೂರ್ತಿ ಗ್ರಾಮ ಪ್ರದಕ್ಷಿಣೆ ಹಾಕಿದ ನಂತರ ರಥಶಾಂತಿ ಮಾಡಲಾಯಿತು. ದೇವಾಲಯ ಸಮಿತಿ ವತಿಯಿಂದ ದೇವರ ಪಟ, ಹೂವಿನಹಾರ, ಧ್ವಜ, ತೆಂಗಿನಕಾಯಿ ಹಾಗೂ ನಿಂಬೆಹಣ್ಣು ಹರಾಜು ಹಾಕಲಾಯಿತು. ಭಕ್ತರು ರಥದ ಗಾಲಿಗೆ ತೆಂಗಿನಕಾಯಿ ಒಡೆದರು. ಉತ್ತುತ್ತಿ, ಬಾಳೆಹಣ್ಣನ್ನು ಕಳಸಕ್ಕೆ ಎಸೆದು ನಮಿಸಿದರು. ಈ ವೇಳೆ ಏಳು ಕೋಟಿ, ಏಳು ಕೋಟಿ, ಏಳು ಕೋಟಿಗೋ ಚಾಂಗಮಲೋ... ಎಂಬ ಉದ್ಘೋಷ ಮುಗಿಲು ಮುಟ್ಟಿತ್ತು.</p>.<p>ಕೊಂಬು ಕಹಳೆ, ಮಂಗಳವಾದ್ಯ, ಡೊಳ್ಳು, ತಮಟೆ, ಜಾಂಚ್ ಮೇಳ, ಭಂಡಾರ ಧರಿಸಿ ಢಮರುಗ ಬಾರಿಸುವ ಗೊರವರು, ಚಾಮರ ಬೀಸುವವರು, ದೀವಟಿಗೆ ಹಿಡಿದ ಭಕ್ತರಿಂದ ಉತ್ಸವದ ಮೆರಗು ಹೆಚ್ಚಿತ್ತು. </p>.<p>ರಥವನ್ನು ಹೂವು, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮುಖ್ಯಬೀದಿ ಹಾಗೂ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕಡ್ಲೆಗೊಂದಿ, ಗುಳದಹಳ್ಳಿ, ಹಳೆ ಊರಿನ ದುರ್ಗಾದೇವಿ ಹಾಗೂ ಬಸವೇಶ್ವರ ದೇವರ ಉತ್ಸವಮೂರ್ತಿ ಇರಿಸಿದ್ದ ಪಲ್ಲಕ್ಕಿಗಳು ಪಾಲ್ಗೊಂಡಿದ್ದವು. ಸುತ್ತಮುತ್ತಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿದ್ದರು.</p>.<p>ದೇವಾಲಯ ಅಕ್ಕಪಕ್ಕ ಹಾಗೂ ರಾಜಬೀದಿಯಲ್ಲಿ ಬಳೆ, ಅರಿಶಿಣ–ಕುಂಕುಮ, ಪೂಜಾ ಸಾಮಗ್ರಿ, ಬಲೂನು, ಆಟಿಕೆ ಸಾಮಾನು, ಸಿಹಿ ತಿಂಡಿ ಅಂಗಡಿಗಳ ಜಾತ್ರೆ ನೆರೆದಿತ್ತು. </p>.<p><strong>ಕಾಲಶಸ್ತ್ರ ಪವಾಡ:</strong> ಮೈಲಾರ ಜಾತ್ರೆ ನಂತರ ‘ರಥೋತ್ಸವ’, ‘ಕಾಲಶಸ್ತ್ರ ಪವಾಡ’ ಕಾರ್ಯಕ್ರಮ ನಡೆಸುವುದು ಸಂಪ್ರದಾಯ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು. ದೇವಾಲಯದ ಆವರಣದಲ್ಲಿ ಫೆ.7ರಂದು ಸಂಜೆ ‘ಕಾಲಶಸ್ತ್ರ ಪವಾಡ’ ಕಾರ್ಯಕ್ರಮ ಏರ್ಪಡಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>