ಕರಿಬಸವೇಶ್ವರ ಗದ್ದುಗೆಯ ಸ್ನಾನಘಟ್ಟ, ಜವಳದ ಕಟ್ಟೆ ನೀರಿನಲ್ಲಿ ಮುಳುಗಿವೆ. ಜಮೀನುಗಳಲ್ಲಿ ಕೆಸರು ತುಂಬಿದ್ದು ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ. ನೀರು ಇಳಿಯಲು ಒಂದು ವಾರವಾದರೂ ಬೇಕು. ಇದರಿಂದ ಕೃಷಿ ಚಟುವಟಿಕೆಗೆ ಹಿನ್ನೆಯಾಗಿದೆ ಎಂದು ನದಿ ಪಾತ್ರದ ರೈತ ಸಣ್ಣ ಸಂಜೀವರೆಡ್ಡಿ ತಿಳಿಸಿದರು. ಜನರು ನದಿಪಾತ್ರಕ್ಕೆ ತೆರಳದಂತೆ ಗ್ರಾಮಾಡಳಿತ ಎಚ್ಚರಿಕೆ ನೀಡಿದೆ. ತಾಲ್ಲೂಕು ಆಡಳಿತ ವಿಕೋಪ ಎದುರಿಸಲು ಸನ್ನದ್ಧವಾಗಿದೆ.