ವಿದ್ಯಾರ್ಥಿಗಳು ಎಷ್ಟೇ ದೊಡ್ಡ ಸಾಧನೆ ಮಾಡಿದರೂ, ಅದರ ಹಿಂದೆ ಶಿಕ್ಷಕರ ‘ಗುರು’ತರ ಜವಾಬ್ದಾರಿ ಇದ್ದೇ ಇರುತ್ತದೆ. ವೈದ್ಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳು ದೇಶ– ವಿದೇಶಗಳಲ್ಲಿ ಬದುಕು ಕಟ್ಟಿಕೊಂಡರೂ, ಶಿಕ್ಷಕರು ಮಾತ್ರ ಕೊನೆಯವರೆಗೂ ಶಾಲೆಗಳಲ್ಲೇ ಉಳಿದುಬಿಡುತ್ತಾರೆ. ಶಿಕ್ಷಕರು ಪಠ್ಯ ಬೋಧನೆಗೆ ಮಾತ್ರ ಸೀಮಿತವಲ್ಲ. ನೈತಿಕ ಮೌಲ್ಯವನ್ನು ತುಂಬುವ, ಶಿಸ್ತನ್ನು ರೂಢಿಸುವ, ಸರಿ ತಪ್ಪುಗಳನ್ನು ತಿಳಿಸುವ ಮೂಲಕ ವಿದ್ಯಾರ್ಥಿಗಳ ಬದುಕಿಗೆ ದಾರಿ ತೋರಿದ್ದಾರೆ. ‘ಮೇಸ್ಟ್ರು’, ‘ಟೀಚರ್’ ಎಂಬುದು ಕೇವಲ ಪದವಲ್ಲ. ಅದೊಂದು ಭಾವ, ಭಕ್ತಿಯೂ ಹೌದು. ‘ಶಿಕ್ಷಕ’ ಎಂಬುದನ್ನು ವೃತ್ತಿ ಎಂದು ಮಾತ್ರ ನೋಡದೇ, ಅದೊಂದು ಸೇವೆ ಎಂದು ಭಾವಿಸಿ ವಿದ್ಯಾರ್ಥಿಸ್ನೇಹಿ ವಾತಾವರಣ ಸೃಷ್ಟಿಸುವ, ಸಾಮಾಜಿಕ ಕಳಕಳಿ ಮೆರೆವ ಹಲವು ಶಿಕ್ಷಕರು ನಮ್ಮ ನಡುವೆ ಇದ್ದಾರೆ. ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಕೆಲವರ ಪರಿಚಯವನ್ನು ಇಲ್ಲಿ ಕಟ್ಟಿಕೊಡಲಾಗಿದೆ.
ದಾವಣಗೆರೆಯ ಶ್ರೀರಾಮ ಬಡಾವಣೆಯಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕಿ ನಾಗವೇಣಿ ಎ.ಎಲ್. ಪ್ರಯೋಗ ನಡೆಸುತ್ತಿರುವುದು