ದೂರು ಪಡೆಯಲು ವಿಳಂಬಕ್ಕೆ ಆಕ್ರೋಶ: ‘ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದ ಲೋಹಿತ್ ಕುಮಾರ್, ಅವಘಡ ಸಂಬಂಧ ದೂರು ನೀಡಲು ಗೋವಿಂದಪುರ ಠಾಣೆಗೆ ಹೋಗಿದ್ದರು. ದೂರು ಪಡೆಯಲು ವಿಳಂಬ ಮಾಡಿದ್ದ ಪೊಲೀಸರು, ಹಲವು ಗಂಟೆಗಳ ಕಾಲ ಠಾಣೆಯಲ್ಲಿ ಕೂರಿಸಿದ್ದರು’ ಎಂದು ತೇಜಸ್ವಿನಿ ದೊಡ್ಡಪ್ಪ ನಾರಾಯಣರಾವ್ ದೂರಿದರು.