<p><strong>ದಾವಣಗೆರೆ</strong>: ‘ನನ್ನ ಮಗಳಿಗೆಕೊರೊನಾ ಸೋಂಕು ಬಂದಿದ್ದು, ಆಕೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಸುಳ್ಳು ಸುದ್ದಿ ಹರಡುತ್ತಿರುವುದಕ್ಕೆ ಬೇಸರವಾಗುತ್ತಿದೆ. ಆಕೆ ಆರೋಗ್ಯವಾಗಿದ್ದಾಳೆ. ಬಹುಶಃ ಎರಡು–ಮೂರು ದಿನಗಳಲ್ಲಿ ಮನೆಗೆ ವಾಪಸಾಗಬಹುದು’ ಎಂದು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಸ್ಪಷ್ಟಪಡಿಸಿದ್ದಾರೆ.</p>.<p>‘ನನ್ನ ಮೊಮ್ಮಗಳು, ಅಮೆರಿಕ ಹಾಗೂ ಲಂಡನ್ನಿಂದ ಬಂದಿರುವ ನನ್ನ ಇಬ್ಬರು ಮಕ್ಕಳು, ನನಗೆ ಹಾಗೂ ಹೆಂಡತಿಗೆ ಕೊರೊನಾ ನೆಗೆಟಿವ್ ಇದೆ ಎಂದು ವರದಿ ಬಂದಿದೆ’ ಎಂದು ಹೋಮ್ ಕ್ವಾರಂಟೈನ್ನಲ್ಲಿರುವ ಸಂಸದರು ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.</p>.<p>‘ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ಮನೆಯಲ್ಲೇ ಇರುವಂತೆ ಕರೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಹೋಮ್ ಕ್ವಾರಂಟೈನ್ನಲ್ಲಿದ್ದೇವೆ. ನೂರಾರು ಜನ ನನಗೆ ದೂರವಾಣಿ ಕರೆ ಮಾಡಿ ಮಗಳು ಚೆನ್ನಾಗಿದ್ದಾಳಾ ಎಂದು ಕೇಳುತ್ತಿದ್ದಾರೆ. ಮಗಳು ಹಾಗೂ ನಮ್ಮ ಕುಟುಂಬದವರೆಲ್ಲರೂ ಆರೋಗ್ಯವಾಗಿದ್ದೇವೆ’ ಎಂದು ತಿಳಿಸಿದ್ದಾರೆ.</p>.<p>‘ನನಗೆ ನಿಮ್ಮೆಲ್ಲರ ಆರೋಗ್ಯದ ಬಗ್ಗೆ ಕಾಳಜಿ ಇದೆ. ಎಲ್ಲರೂ ಮನೆಯಲ್ಲೇ ಇದ್ದು, ದೇಶ ಹಾಗೂ ಕರ್ನಾಟಕದ ರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು. ಏಪ್ರಿಲ್ 14ರ ನಂತರ ನಾವೆಲ್ಲರೂ ಭೇಟಿಯಾಗಿ ಬೇವು–ಬೆಲ್ಲ ಸವಿಯೋಣ. ಎಲ್ಲರೂ ಆರೋಗ್ಯವಾಗಿರೋಣ’ ಎಂದು ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ‘ನನ್ನ ಮಗಳಿಗೆಕೊರೊನಾ ಸೋಂಕು ಬಂದಿದ್ದು, ಆಕೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಸುಳ್ಳು ಸುದ್ದಿ ಹರಡುತ್ತಿರುವುದಕ್ಕೆ ಬೇಸರವಾಗುತ್ತಿದೆ. ಆಕೆ ಆರೋಗ್ಯವಾಗಿದ್ದಾಳೆ. ಬಹುಶಃ ಎರಡು–ಮೂರು ದಿನಗಳಲ್ಲಿ ಮನೆಗೆ ವಾಪಸಾಗಬಹುದು’ ಎಂದು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಸ್ಪಷ್ಟಪಡಿಸಿದ್ದಾರೆ.</p>.<p>‘ನನ್ನ ಮೊಮ್ಮಗಳು, ಅಮೆರಿಕ ಹಾಗೂ ಲಂಡನ್ನಿಂದ ಬಂದಿರುವ ನನ್ನ ಇಬ್ಬರು ಮಕ್ಕಳು, ನನಗೆ ಹಾಗೂ ಹೆಂಡತಿಗೆ ಕೊರೊನಾ ನೆಗೆಟಿವ್ ಇದೆ ಎಂದು ವರದಿ ಬಂದಿದೆ’ ಎಂದು ಹೋಮ್ ಕ್ವಾರಂಟೈನ್ನಲ್ಲಿರುವ ಸಂಸದರು ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.</p>.<p>‘ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ಮನೆಯಲ್ಲೇ ಇರುವಂತೆ ಕರೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಹೋಮ್ ಕ್ವಾರಂಟೈನ್ನಲ್ಲಿದ್ದೇವೆ. ನೂರಾರು ಜನ ನನಗೆ ದೂರವಾಣಿ ಕರೆ ಮಾಡಿ ಮಗಳು ಚೆನ್ನಾಗಿದ್ದಾಳಾ ಎಂದು ಕೇಳುತ್ತಿದ್ದಾರೆ. ಮಗಳು ಹಾಗೂ ನಮ್ಮ ಕುಟುಂಬದವರೆಲ್ಲರೂ ಆರೋಗ್ಯವಾಗಿದ್ದೇವೆ’ ಎಂದು ತಿಳಿಸಿದ್ದಾರೆ.</p>.<p>‘ನನಗೆ ನಿಮ್ಮೆಲ್ಲರ ಆರೋಗ್ಯದ ಬಗ್ಗೆ ಕಾಳಜಿ ಇದೆ. ಎಲ್ಲರೂ ಮನೆಯಲ್ಲೇ ಇದ್ದು, ದೇಶ ಹಾಗೂ ಕರ್ನಾಟಕದ ರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು. ಏಪ್ರಿಲ್ 14ರ ನಂತರ ನಾವೆಲ್ಲರೂ ಭೇಟಿಯಾಗಿ ಬೇವು–ಬೆಲ್ಲ ಸವಿಯೋಣ. ಎಲ್ಲರೂ ಆರೋಗ್ಯವಾಗಿರೋಣ’ ಎಂದು ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>