<p><strong>ದಾವಣಗೆರೆ</strong>: ಹಲವು ಮಠಗಳು ರಾಜಕಾರಣದ ಕೇಂದ್ರಗಳಾಗಿವೆ. ಹಲವು ಸ್ವಾಮೀಜಿಗಳು ಧರ್ಮಕಾರ್ಯ ಮಾಡುವುದು ಬಿಟ್ಟು ರಾಜಕಾರಣದಲ್ಲೇ ತೊಡಗಿಸಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ವಿಷಾದಿಸಿದರು.</p>.<p>ಜಯದೇವಶ್ರೀಗಳ 63ನೇ ಸ್ಮರಣೋತ್ಸವದ ಅಂಗವಾಗಿ ಶಿವಯೋಗಾಶ್ರಮದ ಬಸವಕೇಂದ್ರದಲ್ಲಿ ಗುರುವಾರ ಜಮುರಾ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಮುಖ್ಯಮಂತ್ರಿಯೇ ಬರುವಂತೆ ಮಾಡುವೆ ಎಂದು ಸ್ವಾಮೀಜಿಯೊಬ್ಬರು ನಿನ್ನೆ ಹೇಳಿರುವುದು ಇದಕ್ಕೆ ತಾಜಾ ಉದಾಹರಣೆ ಎಂದು ಹೇಳಿದರು.</p>.<p>ನಾಟಕಗಳ ಮೂಲಕ ಜನರ ಮನಪರಿವರ್ತನೆ ಮಾಡಲು ಸಾಧ್ಯ. ಆದರೆ ಇಂಥ ನಾಟಕಗಳನ್ನು ಮುರುಘಾಮಠ ಮತ್ತು ಸಾಣೇಹಳ್ಳಿ ಮಠಗಳನ್ನು ಹೊರತುಪಡಿಸಿದರೆ ಬೇರೆ ಮಠಗಳು ಮಾಡಿಸುತ್ತಿಲ್ಲ ಎಂದರು.</p>.<p>ಬದುಕುವ ದಾರಿ ಮತ್ತು ಸೇವೆಯ ಮನೋಭಾವವನ್ನು ಸಮಾಜಕ್ಕೆ ಕೊಟ್ಟು ಹೋದವರಲ್ಲಿ ಜಯದೇವಶ್ರೀಗಳು ಪ್ರಮುಖರು. ಅವರು ಪೀಠದಲ್ಲೇ ಬಾಕಿಯಾಗದೇ 100 ವರ್ಷಗಳ ಹಿಂದೆಯೇ ಹಸಿದವನಿಗೆ ಅನ್ನ, ಜ್ಞಾನದ ಹಸಿವು ಇರುವವನಿಗೆ ಶಿಕ್ಷಣ ನೀಡಿದವರು. ಇವತ್ತು ಮಕ್ಕಳಿಗೆ ಸರ್ಕಾರ ಬಿಸಿಯೂಟ ನೀಡುತ್ತಿದೆ. ಈ ಕಾರ್ಯವನ್ನು ಜಯದೇವಶ್ರೀಗಳು ಅಂದೇ ಮಾಡಿದ್ದರು ಎಂದು ಸ್ಮರಿಸಿದರು.</p>.<p>‘ಮನೆಯಲ್ಲಿ ಸಾಕಿರುವ ನಾಯಿಗೆ ಸಂಸ್ಕಾರ ಕಲಿಸಿಕೊಡುತ್ತೇವೆ. ಆದರೆ ನಮ್ಮದೇ ಮಕ್ಕಳಿಗೆ ಸಂಸ್ಕಾರ ಕಲಿಸುವಲ್ಲಿ ಹಿಂದೆ ಬೀಳುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಸಾನ್ನಿಧ್ಯ ವಹಿಸಿದ್ದ ಬಸವಪ್ರಭು ಸ್ವಾಮೀಜಿ, ‘ಭೌತಿಕವಾಗಿ ಬಡಿದಾಟ ಮಾಡಿದವರು ಇತಿಹಾಸವಾಗಿಲ್ಲ. ಆದರ್ಶದ ಜೀವನ ಮಾಡಿದವರು ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವಗುರು ಬಸವಣ್ಣ, ಬುದ್ಧ, ಅಂಬೇಡ್ಕರ್, ಜಯದೇವಶ್ರೀಗಳು ಅಂಥ ಸಾಧಕರು. ಅವರೆಲ್ಲ ನಿಸ್ವಾರ್ಥ ಸೇವೆ ಮತ್ತು ತ್ಯಾಗ ಜೀವನ ನಡೆಸಿದವರು’ ಎಂದರು.</p>.<p>ಸ್ವಾತಂತ್ರ್ಯ ಪೂರ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಉಚಿತ ಪ್ರಸಾದ ನಿಲಯ ಪ್ರಾರಂಭಿಸಿದವರು ಜಯದೇವಶ್ರೀಗಳು. ಮುರುಘಾಮಠ ಜಾತಿ ಕೇಳದ ಮಠ. ಸರ್ವಜನಾಂಗವನ್ನು ಉದ್ಧಾರ ಮಾಡಿದ ಮಠ ಎಂದು ಶ್ಲಾಘಿಸಿದರು.</p>.<p>ಪ್ರೀತಿ, ಸಹನೆ, ಶಾಂತಿ, ಮಾನವೀಯತೆ, ಸಮಾನತೆ ಇದ್ದಲ್ಲಿ ಬದುಕು ಸ್ವರ್ಗವಾಗುತ್ತದೆ. ನಿಂದೆ, ದ್ವೇಷ, ಮತ್ಸರಗಳಿದ್ದರೆ ಬದುಕಿಗೆ ಬೆಲೆ ಇರುವುದಿಲ್ಲ ಎಂದು ತಿಳಿಸಿದರು.</p>.<p>ನ್ಯಾಷನಲ್ ಕಾನ್ವೆಂಟ್ ಕಾರ್ಯದರ್ಶಿ ಸಹನಾ ರವಿ, ವಿಶ್ವ ಕರವೇ ಅಧ್ಯಕ್ಷ ಕೆ.ಜಿ. ಯಲ್ಲಪ್ಪ, ಕನ್ನಡಪರ ಹೋರಾಟಗಾರ ಟಿ. ಶಿವಕುಮಾರ್, ಜಿ. ವೀರಭದ್ರಪ್ಪ ಇದ್ದರು. ದಮಯಂತಿ ಗೌಡ್ರು ನಿರೂಪಿಸಿದರು.</p>.<p>ಚಿತ್ರದುರ್ಗದ ಜಮುರಾ ತಂಡದಿಂದ ದ.ರಾ. ಬೇಂದ್ರೆ ರಚಿಸಿದ ಸಾಯೋ ಆಟ ಪ್ರದರ್ಶನಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ಹಲವು ಮಠಗಳು ರಾಜಕಾರಣದ ಕೇಂದ್ರಗಳಾಗಿವೆ. ಹಲವು ಸ್ವಾಮೀಜಿಗಳು ಧರ್ಮಕಾರ್ಯ ಮಾಡುವುದು ಬಿಟ್ಟು ರಾಜಕಾರಣದಲ್ಲೇ ತೊಡಗಿಸಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ವಿಷಾದಿಸಿದರು.</p>.<p>ಜಯದೇವಶ್ರೀಗಳ 63ನೇ ಸ್ಮರಣೋತ್ಸವದ ಅಂಗವಾಗಿ ಶಿವಯೋಗಾಶ್ರಮದ ಬಸವಕೇಂದ್ರದಲ್ಲಿ ಗುರುವಾರ ಜಮುರಾ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಮುಖ್ಯಮಂತ್ರಿಯೇ ಬರುವಂತೆ ಮಾಡುವೆ ಎಂದು ಸ್ವಾಮೀಜಿಯೊಬ್ಬರು ನಿನ್ನೆ ಹೇಳಿರುವುದು ಇದಕ್ಕೆ ತಾಜಾ ಉದಾಹರಣೆ ಎಂದು ಹೇಳಿದರು.</p>.<p>ನಾಟಕಗಳ ಮೂಲಕ ಜನರ ಮನಪರಿವರ್ತನೆ ಮಾಡಲು ಸಾಧ್ಯ. ಆದರೆ ಇಂಥ ನಾಟಕಗಳನ್ನು ಮುರುಘಾಮಠ ಮತ್ತು ಸಾಣೇಹಳ್ಳಿ ಮಠಗಳನ್ನು ಹೊರತುಪಡಿಸಿದರೆ ಬೇರೆ ಮಠಗಳು ಮಾಡಿಸುತ್ತಿಲ್ಲ ಎಂದರು.</p>.<p>ಬದುಕುವ ದಾರಿ ಮತ್ತು ಸೇವೆಯ ಮನೋಭಾವವನ್ನು ಸಮಾಜಕ್ಕೆ ಕೊಟ್ಟು ಹೋದವರಲ್ಲಿ ಜಯದೇವಶ್ರೀಗಳು ಪ್ರಮುಖರು. ಅವರು ಪೀಠದಲ್ಲೇ ಬಾಕಿಯಾಗದೇ 100 ವರ್ಷಗಳ ಹಿಂದೆಯೇ ಹಸಿದವನಿಗೆ ಅನ್ನ, ಜ್ಞಾನದ ಹಸಿವು ಇರುವವನಿಗೆ ಶಿಕ್ಷಣ ನೀಡಿದವರು. ಇವತ್ತು ಮಕ್ಕಳಿಗೆ ಸರ್ಕಾರ ಬಿಸಿಯೂಟ ನೀಡುತ್ತಿದೆ. ಈ ಕಾರ್ಯವನ್ನು ಜಯದೇವಶ್ರೀಗಳು ಅಂದೇ ಮಾಡಿದ್ದರು ಎಂದು ಸ್ಮರಿಸಿದರು.</p>.<p>‘ಮನೆಯಲ್ಲಿ ಸಾಕಿರುವ ನಾಯಿಗೆ ಸಂಸ್ಕಾರ ಕಲಿಸಿಕೊಡುತ್ತೇವೆ. ಆದರೆ ನಮ್ಮದೇ ಮಕ್ಕಳಿಗೆ ಸಂಸ್ಕಾರ ಕಲಿಸುವಲ್ಲಿ ಹಿಂದೆ ಬೀಳುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಸಾನ್ನಿಧ್ಯ ವಹಿಸಿದ್ದ ಬಸವಪ್ರಭು ಸ್ವಾಮೀಜಿ, ‘ಭೌತಿಕವಾಗಿ ಬಡಿದಾಟ ಮಾಡಿದವರು ಇತಿಹಾಸವಾಗಿಲ್ಲ. ಆದರ್ಶದ ಜೀವನ ಮಾಡಿದವರು ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವಗುರು ಬಸವಣ್ಣ, ಬುದ್ಧ, ಅಂಬೇಡ್ಕರ್, ಜಯದೇವಶ್ರೀಗಳು ಅಂಥ ಸಾಧಕರು. ಅವರೆಲ್ಲ ನಿಸ್ವಾರ್ಥ ಸೇವೆ ಮತ್ತು ತ್ಯಾಗ ಜೀವನ ನಡೆಸಿದವರು’ ಎಂದರು.</p>.<p>ಸ್ವಾತಂತ್ರ್ಯ ಪೂರ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಉಚಿತ ಪ್ರಸಾದ ನಿಲಯ ಪ್ರಾರಂಭಿಸಿದವರು ಜಯದೇವಶ್ರೀಗಳು. ಮುರುಘಾಮಠ ಜಾತಿ ಕೇಳದ ಮಠ. ಸರ್ವಜನಾಂಗವನ್ನು ಉದ್ಧಾರ ಮಾಡಿದ ಮಠ ಎಂದು ಶ್ಲಾಘಿಸಿದರು.</p>.<p>ಪ್ರೀತಿ, ಸಹನೆ, ಶಾಂತಿ, ಮಾನವೀಯತೆ, ಸಮಾನತೆ ಇದ್ದಲ್ಲಿ ಬದುಕು ಸ್ವರ್ಗವಾಗುತ್ತದೆ. ನಿಂದೆ, ದ್ವೇಷ, ಮತ್ಸರಗಳಿದ್ದರೆ ಬದುಕಿಗೆ ಬೆಲೆ ಇರುವುದಿಲ್ಲ ಎಂದು ತಿಳಿಸಿದರು.</p>.<p>ನ್ಯಾಷನಲ್ ಕಾನ್ವೆಂಟ್ ಕಾರ್ಯದರ್ಶಿ ಸಹನಾ ರವಿ, ವಿಶ್ವ ಕರವೇ ಅಧ್ಯಕ್ಷ ಕೆ.ಜಿ. ಯಲ್ಲಪ್ಪ, ಕನ್ನಡಪರ ಹೋರಾಟಗಾರ ಟಿ. ಶಿವಕುಮಾರ್, ಜಿ. ವೀರಭದ್ರಪ್ಪ ಇದ್ದರು. ದಮಯಂತಿ ಗೌಡ್ರು ನಿರೂಪಿಸಿದರು.</p>.<p>ಚಿತ್ರದುರ್ಗದ ಜಮುರಾ ತಂಡದಿಂದ ದ.ರಾ. ಬೇಂದ್ರೆ ರಚಿಸಿದ ಸಾಯೋ ಆಟ ಪ್ರದರ್ಶನಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>