‘ಸಾವಯವ ಅಥವಾ ನೈಸರ್ಗಿಕ ಕೃಷಿಯಲ್ಲಿ ತೊಡಗಿಕೊಂಡವರಿಗೆ ಅಗತ್ಯ ಆರ್ಥಿಕ ನೆರವು, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಬೇಕಿದೆ. ಗುಣಾತ್ಮಕ ಕೃಷಿ ಉತ್ಪನ್ನಗಳ ಬಗ್ಗೆ ಸಾಕಷ್ಟು ನಿರೀಕ್ಷೆ ವ್ಯಕ್ತವಾಗುತ್ತಿರುತ್ತದೆ. ಆದರೆ, ಬೆಂಬಲ ಬಯಸಿದಾಗ ನಿರಾಸೆ ಆಗುವುದು ಬೇಸರದ ಸಂಗತಿ. ಹೊಸತನ ರೂಢಿಸಿಕೊಂಡಿರುವ ರೈತರು ಒಟ್ಟಾಗಿ ಸೇರಿ ತಾವು ಬೆಳೆಯುವ ಎಲ್ಲ ಉತ್ಪನ್ನಗಳಿಗೂ ಮಾರುಕಟ್ಟೆ ಸೃಷ್ಟಿಸಿಕೊಂಡು ಯಶಸ್ಸು ಗಳಿಸಬೇಕಿದೆ’ ಎಂದು ಹೇಳಿದರು.