<p><strong>ಹೊನ್ನಾಳಿ</strong>: ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಿಗ್ಗೆಯಿಂದ ಜಿಟಿ ಜಿಟಿ ಮಳೆಯಾಗಿದೆ. </p>.<p>ತಾಲ್ಲೂಕಿನ ಮಾರಿಕೊಪ್ಪ, ಹತ್ತೂರು, ಎರೆಹಳ್ಳಿ, ಕತ್ತಿಗೆ, ಮಾದೇನಹಳ್ಳಿ ಭಾಗದಲ್ಲಿ ಎರೆಭೂಮಿ ಇದ್ದು, ಜಿಟಿ ಜಿಟಿ ಮಳೆಯಿಂದ ಭೂಮಿ ಹದಗೊಂಡಿದೆ ಎಂದು ಹತ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾರಿಕೊಪ್ಪ ಹನುಮಂತಪ್ಪ ತಿಳಿಸಿದರು. </p>.<p>ಕಳೆದ ತಿಂಗಳು ಉತ್ತಮ ಮಳೆಯಾಗಿತ್ತು. 10 ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೆವು. ನಂತರ 15 ದಿನ ಮಳೆ ಕೈಕೊಟ್ಟಿದ್ದರಿಂದ ಮೆಕ್ಕೆಜೋಳ ಸರಿಯಾಗಿ ಹುಟ್ಟಲಿಲ್ಲ. ಮಂಗಳವಾರದಿಂದ ಉತ್ತಮ ಮಳೆ ಆಗುತ್ತಿದ್ದು, ಹೊಸದಾಗಿ ಬಿತ್ತನೆ ಮಾಡಲಾಗುವುದು ಎಂದು ಅವರು ಹೇಳಿದರು.</p>.<p>ತಾಲ್ಲೂಕಿನ ದಿಡಗೂರು, ಹರಳಹಳ್ಳಿ, ಗೋವಿನಕೋವಿ ಗ್ರಾಮಗಳಲ್ಲಿ ಈ ಹಿಂದೆ ಬಿತ್ತಿದ್ದ ಬೆಳೆಗಳಿಗೂ ಹಾಗೂ ಮುಂದೆ ಬಿತ್ತನೆ ಮಾಡುವವರಿಗೂ ಈ ಮಳೆ ಒಂದಿಷ್ಟು ಅನುಕೂಲ ಮಾಡಿಕೊಡಲಿದೆ ಎಂದು ರೈತಮುಖಂಡ ದಿಡಗೂರು ಫಾಲಾಕ್ಷಪ್ಪ ತಿಳಿಸಿದರು.</p>.<p>ತಾಲ್ಲೂಕಿನ ತರಗನಹಳ್ಳಿ, ಸಿಂಗಟಗೆರೆ, ತಿಮ್ಲಾಪುರ, ನೇರಲಗುಂಡಿ ಗ್ರಾಮಗಳಲ್ಲಿ ಬಿತ್ತನೆ ಕೆಲಸ ಬಾಕಿ ಇದ್ದು, ಜಿಟಿ ಜಿಟಿ ಮೂಲಕ ಹದ ಮಳೆಯಾದಲ್ಲಿ ಅನುಕೂಲವಾಗುತ್ತದೆ ಎಂದು ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಜಿ. ರಮೇಶ್ಗೌಡ ಹೇಳಿದರು. </p>.<p>ತಾಲ್ಲೂಕಿನ ಬಲಮುರಿ, ಎಚ್. ಗೋಪಗೊಂಡನಹಳ್ಳಿ, ಎಸ್. ಮಲ್ಲಾಪುರ ಭಾಗಗಳಲ್ಲಿ ಶೇ 40ರಷ್ಟು ಬಿತ್ತನೆಯಾಗಿತ್ತು. ಮಳೆಯಿಂದ ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಗತಿಪರ ರೈತ ಮಲ್ಲಿಕಾರ್ಜುನ್ ಸಂತಸ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾಳಿ</strong>: ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಿಗ್ಗೆಯಿಂದ ಜಿಟಿ ಜಿಟಿ ಮಳೆಯಾಗಿದೆ. </p>.<p>ತಾಲ್ಲೂಕಿನ ಮಾರಿಕೊಪ್ಪ, ಹತ್ತೂರು, ಎರೆಹಳ್ಳಿ, ಕತ್ತಿಗೆ, ಮಾದೇನಹಳ್ಳಿ ಭಾಗದಲ್ಲಿ ಎರೆಭೂಮಿ ಇದ್ದು, ಜಿಟಿ ಜಿಟಿ ಮಳೆಯಿಂದ ಭೂಮಿ ಹದಗೊಂಡಿದೆ ಎಂದು ಹತ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾರಿಕೊಪ್ಪ ಹನುಮಂತಪ್ಪ ತಿಳಿಸಿದರು. </p>.<p>ಕಳೆದ ತಿಂಗಳು ಉತ್ತಮ ಮಳೆಯಾಗಿತ್ತು. 10 ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೆವು. ನಂತರ 15 ದಿನ ಮಳೆ ಕೈಕೊಟ್ಟಿದ್ದರಿಂದ ಮೆಕ್ಕೆಜೋಳ ಸರಿಯಾಗಿ ಹುಟ್ಟಲಿಲ್ಲ. ಮಂಗಳವಾರದಿಂದ ಉತ್ತಮ ಮಳೆ ಆಗುತ್ತಿದ್ದು, ಹೊಸದಾಗಿ ಬಿತ್ತನೆ ಮಾಡಲಾಗುವುದು ಎಂದು ಅವರು ಹೇಳಿದರು.</p>.<p>ತಾಲ್ಲೂಕಿನ ದಿಡಗೂರು, ಹರಳಹಳ್ಳಿ, ಗೋವಿನಕೋವಿ ಗ್ರಾಮಗಳಲ್ಲಿ ಈ ಹಿಂದೆ ಬಿತ್ತಿದ್ದ ಬೆಳೆಗಳಿಗೂ ಹಾಗೂ ಮುಂದೆ ಬಿತ್ತನೆ ಮಾಡುವವರಿಗೂ ಈ ಮಳೆ ಒಂದಿಷ್ಟು ಅನುಕೂಲ ಮಾಡಿಕೊಡಲಿದೆ ಎಂದು ರೈತಮುಖಂಡ ದಿಡಗೂರು ಫಾಲಾಕ್ಷಪ್ಪ ತಿಳಿಸಿದರು.</p>.<p>ತಾಲ್ಲೂಕಿನ ತರಗನಹಳ್ಳಿ, ಸಿಂಗಟಗೆರೆ, ತಿಮ್ಲಾಪುರ, ನೇರಲಗುಂಡಿ ಗ್ರಾಮಗಳಲ್ಲಿ ಬಿತ್ತನೆ ಕೆಲಸ ಬಾಕಿ ಇದ್ದು, ಜಿಟಿ ಜಿಟಿ ಮೂಲಕ ಹದ ಮಳೆಯಾದಲ್ಲಿ ಅನುಕೂಲವಾಗುತ್ತದೆ ಎಂದು ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಜಿ. ರಮೇಶ್ಗೌಡ ಹೇಳಿದರು. </p>.<p>ತಾಲ್ಲೂಕಿನ ಬಲಮುರಿ, ಎಚ್. ಗೋಪಗೊಂಡನಹಳ್ಳಿ, ಎಸ್. ಮಲ್ಲಾಪುರ ಭಾಗಗಳಲ್ಲಿ ಶೇ 40ರಷ್ಟು ಬಿತ್ತನೆಯಾಗಿತ್ತು. ಮಳೆಯಿಂದ ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಗತಿಪರ ರೈತ ಮಲ್ಲಿಕಾರ್ಜುನ್ ಸಂತಸ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>