<p><strong>ನ್ಯಾಮತಿ</strong>: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತಮ ಉಪನ್ಯಾಸಕರಿದ್ದು, ಗ್ರಂಥಾಲಯ, ಕ್ರೀಡಾ ಚಟುವಟಿಕೆ, ಎನ್.ಎಸ್.ಎಸ್. ಸೌಲಭ್ಯಗಳು ಲಭ್ಯ ಇವೆ ಎಂದು ಪ್ರಾಚಾರ್ಯ ಡಿ.ಶಿವಕುಮಾರ ತಿಳಿಸಿದರು.</p>.<p>ಕರ್ನಾಟಕ ಪಬ್ಲಿಕ್ ಶಾಲೆಯ ದ್ವಿತೀಯ ಪಿಯುಸಿಯ 200 ವಿದ್ಯಾರ್ಥಿಗಳು ಕಾಲೇಜಿಗೆ ಈಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಕಾಲೇಜಿನ ಶೈಕ್ಷಣಿಕ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.</p>.<p>ಕಾಲೇಜಿನಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಬಿ.ಸಿ.ಎ ವಿಭಾಗಗಳಿವೆ. ಕಾಯಂ ಉಪನ್ಯಾಸಕರು ಮತ್ತು ಅತಿಥಿ ಉಪನ್ಯಾಸಕರು ಉತ್ತಮ ಬೋಧನೆ ಮಾಡುತ್ತಿದ್ದಾರೆ. ಸರ್ಕಾರದಿಂದ ಸಿಗುವ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ ಸೌಲಭ್ಯಗಳಿವೆ. ಹೈಟೆಕ್ ಗ್ರಂಥಾಲಯವಿದ್ದು, ನುರಿತ ಸಿಬ್ಬಂದಿ ಇದ್ದಾರೆ ಎಂದರು.</p>.<p>ಕೆ.ಪಿ.ಎಸ್. ಶಾಲೆಯ ಉಪನ್ಯಾಸಕರಾದ ಗಂಗಾಧರ ನವುಲೆ, ಕೆ.ಎಲ್. ಶಿವಕುಮಾರ, ಅಮೃತ್, ಅನಿಲಕುಮಾರ, ಯೋಗೇಶ, ಪ್ರವೇಶಾತಿ ಸಂಚಾಲಕಿ ಎನ್.ಜ್ಯೋತಿ, ಆಂಗ್ಲ ಉಪನ್ಯಾಸಕ ರೇವಣಸಿದ್ದಪ್ಪ, ಗ್ರಂಥಾಧಿಕಾರಿ ಜಿ.ಆರ್.ರಾಜಶೇಖರ, ಎಂ.ಎಸ್.ಗಿರೀಶ, ಎಸ್. ರಶ್ಮೀ, ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನ್ಯಾಮತಿ</strong>: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತಮ ಉಪನ್ಯಾಸಕರಿದ್ದು, ಗ್ರಂಥಾಲಯ, ಕ್ರೀಡಾ ಚಟುವಟಿಕೆ, ಎನ್.ಎಸ್.ಎಸ್. ಸೌಲಭ್ಯಗಳು ಲಭ್ಯ ಇವೆ ಎಂದು ಪ್ರಾಚಾರ್ಯ ಡಿ.ಶಿವಕುಮಾರ ತಿಳಿಸಿದರು.</p>.<p>ಕರ್ನಾಟಕ ಪಬ್ಲಿಕ್ ಶಾಲೆಯ ದ್ವಿತೀಯ ಪಿಯುಸಿಯ 200 ವಿದ್ಯಾರ್ಥಿಗಳು ಕಾಲೇಜಿಗೆ ಈಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಕಾಲೇಜಿನ ಶೈಕ್ಷಣಿಕ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.</p>.<p>ಕಾಲೇಜಿನಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಬಿ.ಸಿ.ಎ ವಿಭಾಗಗಳಿವೆ. ಕಾಯಂ ಉಪನ್ಯಾಸಕರು ಮತ್ತು ಅತಿಥಿ ಉಪನ್ಯಾಸಕರು ಉತ್ತಮ ಬೋಧನೆ ಮಾಡುತ್ತಿದ್ದಾರೆ. ಸರ್ಕಾರದಿಂದ ಸಿಗುವ ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ ಸೌಲಭ್ಯಗಳಿವೆ. ಹೈಟೆಕ್ ಗ್ರಂಥಾಲಯವಿದ್ದು, ನುರಿತ ಸಿಬ್ಬಂದಿ ಇದ್ದಾರೆ ಎಂದರು.</p>.<p>ಕೆ.ಪಿ.ಎಸ್. ಶಾಲೆಯ ಉಪನ್ಯಾಸಕರಾದ ಗಂಗಾಧರ ನವುಲೆ, ಕೆ.ಎಲ್. ಶಿವಕುಮಾರ, ಅಮೃತ್, ಅನಿಲಕುಮಾರ, ಯೋಗೇಶ, ಪ್ರವೇಶಾತಿ ಸಂಚಾಲಕಿ ಎನ್.ಜ್ಯೋತಿ, ಆಂಗ್ಲ ಉಪನ್ಯಾಸಕ ರೇವಣಸಿದ್ದಪ್ಪ, ಗ್ರಂಥಾಧಿಕಾರಿ ಜಿ.ಆರ್.ರಾಜಶೇಖರ, ಎಂ.ಎಸ್.ಗಿರೀಶ, ಎಸ್. ರಶ್ಮೀ, ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>