<p><strong>ನ್ಯಾಮತಿ: ‘</strong>ಭಾರತದಲ್ಲಿ ಜನಿಸಿದ ನಾವೆಲ್ಲರೂ ಭಾರತೀಯರು. ಕೋಮು–ದ್ವೇಷ ಬೆಳಸಿಕೊಳ್ಳಬಾರದು. ನಾವೆಲ್ಲ ಕನ್ನಡಿಗರು ಒಂದೇ ಎಂಬ ಭಾವನೆ ಇರಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಕಾರ್ಯಕಾರಿ ಸದಸ್ಯ ಸೈಯದ್ ಅಪ್ಸರ್ ಪಾಷ ಹೇಳಿದರು.</p>.<p>ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಶನಿವಾರ ನಡೆದ ಮಾಸಿಕ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಭಾರತ ಮತ್ತು ಪಾಕಿಸ್ತಾನ ಸಂಘರ್ಷದ ಈ ಸಮಯದಲ್ಲಿ ಭಾರತೀಯ ಸೈನಿಕರಿಗೆ ನಾವೆಲ್ಲರೂ ನೈತಿಕ ಬೆಂಬಲ ನೀಡೋಣ ಎಂದರು.</p>.<p>ಸ್ವಾತಂತ್ರ್ಯ ಹೋರಾಟಗಾರ ನ್ಯಾಮತಿ ಸೊಂಡೂರು ಹಾಲಪ್ಪ ದಂಪತಿ ಬಗ್ಗೆ ಅವರ ಪುತ್ರ ಎನ್.ಎಸ್.ಅರುಣಕುಮಾರ ಮಾಹಿತಿ ನೀಡಿದರು.</p>.<p>ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಮಾದನಬಾವಿ ಜಾನಪದ ಕಲಾವಿದರ ಸಂಘಟಕಿ ಜಿ.ಎಂ.ಮಂಜುಳಾ, ಕಸಾಪ ನಿಕಟಪೂರ್ವ ಅಧ್ಯಕ್ಷ ಗಡೆಕಟ್ಟೆ ನಿಜಲಿಂಗಪ್ಪ, ಗೌರವ ಕಾರ್ಯದರ್ಶಿ ಎಸ್.ಜಿ.ಬಸವರಾಜಪ್ಪ, ಸದಸ್ಯರಾದ ವೆಂಕಟೇಶನಾಯ್ಕ, ಈ ಸುಮಲತಾ, ಜಿ.ಷಡಕಪ್ಪ, ಬಸವತತ್ವ ಪ್ರಚಾರಕಿ ಸನ್ಯಾಸಿ ಕೊಡಮಗ್ಗಿ ಸೌಭಾಗ್ಯ, ಆರುಂಡಿ ಮಂಜಪ್ಪ, ಸೊಂಡೂರು ಮಹೇಶ್ವರಪ್ಪ, ದಾನಿಹಳ್ಳಿ ಉಮಾಭಾರತಿ, ಪುಷ್ಪಾ, ಎಸ್ಜೆಎಂ ಮಮತಾ, ರೇಖಾ ಗಜಾನನ, ಸತೀಶ ಬಿದರಕಟ್ಟೆ ಇದ್ದರು.</p>.<p>ಪುಟಾಣಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನ್ಯಾಮತಿ: ‘</strong>ಭಾರತದಲ್ಲಿ ಜನಿಸಿದ ನಾವೆಲ್ಲರೂ ಭಾರತೀಯರು. ಕೋಮು–ದ್ವೇಷ ಬೆಳಸಿಕೊಳ್ಳಬಾರದು. ನಾವೆಲ್ಲ ಕನ್ನಡಿಗರು ಒಂದೇ ಎಂಬ ಭಾವನೆ ಇರಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಕಾರ್ಯಕಾರಿ ಸದಸ್ಯ ಸೈಯದ್ ಅಪ್ಸರ್ ಪಾಷ ಹೇಳಿದರು.</p>.<p>ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಶನಿವಾರ ನಡೆದ ಮಾಸಿಕ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಭಾರತ ಮತ್ತು ಪಾಕಿಸ್ತಾನ ಸಂಘರ್ಷದ ಈ ಸಮಯದಲ್ಲಿ ಭಾರತೀಯ ಸೈನಿಕರಿಗೆ ನಾವೆಲ್ಲರೂ ನೈತಿಕ ಬೆಂಬಲ ನೀಡೋಣ ಎಂದರು.</p>.<p>ಸ್ವಾತಂತ್ರ್ಯ ಹೋರಾಟಗಾರ ನ್ಯಾಮತಿ ಸೊಂಡೂರು ಹಾಲಪ್ಪ ದಂಪತಿ ಬಗ್ಗೆ ಅವರ ಪುತ್ರ ಎನ್.ಎಸ್.ಅರುಣಕುಮಾರ ಮಾಹಿತಿ ನೀಡಿದರು.</p>.<p>ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಮಾದನಬಾವಿ ಜಾನಪದ ಕಲಾವಿದರ ಸಂಘಟಕಿ ಜಿ.ಎಂ.ಮಂಜುಳಾ, ಕಸಾಪ ನಿಕಟಪೂರ್ವ ಅಧ್ಯಕ್ಷ ಗಡೆಕಟ್ಟೆ ನಿಜಲಿಂಗಪ್ಪ, ಗೌರವ ಕಾರ್ಯದರ್ಶಿ ಎಸ್.ಜಿ.ಬಸವರಾಜಪ್ಪ, ಸದಸ್ಯರಾದ ವೆಂಕಟೇಶನಾಯ್ಕ, ಈ ಸುಮಲತಾ, ಜಿ.ಷಡಕಪ್ಪ, ಬಸವತತ್ವ ಪ್ರಚಾರಕಿ ಸನ್ಯಾಸಿ ಕೊಡಮಗ್ಗಿ ಸೌಭಾಗ್ಯ, ಆರುಂಡಿ ಮಂಜಪ್ಪ, ಸೊಂಡೂರು ಮಹೇಶ್ವರಪ್ಪ, ದಾನಿಹಳ್ಳಿ ಉಮಾಭಾರತಿ, ಪುಷ್ಪಾ, ಎಸ್ಜೆಎಂ ಮಮತಾ, ರೇಖಾ ಗಜಾನನ, ಸತೀಶ ಬಿದರಕಟ್ಟೆ ಇದ್ದರು.</p>.<p>ಪುಟಾಣಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>