<p><strong>ದಾವಣಗೆರೆ:</strong> ‘ನಮ್ಮ ಸಮಾಜದಲ್ಲಿ ಒಂದೆಡೆ ಹಸಿವಿನಿಂದ ಜನ ಸಾಯುತ್ತಿದ್ದಾರೆ. ಇನ್ನೊಂದೆಡೆ ಆಹಾರವನ್ನು ದೇವರು, ಹಬ್ಬ, ಮದುವೆ ಹೆಸರಲ್ಲಿ ದುಂದುವೆಚ್ಚ ಮಾಡಿ ಹಾಳು ಮಾಡುತ್ತಿದ್ದಾರೆ’ ಎಂದು ಪೂರ್ವ ವಲಯ ಐಜಿಪಿ ಅಮೃತಪಾಲ್ ಕಳವಳ ವ್ಯಕ್ತಪಡಿಸಿದರು.</p>.<p>ವಿರಕ್ತಮಠದಿಂದ ದೊಡ್ಡಪೇಟೆ ವಿರಕ್ತಮಠದ ಬಸವಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಾಲು ಕುಡಿಸುವ ಹಬ್ಬ ‘ಬಸವಪಂಚಮಿ’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ಕುಡಿಸಿ ಅವರು ಮಾತನಾಡಿದರು.</p>.<p>12ನೇ ಶತಮಾನದ ಹೊತ್ತಿನಲ್ಲಿ ದೇಶದಲ್ಲಿ ವೈದಿಕ ಸಂಪ್ರದಾಯಗಳಿಂದಾಗಿ ಕೆಟ್ಟ ಸಮಾಜ ನಿರ್ಮಾಣವಾಗಿತ್ತು. ಸಮಾಜ ಜಡ್ಡುಗಟ್ಟಿ ಹೋಗಿತ್ತು. ಕೆಟ್ಟ ಸಂಪ್ರದಾಯಗಳನ್ನು ಬದಲಾವಣೆ ಮಾಡಬೇಕು ಎಂದು ಆ ಕಾಲದ ವಿಚಾರವಂತರು ಪ್ರಯತ್ನಪಟ್ಟರು. ದಕ್ಷಿಣ ಭಾರತದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ಬಸವಣ್ಣನ ನೇತೃತ್ವದಲ್ಲಿ ಈ ಕೆಲಸ ನಡೆಯಿತು. ಗುರುನಾನಕ್, ಕಬೀರ್, ರುಸ್ತಾನ್, ಮೀರಾಬಾಯಿ ಮುಂತಾದವರೂ ಬೇರೆ ಬೇರೆ ಕಾಲದಲ್ಲಿ ಇದೇ ಕೆಲಸವನ್ನು ಮಾಡಿದರು ಎಂದು ಹೇಳಿದರು.</p>.<p>ಈ ರೀತಿಯ ಸಾಮಾಜಿಕ ಕ್ರಾಂತಿ ನಡೆದು 800 ವರ್ಷಗಳು ದಾಟಿದರೂ ಇನ್ನೂ ಸಮಾಜದಲ್ಲಿ ಪರಿವರ್ತನೆಗಳಾಗಿಲ್ಲ. ಈಗಲೂ ಮೌಢ್ಯ ಮುಂದುವರಿದಿದೆ. ಹಾವು ಹಾಲು ಕುಡಿಯುವುದಿಲ್ಲ ಎಂದು ಗೊತ್ತಿದ್ದರೂ ಹಾಲು ಎರೆಯಲಾಗುತ್ತಿದೆ ಎಂದು ವಿಷಾದಿಸಿದರು.</p>.<p>ದೇಶದ ಜನಸಂಖ್ಯೆಯಲ್ಲಿ ಶೆ 30ರಷ್ಟು ಮಂದಿಗೆ ದಿನಕ್ಕೆ ಮೂರು ಹೊತ್ತು ಊಟ ಸಿಗುತ್ತಿಲ್ಲ. ಶೇ 10ರಷ್ಟು ಮಂದಿ ಒಂದೇ ಹೊತ್ತು ಊಟಕ್ಕೆ ಸೀಮಿತರಾಗಿದ್ದಾರೆ ಎಂದರು.</p>.<p>ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ‘ಪಂಚಮಿ ಹಬ್ಬ ಆಚರಿಸುವುದನ್ನು ವಿರೋಧಿಸುತ್ತಿಲ್ಲ. ಆದರೆ ಹಬ್ಬವು ಮಾನವೀಯವಾಗಿರಬೇಕು. ಆದರ್ಶವಾಗಿರಬೇಕು. ದೇವರಿಗೆ ಹೂವು ಇಟ್ಟು ಭಕ್ತಿಯಿಂದ ನಮಿಸುವುದು ತಪ್ಪಲ್ಲ. ಭಕ್ತಿಯ ಹೆಸರಲ್ಲಿ ಆಹಾರ ಚೆಲ್ಲಿದರೆ ದೇವರೇ ಒಪ್ಪಲ್ಲ’ ಎಂದು ಹೇಳಿದರು.</p>.<p>ದೇವರು ಎಲ್ಲೆಲ್ಲೂ ಇದ್ದಾನೆ. ಸಕಲ ಜೀವರಾಶಿಗಳಲ್ಲಿಯೂ ಇದ್ದಾನೆ. ಹಸಿದವನಿಗೆ ಊಟ ಕೊಡದೇ ಯಾವ ಪೂಜೆ ಮಾಡಿದರೂ ದೇವರು ಸಂತೃಪ್ತನಾಗುವುದಿಲ್ಲ. ಪಂಚಮಿಯ ಒಂದೇ ದಿನ ದೇಶದಲ್ಲಿ 10 ದಶಲಕ್ಷ ಲೀಟರ್ ಹಾಲು ವ್ಯರ್ಥವಾಗುತ್ತಿದೆ. ಕೆಲವು ಸಮಯದ ಹಿಂದೆ ಗುಜರಾತ್ನಲ್ಲಿ ನಡೆದ ಒಂದು ಅಭಿಷೇಕದಲ್ಲಿ ₹ 16 ಕೋಟಿ ಮೌಲ್ಯದ 5.50 ಲಕ್ಷ ಲೀಟರ್ ತುಪ್ಪ ಸುರಿದು ವ್ಯರ್ಥ ಮಾಡಲಾಯಿತು. ದೇವರ ಹೆಸರಲ್ಲಿ ಆಹಾರ ವ್ಯರ್ಥ ಮಾಡಬೇಡಿ ಎಂದು ಕೋರಿದರು.</p>.<p>ಇವತ್ತು ಬಸವಣ್ಣ ಲಿಂಗೈಕ್ಯರಾದ ದಿನ. ಹಾಲನ್ನು ಹುತ್ತ, ಕಲ್ಲುಗಳಿಗೆ ಎರೆಯದೇ ಹಾಲು ಕುಡಿಯುವ ಮೂಲಕ ಬಸವ ಪಂಚಮಿಯಾಗಿ ಆಚರಿಸಬೇಕು ಎಂದು ಸಲಹೆ ನೀಡಿದರು.</p>.<p>ಮಹಾಲಿಂಗಪುರದ ಚನ್ನಬಸವ ಗುರೂಜಿ, ಶಿವನಕೆರೆ ಬಸವಲಿಂಗಪ್ಪ, ಮಹಾದೇವಮ್ಮ, ಎಸ್.ಜಿ. ಸಂಗಪ್ಪ, ಶರಣ ಬಸವ ಉಪಸ್ಥಿತರಿದ್ದರು. ಫಾರುಕು ಉಲ್ಲಾ ಸ್ವಾಗತಿಸಿದರು. ಅನುರಾಧಾ ವಂದಿಸಿದರು. ಪಿ.ಜಿ. ಪುಷ್ಪಾ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ‘ನಮ್ಮ ಸಮಾಜದಲ್ಲಿ ಒಂದೆಡೆ ಹಸಿವಿನಿಂದ ಜನ ಸಾಯುತ್ತಿದ್ದಾರೆ. ಇನ್ನೊಂದೆಡೆ ಆಹಾರವನ್ನು ದೇವರು, ಹಬ್ಬ, ಮದುವೆ ಹೆಸರಲ್ಲಿ ದುಂದುವೆಚ್ಚ ಮಾಡಿ ಹಾಳು ಮಾಡುತ್ತಿದ್ದಾರೆ’ ಎಂದು ಪೂರ್ವ ವಲಯ ಐಜಿಪಿ ಅಮೃತಪಾಲ್ ಕಳವಳ ವ್ಯಕ್ತಪಡಿಸಿದರು.</p>.<p>ವಿರಕ್ತಮಠದಿಂದ ದೊಡ್ಡಪೇಟೆ ವಿರಕ್ತಮಠದ ಬಸವಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಾಲು ಕುಡಿಸುವ ಹಬ್ಬ ‘ಬಸವಪಂಚಮಿ’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ಕುಡಿಸಿ ಅವರು ಮಾತನಾಡಿದರು.</p>.<p>12ನೇ ಶತಮಾನದ ಹೊತ್ತಿನಲ್ಲಿ ದೇಶದಲ್ಲಿ ವೈದಿಕ ಸಂಪ್ರದಾಯಗಳಿಂದಾಗಿ ಕೆಟ್ಟ ಸಮಾಜ ನಿರ್ಮಾಣವಾಗಿತ್ತು. ಸಮಾಜ ಜಡ್ಡುಗಟ್ಟಿ ಹೋಗಿತ್ತು. ಕೆಟ್ಟ ಸಂಪ್ರದಾಯಗಳನ್ನು ಬದಲಾವಣೆ ಮಾಡಬೇಕು ಎಂದು ಆ ಕಾಲದ ವಿಚಾರವಂತರು ಪ್ರಯತ್ನಪಟ್ಟರು. ದಕ್ಷಿಣ ಭಾರತದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ಬಸವಣ್ಣನ ನೇತೃತ್ವದಲ್ಲಿ ಈ ಕೆಲಸ ನಡೆಯಿತು. ಗುರುನಾನಕ್, ಕಬೀರ್, ರುಸ್ತಾನ್, ಮೀರಾಬಾಯಿ ಮುಂತಾದವರೂ ಬೇರೆ ಬೇರೆ ಕಾಲದಲ್ಲಿ ಇದೇ ಕೆಲಸವನ್ನು ಮಾಡಿದರು ಎಂದು ಹೇಳಿದರು.</p>.<p>ಈ ರೀತಿಯ ಸಾಮಾಜಿಕ ಕ್ರಾಂತಿ ನಡೆದು 800 ವರ್ಷಗಳು ದಾಟಿದರೂ ಇನ್ನೂ ಸಮಾಜದಲ್ಲಿ ಪರಿವರ್ತನೆಗಳಾಗಿಲ್ಲ. ಈಗಲೂ ಮೌಢ್ಯ ಮುಂದುವರಿದಿದೆ. ಹಾವು ಹಾಲು ಕುಡಿಯುವುದಿಲ್ಲ ಎಂದು ಗೊತ್ತಿದ್ದರೂ ಹಾಲು ಎರೆಯಲಾಗುತ್ತಿದೆ ಎಂದು ವಿಷಾದಿಸಿದರು.</p>.<p>ದೇಶದ ಜನಸಂಖ್ಯೆಯಲ್ಲಿ ಶೆ 30ರಷ್ಟು ಮಂದಿಗೆ ದಿನಕ್ಕೆ ಮೂರು ಹೊತ್ತು ಊಟ ಸಿಗುತ್ತಿಲ್ಲ. ಶೇ 10ರಷ್ಟು ಮಂದಿ ಒಂದೇ ಹೊತ್ತು ಊಟಕ್ಕೆ ಸೀಮಿತರಾಗಿದ್ದಾರೆ ಎಂದರು.</p>.<p>ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ‘ಪಂಚಮಿ ಹಬ್ಬ ಆಚರಿಸುವುದನ್ನು ವಿರೋಧಿಸುತ್ತಿಲ್ಲ. ಆದರೆ ಹಬ್ಬವು ಮಾನವೀಯವಾಗಿರಬೇಕು. ಆದರ್ಶವಾಗಿರಬೇಕು. ದೇವರಿಗೆ ಹೂವು ಇಟ್ಟು ಭಕ್ತಿಯಿಂದ ನಮಿಸುವುದು ತಪ್ಪಲ್ಲ. ಭಕ್ತಿಯ ಹೆಸರಲ್ಲಿ ಆಹಾರ ಚೆಲ್ಲಿದರೆ ದೇವರೇ ಒಪ್ಪಲ್ಲ’ ಎಂದು ಹೇಳಿದರು.</p>.<p>ದೇವರು ಎಲ್ಲೆಲ್ಲೂ ಇದ್ದಾನೆ. ಸಕಲ ಜೀವರಾಶಿಗಳಲ್ಲಿಯೂ ಇದ್ದಾನೆ. ಹಸಿದವನಿಗೆ ಊಟ ಕೊಡದೇ ಯಾವ ಪೂಜೆ ಮಾಡಿದರೂ ದೇವರು ಸಂತೃಪ್ತನಾಗುವುದಿಲ್ಲ. ಪಂಚಮಿಯ ಒಂದೇ ದಿನ ದೇಶದಲ್ಲಿ 10 ದಶಲಕ್ಷ ಲೀಟರ್ ಹಾಲು ವ್ಯರ್ಥವಾಗುತ್ತಿದೆ. ಕೆಲವು ಸಮಯದ ಹಿಂದೆ ಗುಜರಾತ್ನಲ್ಲಿ ನಡೆದ ಒಂದು ಅಭಿಷೇಕದಲ್ಲಿ ₹ 16 ಕೋಟಿ ಮೌಲ್ಯದ 5.50 ಲಕ್ಷ ಲೀಟರ್ ತುಪ್ಪ ಸುರಿದು ವ್ಯರ್ಥ ಮಾಡಲಾಯಿತು. ದೇವರ ಹೆಸರಲ್ಲಿ ಆಹಾರ ವ್ಯರ್ಥ ಮಾಡಬೇಡಿ ಎಂದು ಕೋರಿದರು.</p>.<p>ಇವತ್ತು ಬಸವಣ್ಣ ಲಿಂಗೈಕ್ಯರಾದ ದಿನ. ಹಾಲನ್ನು ಹುತ್ತ, ಕಲ್ಲುಗಳಿಗೆ ಎರೆಯದೇ ಹಾಲು ಕುಡಿಯುವ ಮೂಲಕ ಬಸವ ಪಂಚಮಿಯಾಗಿ ಆಚರಿಸಬೇಕು ಎಂದು ಸಲಹೆ ನೀಡಿದರು.</p>.<p>ಮಹಾಲಿಂಗಪುರದ ಚನ್ನಬಸವ ಗುರೂಜಿ, ಶಿವನಕೆರೆ ಬಸವಲಿಂಗಪ್ಪ, ಮಹಾದೇವಮ್ಮ, ಎಸ್.ಜಿ. ಸಂಗಪ್ಪ, ಶರಣ ಬಸವ ಉಪಸ್ಥಿತರಿದ್ದರು. ಫಾರುಕು ಉಲ್ಲಾ ಸ್ವಾಗತಿಸಿದರು. ಅನುರಾಧಾ ವಂದಿಸಿದರು. ಪಿ.ಜಿ. ಪುಷ್ಪಾ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>