ವಿನಯ್ ಕುಲಕರ್ಣಿ ಮನೆಗೆ ಭೇಟಿ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿನ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ‘ವಿನಯ ಕುಲಕರ್ಣಿ ಅವರು ತಪ್ಪು ಮಾಡಿದ್ದರೇ ಕಾನೂನು ಪ್ರಕ್ರಿಯೆ ನಡೆಯಲಿ. ಆದರೆ, ವಿನಾಕಾರಣ ಅವರನ್ನು ರಾಜಕೀಯ ಪ್ರೇರಿತ ಕಾರಣಗಳಿಂದ ಸಿಲುಕಿಸಿದಲ್ಲಿ ಸಮಾಜ ಸಹಿಸುವುದಿಲ್ಲ. ಸಮಾಜದ ಪ್ರತಿ ಭಕ್ತರ ಪ್ರತಿಯಾಗಿ ಶ್ರೀ ಪೀಠದ ಕಾಳಜಿ ಸದಾ ಏಕರೀತಿಯಾಗಿರುತ್ತದೆ’ ಎಂದು ತಿಳಿಸಿದ್ದಾರೆ.