<p><strong>ಹರಿಹರ:</strong> ಕಳೆದ ವರ್ಷ ಸುರಿದ ಸಮೃದ್ಧ ಮುಂಗಾರು ತಾಲ್ಲೂಕಿನಲ್ಲಿ ಭತ್ತದ ಹುಲ್ಲಿನ ಮೇವಿನ ಭರಪೂರ ಲಭ್ಯತೆಗೆ ಕಾರಣವಾಗಿದ್ದು, ಹೈನುಗಾರಿಕೆಗೆ ಬಲ ನೀಡಿದೆ.</p>.<p>ತುಂಗಭದ್ರಾ ನದಿ, ಭದ್ರಾ ಕಾಲುವೆ, ದೇವರಬೆಳೆಕೆರೆ ಪಿಕ್ ಅಪ್ ಕಾಲುವೆ ಜಾಲದಿಂದಾಗಿ ಜಿಲ್ಲೆಯಲ್ಲಿ ಅತ್ಯಧಿಕ ಅಂದರೆ ಶೇ 90ರಷ್ಟು ನೀರಾವರಿ ಪ್ರದೇಶ ಹೊಂದಿರುವ ಖ್ಯಾತಿ ತಾಲ್ಲೂಕಿಗಿದೆ. ಈ ಎಲ್ಲಾ ನೀರಿನ ಲಭ್ಯತೆಯ ಜೊತೆಗೆ ಕಳೆದ ಬಾರಿಯ ಸಮೃದ್ಧ ಮಳೆಯೂ ತಾಲ್ಲೂಕಿನಲ್ಲಿ ಯಾವುದೇ ಕಂಟಕವಿಲ್ಲದೆ ಭತ್ತದ ಉತ್ತಮ ಇಳುವರಿಗೆ ಕಾರಣವಾಗಿದೆ. ಇದರ ಪರಿಣಾಮ ಭರಪೂರ ಭತ್ತದ ಹುಲ್ಲಿನ ಮೇವು ಲಭ್ಯವಾಗಿದೆ.</p>.<p><strong>24 ಲಕ್ಷ ಕೆ.ಜಿ. ಮೇವು ಲಭ್ಯ: </strong>ವಿವಿಧ ನೀರಾವರಿ ಮೂಲಗಳಿಂದಾಗಿ ಕಳೆದ ಬಾರಿಯ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ 60,000 ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಒಂದು ಎಕರೆ ಬೆಳೆಯಲ್ಲಿ ತಲಾ 35ರಿಂದ 40 ಕೆ.ಜಿ. ಭಾರದ 35ರಿಂದ 40 ಹುಲ್ಲಿನ ರೋಲ್ ಸಿಗುತ್ತವೆ.</p>.<p>ಹೀಗೆ 60,000 ಎಕರೆಯಲ್ಲಿ ಅಂದಾಜು 24 ಲಕ್ಷ ಕೆ.ಜಿ.ಯಷ್ಟು ಹುಲ್ಲಿನ ಮೇವಿನ ಉತ್ಪನ್ನವಾಗಿದೆ ಎನ್ನಲಾಗಿದೆ. ದನಕರುಗಳನ್ನು ಸಾಕಿದ ರೈತರು ತಮಗೆ ಅಗತ್ಯ ಇರುವಷ್ಟು ಹುಲ್ಲನ್ನು ಇಟ್ಟುಕೊಂಡು ಉಳಿದ ಹುಲ್ಲನ್ನು ಇತರೆಡೆಯ ರೈತರಿಗೆ ಮಾರಾಟ ಮಾಡುವ ಕಾರ್ಯವೂ ಭರದಿಂದ ಸಾಗಿದೆ.</p>.<p>ಜಮೀನಿಲ್ಲದೆ ಕೇವಲ ಹೈನುಗಾರಿಕೆ ಮಾಡುವವರು ಹುಲ್ಲಿನ ಖರೀದಿ ಪ್ರಕ್ರಿಯೆ ನಡೆಸಿದ್ದಾರೆ. ಹುಲ್ಲು ಸಾಗಣೆಗೆ ಏಜೆಂಟರೂ ಹುಟ್ಟಿಕೊಂಡಿದ್ದಾರೆ.</p>.<p>ತಾಲ್ಲೂಕಿನಾದ್ಯಂತ ಹಾಗೂ ಅಡಿಕೆ ನಾಡು ಎನಿಸಿರುವ ಚನ್ನಗಿರಿ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಹುಲ್ಲಿನ ಸಾಗಣೆ ನಡೆದಿದೆ. ಒಂದು ಟ್ರಾಕ್ಟರ್ ಎಂಜಿನ್ನಿಗೆ ಎರಡು ಟ್ರಾಲಿಗಳನ್ನು ಜೋಡಿಸಿ ಮೇವು ಸಾಗಣೆ ಮಾಡುವ ದ್ರಶ್ಯ ಸಾಮಾನ್ಯವಾಗಿದೆ.</p>.<p>ಹರಿಹರ ತಾಲ್ಲೂಕಿನಲ್ಲಿ ಒಟ್ಟು 40,000 ದನಕರುಗಳಿವೆ. ಭತ್ತದ ಹುಲ್ಲಿನ ಸಮೃದ್ಧ ಲಭ್ಯತೆಯು ತಾಲ್ಲೂಕಿನ ಹೈನುಗಾರಿಕೆಗೂ ಬಲ ನೀಡಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.</p>.<div><blockquote>ಒಂದು ಹುಲ್ಲಿನ ರೋಲ್ ಗೆ ₹ 200ರಿಂದ ₹ 240ರವರೆಗೆ ಮಾರಾಟವಾಗುತ್ತಿದ್ದು ರೈತರಿಗೆ ಅಲ್ಪ ಪ್ರಮಾಣದಲ್ಲಿ ಆರ್ಥಿಕ ಬಲ ಒದಗಿದೆ </blockquote><span class="attribution">–ಕುಂದೂರು ಮಂಜಪ್ಪ ರೈತ ಹೊಳೆಸಿರಿಗೆರೆ</span></div>.<div><blockquote>ಮಳೆಯ ಕೊರತೆ ಕಾಲುವೆಯಲ್ಲಿ ನೀರಿನ ಹರಿವು ಇರದಿದ್ದರೆ ರೈತರು ಮೇವಿನ ಬೀಜಕ್ಕೆ ಮುಗಿ ಬೀಳುತ್ತಿದ್ದರು ಈ ಬಾರಿ ಉತ್ತಮ ಮಳೆ ಬೆಳೆಯಿಂದಾಗಿ ಮೇವಿನ ಬೀಜಕ್ಕೆ ಬೇಡಿಕೆ ಇಳಿದಿದೆ. </blockquote><span class="attribution">–ತಿಪ್ಪೇಸ್ವಾಮಿ, ಪಶು ಪಾಲನ ಇಲಾಖೆ ಮುಖ್ಯ ವೈದ್ಯಾಧಿಕಾರಿ </span></div>.<div><blockquote>ನೀರಿನ ಲಭ್ಯತೆಯ ಜೊತೆಗೆ ಭತ್ತದ ಕೊಯ್ಲಿನ ಅವಧಿಯಲ್ಲಿ ಮಳೆ ಕಾಟ ಇಲ್ಲದ್ದರಿಂದ ಭತ್ತದ ಮೇವು ಹಾಳಾಗದೆ ಪೂರ್ಣ ಪ್ರಮಾಣದಲ್ಲಿ ರೈತರ ಕೈಗೆ ತಲುಪಿದೆ </blockquote><span class="attribution">–ನಟರಾಜ್, ಸಹಾಯಕ ಕ್ರಷಿ ನಿರ್ದೇಶಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ:</strong> ಕಳೆದ ವರ್ಷ ಸುರಿದ ಸಮೃದ್ಧ ಮುಂಗಾರು ತಾಲ್ಲೂಕಿನಲ್ಲಿ ಭತ್ತದ ಹುಲ್ಲಿನ ಮೇವಿನ ಭರಪೂರ ಲಭ್ಯತೆಗೆ ಕಾರಣವಾಗಿದ್ದು, ಹೈನುಗಾರಿಕೆಗೆ ಬಲ ನೀಡಿದೆ.</p>.<p>ತುಂಗಭದ್ರಾ ನದಿ, ಭದ್ರಾ ಕಾಲುವೆ, ದೇವರಬೆಳೆಕೆರೆ ಪಿಕ್ ಅಪ್ ಕಾಲುವೆ ಜಾಲದಿಂದಾಗಿ ಜಿಲ್ಲೆಯಲ್ಲಿ ಅತ್ಯಧಿಕ ಅಂದರೆ ಶೇ 90ರಷ್ಟು ನೀರಾವರಿ ಪ್ರದೇಶ ಹೊಂದಿರುವ ಖ್ಯಾತಿ ತಾಲ್ಲೂಕಿಗಿದೆ. ಈ ಎಲ್ಲಾ ನೀರಿನ ಲಭ್ಯತೆಯ ಜೊತೆಗೆ ಕಳೆದ ಬಾರಿಯ ಸಮೃದ್ಧ ಮಳೆಯೂ ತಾಲ್ಲೂಕಿನಲ್ಲಿ ಯಾವುದೇ ಕಂಟಕವಿಲ್ಲದೆ ಭತ್ತದ ಉತ್ತಮ ಇಳುವರಿಗೆ ಕಾರಣವಾಗಿದೆ. ಇದರ ಪರಿಣಾಮ ಭರಪೂರ ಭತ್ತದ ಹುಲ್ಲಿನ ಮೇವು ಲಭ್ಯವಾಗಿದೆ.</p>.<p><strong>24 ಲಕ್ಷ ಕೆ.ಜಿ. ಮೇವು ಲಭ್ಯ: </strong>ವಿವಿಧ ನೀರಾವರಿ ಮೂಲಗಳಿಂದಾಗಿ ಕಳೆದ ಬಾರಿಯ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ 60,000 ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಒಂದು ಎಕರೆ ಬೆಳೆಯಲ್ಲಿ ತಲಾ 35ರಿಂದ 40 ಕೆ.ಜಿ. ಭಾರದ 35ರಿಂದ 40 ಹುಲ್ಲಿನ ರೋಲ್ ಸಿಗುತ್ತವೆ.</p>.<p>ಹೀಗೆ 60,000 ಎಕರೆಯಲ್ಲಿ ಅಂದಾಜು 24 ಲಕ್ಷ ಕೆ.ಜಿ.ಯಷ್ಟು ಹುಲ್ಲಿನ ಮೇವಿನ ಉತ್ಪನ್ನವಾಗಿದೆ ಎನ್ನಲಾಗಿದೆ. ದನಕರುಗಳನ್ನು ಸಾಕಿದ ರೈತರು ತಮಗೆ ಅಗತ್ಯ ಇರುವಷ್ಟು ಹುಲ್ಲನ್ನು ಇಟ್ಟುಕೊಂಡು ಉಳಿದ ಹುಲ್ಲನ್ನು ಇತರೆಡೆಯ ರೈತರಿಗೆ ಮಾರಾಟ ಮಾಡುವ ಕಾರ್ಯವೂ ಭರದಿಂದ ಸಾಗಿದೆ.</p>.<p>ಜಮೀನಿಲ್ಲದೆ ಕೇವಲ ಹೈನುಗಾರಿಕೆ ಮಾಡುವವರು ಹುಲ್ಲಿನ ಖರೀದಿ ಪ್ರಕ್ರಿಯೆ ನಡೆಸಿದ್ದಾರೆ. ಹುಲ್ಲು ಸಾಗಣೆಗೆ ಏಜೆಂಟರೂ ಹುಟ್ಟಿಕೊಂಡಿದ್ದಾರೆ.</p>.<p>ತಾಲ್ಲೂಕಿನಾದ್ಯಂತ ಹಾಗೂ ಅಡಿಕೆ ನಾಡು ಎನಿಸಿರುವ ಚನ್ನಗಿರಿ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಹುಲ್ಲಿನ ಸಾಗಣೆ ನಡೆದಿದೆ. ಒಂದು ಟ್ರಾಕ್ಟರ್ ಎಂಜಿನ್ನಿಗೆ ಎರಡು ಟ್ರಾಲಿಗಳನ್ನು ಜೋಡಿಸಿ ಮೇವು ಸಾಗಣೆ ಮಾಡುವ ದ್ರಶ್ಯ ಸಾಮಾನ್ಯವಾಗಿದೆ.</p>.<p>ಹರಿಹರ ತಾಲ್ಲೂಕಿನಲ್ಲಿ ಒಟ್ಟು 40,000 ದನಕರುಗಳಿವೆ. ಭತ್ತದ ಹುಲ್ಲಿನ ಸಮೃದ್ಧ ಲಭ್ಯತೆಯು ತಾಲ್ಲೂಕಿನ ಹೈನುಗಾರಿಕೆಗೂ ಬಲ ನೀಡಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.</p>.<div><blockquote>ಒಂದು ಹುಲ್ಲಿನ ರೋಲ್ ಗೆ ₹ 200ರಿಂದ ₹ 240ರವರೆಗೆ ಮಾರಾಟವಾಗುತ್ತಿದ್ದು ರೈತರಿಗೆ ಅಲ್ಪ ಪ್ರಮಾಣದಲ್ಲಿ ಆರ್ಥಿಕ ಬಲ ಒದಗಿದೆ </blockquote><span class="attribution">–ಕುಂದೂರು ಮಂಜಪ್ಪ ರೈತ ಹೊಳೆಸಿರಿಗೆರೆ</span></div>.<div><blockquote>ಮಳೆಯ ಕೊರತೆ ಕಾಲುವೆಯಲ್ಲಿ ನೀರಿನ ಹರಿವು ಇರದಿದ್ದರೆ ರೈತರು ಮೇವಿನ ಬೀಜಕ್ಕೆ ಮುಗಿ ಬೀಳುತ್ತಿದ್ದರು ಈ ಬಾರಿ ಉತ್ತಮ ಮಳೆ ಬೆಳೆಯಿಂದಾಗಿ ಮೇವಿನ ಬೀಜಕ್ಕೆ ಬೇಡಿಕೆ ಇಳಿದಿದೆ. </blockquote><span class="attribution">–ತಿಪ್ಪೇಸ್ವಾಮಿ, ಪಶು ಪಾಲನ ಇಲಾಖೆ ಮುಖ್ಯ ವೈದ್ಯಾಧಿಕಾರಿ </span></div>.<div><blockquote>ನೀರಿನ ಲಭ್ಯತೆಯ ಜೊತೆಗೆ ಭತ್ತದ ಕೊಯ್ಲಿನ ಅವಧಿಯಲ್ಲಿ ಮಳೆ ಕಾಟ ಇಲ್ಲದ್ದರಿಂದ ಭತ್ತದ ಮೇವು ಹಾಳಾಗದೆ ಪೂರ್ಣ ಪ್ರಮಾಣದಲ್ಲಿ ರೈತರ ಕೈಗೆ ತಲುಪಿದೆ </blockquote><span class="attribution">–ನಟರಾಜ್, ಸಹಾಯಕ ಕ್ರಷಿ ನಿರ್ದೇಶಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>