ಸಮಾಜವನ್ನು ವಿಭಿನ್ನವಾಗಿ ಅರಿಯುವುದನ್ನು ಶಿಕ್ಷಣ ಕಲಿಸುತ್ತದೆ. ಅವರು ಜೀವನದಲ್ಲಿ ಸದಾ ಸುಖಿಗಳಾಗಿರುವುದಲ್ಲದೆ ದೇಶಕ್ಕೆ ಆಸ್ತಿಯಾಗುತ್ತಾರೆ. ಕಲಿಕೆಗೆ ಜಾತಿ,ಲಿಂಗ,ಧರ್ಮಗಳು,ಬಡತನ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ನನ್ನ ಕುಟುಂಬವೇ ಸಾಕ್ಷಿಯಾಗಿದೆ. ಖಾಸಗಿ ಸಂಸ್ಥೆಯಲ್ಲಿ ಜವಾನನಾಗಿ ಕೆಲಸ ಮಾಡಿದ ನಾನು ಶ್ರಮಪಟ್ಟಿದ್ದರಿಂದ ನನ್ನ ಪುತ್ರ ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾಗಿ ಇಂದು ಉನ್ನತ ಅಧಿಕಾರಿಯಾಗಿದ್ದಾನೆ. ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮುಖ್ಯವಾಗುತ್ತದೆ ಎಂದು ಅರ್ಥೈಸಿದರು.