ದಾವಣಗೆರೆ: ಕಮಿಷನ್ ಹೆಚ್ಚಳ, ತೈಲ ದರ ಇಳಿಕೆಯಿಂದ ಆಗಿರುವ ನಷ್ಟವನ್ನು ಮರುಪಾವತಿ ಮಾಡಿಕೊಡಲು ಆಗ್ರಹಿಸಿ ಪೆಟ್ರೋಲ್ ಬಂಕ್ ಮಾಲೀಕರು ಮಂಗಳವಾರ ಖರೀದಿ ಸ್ಥಗಿತಗೊಳಿಸಿದ್ದಾರೆ. ಆದರೆ ಬಂಕ್ನಲ್ಲಿ ತೈಲ ಸಂಗ್ರಹ ಮುಗಿಯುವವರೆಗೆ ಗ್ರಾಹಕರಿಗೆ ಡೀಸೆಲ್ ಪೆಟ್ರೋಲ್ ಒದಗಿಸಲಾಗುತ್ತಿದೆ.
ಹಿಂದೂಸ್ಥಾನ್ ಪೆಟ್ರೋಲಿಯಂ(ಎಚ್.ಪಿ), ಇಂಡಿಯನ್ ಆಯಿಲ್ ಮತ್ತು ಬಿಪಿಸಿಎಲ್ ಕಂಪನಿಗಳಿಂದ ತೈಲ ಖರೀದಿಯನ್ನು ಒಂದು ದಿನದ ಮಟ್ಟಿಗೆ ನಿಲ್ಲಿಸಿದ್ದಾರೆ. ಬಂಕ್ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಬೆಳಿಗ್ಗೆ ಬಹುತೇಕ ಪೆಟ್ರೋಲ್ ಬಂಕ್ನಲ್ಲಿ ವಾಹನಗಳ ಸಾಲು ಇದ್ದವು. ನಿಧಾನಕ್ಕೆ ಕಡಿಮೆಯಾಗಿವೆ.
ಪೆಟ್ರೋಲ್ನ ಸಮಸ್ಯೆ ಅಷ್ಟಾಗಿ ಉಂಟಾಗಿಲ್ಲ. ಆದರೆ ಡೀಸೆಲ್ ಕೊರತೆ ಕೆಲವು ಬಂಕ್ಗಳಲ್ಲಿ ಉಂಟಾಗಿದೆ. ಹದಡಿ ರಸ್ತೆಯಲ್ಲಿರುವ ಬಂಕ್ಗಳಲ್ಲಿ ಡೀಸೆಲ್ ಲಭ್ಯವಿವೆ. 2000 ಲೀಟರ್ ಡೀಸೆಲ್ ಇನ್ನಿದೆ. ಮಧ್ಯಾಹ್ನ ವರೆಗೆ ಬರಬಹುದು. ಬಳಿಕ ಡೀಸೆಲ್ ಕೊರತೆಯಾಗಬಹುದು ಎಂದು ಹದಡಿ ರಸ್ತೆಯ ಮೋರ್ ಬಳಿಯ ಪೆಟ್ರೋಲ್ ಬಂಕ್ನ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.