ದಾವಣಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರವು ಖಾದಿ ಮೂಲೆಗುಂಪು ಮಾಡಿ ಪಾಲಿಸ್ಟರ್ ಬಟ್ಟೆಯಲ್ಲಿ ಭಾರತದ ಧ್ವಜ ಮಾಡಿಸಿರುವುದನ್ನು ನೋಡಿದರೆ ದೇಶಪ್ರೇಮ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಖಾದಿ ಗ್ರಾಮೋದ್ಯೋಗ, ಗುಡಿ ಕೈಗಾರಿಕೆಗಳು ಅಭಿವೃದ್ಧಿ ಆಗಬೇಕು. ಅದನ್ನು ಬಿಟ್ಟು ಯಾರಿಗೋ ಗುತ್ತಿಗೆ ನೀಡಿ ಖಾದಿಯಲ್ಲಿ ಧ್ವಜ ರೂಪಿಸದೇ ಇರುವುದು ದೇಶಕ್ಕೆ ಮಾಡಿರುವ ಅಪಮಾನ ಎಂದು ಇಲ್ಲಿವರೆಗಿನ ಎಲ್ಲ ಸ್ವಾತಂತ್ರ್ಯ ಉತ್ಸವಗಳನ್ನು ಕಂಡಿರುವ ಹಿರಿಯರಾದ ಜೆ. ಕೆ. ಕೊಟ್ರಬಸಪ್ಪ ಕಿಡಿಕಾರಿದ್ದಾರೆ.