<p><strong>ಮಲೇಬೆನ್ನೂರು:</strong> 2025–26ನೇ ಸಾಲಿನ ಆಯವ್ಯಯದಲ್ಲಿ ಪುರಸಭೆ ವ್ಯಾಪ್ತಿಯ ಮೂಲ ಸೌಲಭ್ಯ ಹಾಗೂ ಅಭಿವೃದ್ಧಿ ಕೆಲಸಕ್ಕೆ ಹೆಚ್ಚಿನ ಹಣ ಮೀಸಲಿಡುವಂತೆ ಸಾರ್ವಜನಿಕರು ಆಗ್ರಹಿಸಿದರು.</p>.<p>ಪುರಸಭೆ ಪ್ರಭಾರ ಅಧ್ಯಕ್ಷೆ ಸುಮಯ್ಯಾಬಾನು ನೇತೃತ್ವದಲ್ಲಿ ಮಂಗಳವಾರ ನಡೆದ 2 ಹಂತದ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಆಗ್ರಹಿಸಿದರು.</p>.<p>ರಾಜ್ಯ ಹೆದ್ದಾರಿ–25ಕ್ಕೆ ವಿಭಜಕ ಅಳವಡಿಸಲು ಪುರಸಭೆಯಿಂದ ಅನುದಾನ ನೀಡಲು ಸದಸ್ಯ ಕೆ.ಜಿ. ಲೋಕೇಶ್ ಒತ್ತಾಯಿಸಿದರೆ, ಪುರಸಭೆಗೆ ಸ್ವಂತ ನಿವೇಶನ ಕೊಳ್ಳಲು ಹಣ ಮೀಸಲಿಡಲು ಸದಸ್ಯ ಗೌಡ್ರ ಮಂಜಣ್ಣ ಕೋರಿದರು.</p>.<p>ನಿಟ್ಟೂರು ರಸ್ತೆ ಮೋರಿ ನಿರ್ಮಾಣ ಹಾಗೂ ಜಿಬಿಎಂಎಸ್ ಫಾರಂ ಕುರಿತಾಗಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬೋವಿ ಕುಮಾರ್, ವಿಶೇಷ ಚೇತನರಿಗೆ ಅನುದಾನ ಮೀಸಲಿಡುವ ಬಗ್ಗೆ ಸದಸ್ಯ ಸಾಬೀರ್ ಅಲಿ ಗಮನ ಸೆಳೆದರು.</p>.<p>ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ಪಟ್ಟಣದಲ್ಲಿ ಬೀದಿ ನಾಯಿ ಹಾಗೂ ಹಂದಿಕಾಟ ನಿಯಂತ್ರಣ, ಸಂತೆ ಮೈದಾನದ ಮೀನು ಮಾಂಸ ಮಾರುಕಟ್ಟೆ ಸ್ವಚ್ಛತೆಗೆ ವಿಶೇಷ ಅನುದಾನ, ಬೋವಿ ಶಿವು ಪಟ್ಟಣದ ಸಮಗ್ರ ಅಭಿವೃದ್ಧಿ ಸೇರಿ ವಿವಿಧ ಹವಾಲುಗಳನ್ನು ಸಭೆಯ ಮುಂದಿಟ್ಟರು.</p>.<p>ಸಭೆಯಲ್ಲಿ ಚರ್ಚಿಸಿದ ವಿಷಯಗಳನ್ನು ಅನುಷ್ಠಾನಕ್ಕೆ ತರಲು ನಾಮ ನಿರ್ದೇಶಿತ ಸದಸ್ಯ ವೀರಯ್ಯ ಸ್ವಾಮಿ ಮನವಿ ಮಾಡಿದರು.</p>.<p>ಮುಖ್ಯಾಧಿಕಾರಿ ನಿರಂಜನಿ ಮಾತನಾಡಿ, ಉಪಸ್ಥಿತರ ಸಲಹೆಗಳನ್ನು ಅನುಷ್ಠಾನಗೊಳಿಸಲು ಆಯವ್ಯಯದಲ್ಲಿ ಸೇರಿಸುವ ಭರವಸೆ ನೀಡಿದರು.</p>.<p>ಸ್ಥಾಯಿ ಸಮಿತಿ ಅಧ್ಯಕ್ಷ ಶಬ್ಬೀರ್ ಖಾನ್, ಕಂದಾಯಾಧಿಕಾರಿ ಧನಂಜಯ ಕಟ್ಟೀಮನಿ, ಜೆಇ ರಾಘವೇಂದ್ರ, ಕಚೇರಿ ವ್ಯವಸ್ಥಾಪಕಿ ಜಯಲಕ್ಷ್ಮಿ, ಪರಿಸರ ಎಂಜಿನಿಯರ್ ಉಮೇಶ್ ಆರೋಗ್ಯ ನಿರೀಕ್ಷಕ ಶಿವರಾಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು:</strong> 2025–26ನೇ ಸಾಲಿನ ಆಯವ್ಯಯದಲ್ಲಿ ಪುರಸಭೆ ವ್ಯಾಪ್ತಿಯ ಮೂಲ ಸೌಲಭ್ಯ ಹಾಗೂ ಅಭಿವೃದ್ಧಿ ಕೆಲಸಕ್ಕೆ ಹೆಚ್ಚಿನ ಹಣ ಮೀಸಲಿಡುವಂತೆ ಸಾರ್ವಜನಿಕರು ಆಗ್ರಹಿಸಿದರು.</p>.<p>ಪುರಸಭೆ ಪ್ರಭಾರ ಅಧ್ಯಕ್ಷೆ ಸುಮಯ್ಯಾಬಾನು ನೇತೃತ್ವದಲ್ಲಿ ಮಂಗಳವಾರ ನಡೆದ 2 ಹಂತದ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಆಗ್ರಹಿಸಿದರು.</p>.<p>ರಾಜ್ಯ ಹೆದ್ದಾರಿ–25ಕ್ಕೆ ವಿಭಜಕ ಅಳವಡಿಸಲು ಪುರಸಭೆಯಿಂದ ಅನುದಾನ ನೀಡಲು ಸದಸ್ಯ ಕೆ.ಜಿ. ಲೋಕೇಶ್ ಒತ್ತಾಯಿಸಿದರೆ, ಪುರಸಭೆಗೆ ಸ್ವಂತ ನಿವೇಶನ ಕೊಳ್ಳಲು ಹಣ ಮೀಸಲಿಡಲು ಸದಸ್ಯ ಗೌಡ್ರ ಮಂಜಣ್ಣ ಕೋರಿದರು.</p>.<p>ನಿಟ್ಟೂರು ರಸ್ತೆ ಮೋರಿ ನಿರ್ಮಾಣ ಹಾಗೂ ಜಿಬಿಎಂಎಸ್ ಫಾರಂ ಕುರಿತಾಗಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬೋವಿ ಕುಮಾರ್, ವಿಶೇಷ ಚೇತನರಿಗೆ ಅನುದಾನ ಮೀಸಲಿಡುವ ಬಗ್ಗೆ ಸದಸ್ಯ ಸಾಬೀರ್ ಅಲಿ ಗಮನ ಸೆಳೆದರು.</p>.<p>ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ಪಟ್ಟಣದಲ್ಲಿ ಬೀದಿ ನಾಯಿ ಹಾಗೂ ಹಂದಿಕಾಟ ನಿಯಂತ್ರಣ, ಸಂತೆ ಮೈದಾನದ ಮೀನು ಮಾಂಸ ಮಾರುಕಟ್ಟೆ ಸ್ವಚ್ಛತೆಗೆ ವಿಶೇಷ ಅನುದಾನ, ಬೋವಿ ಶಿವು ಪಟ್ಟಣದ ಸಮಗ್ರ ಅಭಿವೃದ್ಧಿ ಸೇರಿ ವಿವಿಧ ಹವಾಲುಗಳನ್ನು ಸಭೆಯ ಮುಂದಿಟ್ಟರು.</p>.<p>ಸಭೆಯಲ್ಲಿ ಚರ್ಚಿಸಿದ ವಿಷಯಗಳನ್ನು ಅನುಷ್ಠಾನಕ್ಕೆ ತರಲು ನಾಮ ನಿರ್ದೇಶಿತ ಸದಸ್ಯ ವೀರಯ್ಯ ಸ್ವಾಮಿ ಮನವಿ ಮಾಡಿದರು.</p>.<p>ಮುಖ್ಯಾಧಿಕಾರಿ ನಿರಂಜನಿ ಮಾತನಾಡಿ, ಉಪಸ್ಥಿತರ ಸಲಹೆಗಳನ್ನು ಅನುಷ್ಠಾನಗೊಳಿಸಲು ಆಯವ್ಯಯದಲ್ಲಿ ಸೇರಿಸುವ ಭರವಸೆ ನೀಡಿದರು.</p>.<p>ಸ್ಥಾಯಿ ಸಮಿತಿ ಅಧ್ಯಕ್ಷ ಶಬ್ಬೀರ್ ಖಾನ್, ಕಂದಾಯಾಧಿಕಾರಿ ಧನಂಜಯ ಕಟ್ಟೀಮನಿ, ಜೆಇ ರಾಘವೇಂದ್ರ, ಕಚೇರಿ ವ್ಯವಸ್ಥಾಪಕಿ ಜಯಲಕ್ಷ್ಮಿ, ಪರಿಸರ ಎಂಜಿನಿಯರ್ ಉಮೇಶ್ ಆರೋಗ್ಯ ನಿರೀಕ್ಷಕ ಶಿವರಾಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>