‘ರಾಮಮಂದಿರ ರಾಷ್ಟ್ರೀಯ ಸ್ಮಾರಕವಾಗುವ ನಿಟ್ಟಿನಲ್ಲಿ ದೇಣಿಗೆ ಸಂಗ್ರಹಿಸಲು ಹೋದಾಗ ಅಭೂತಪೂರ್ವ ಸ್ವಾಗತ ಸಿಕ್ಕಿತು. ಸಾಮಾನ್ಯ ಜನರಿಂದ ಹಿಡಿದು ಶ್ರೀಮಂತರು ಶ್ರದ್ಧೆ, ಭಕ್ತಿ ತೋರಿಸಿ ದೇಣಿಗೆ ನೀಡಿದರು. ದೇಶದಲ್ಲಿ ನಮ್ಮ ಕಾರ್ಯಕರ್ತರು 12 ಕೋಟಿ ಮನೆಗಳಿಗೆ ಭೇಟಿ ನೀಡಿ, 70 ಕೋಟಿ ಜನರನ್ನು ಸಂಪರ್ಕಿಸಿದರು. ಅಂದಾಜು 5 ಲಕ್ಷ ಗ್ರಾಮಗಳಿಗೆ ಭೇಟಿ ನೀಡಿದ್ದು, ಒಟ್ಟು ₹ 3000 ಕೋಟಿ ಹಣ ಸಂಗ್ರವಾಗಿದೆ. ಜನರ ಸಂಕಲ್ಪದಿಂದ ರಾಮಮಂದಿರ ನಿರ್ಮಾಣ ಸಾಧ್ಯವಾಯಿತು’ ಎಂದರು.