ದಾವಣಗೆರೆ: ‘ಉಪ್ಪು ತಿಂದವರು ನೀರು ಕುಡಿಯಲೇಬೇಕು. ಡ್ರಗ್ಸ್ ಮಾಫಿಯದಲ್ಲಿ ತೊಡಗಿಕೊಂಡವರು ಶಿಕ್ಷೆ ಅನುಭವಿಸುತ್ತಾರೆ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಮಂಗಳವಾರ ಹೇಳಿದರು.
ಸುದ್ದಿಗಾರರ ಜತೆಗೆ ಮಾತನಾಡುತ್ತಾ, ‘ಕ್ಯಾಸಿನೊದಲ್ಲಿ ಡ್ರಗ್ಸ್ ಇರಲ್ಲ. ಜೂಜು ಇರುತ್ತದೆ. ಅಲ್ಲಿಗೆ ಹೋಗೋದು ಅಪರಾಧವಲ್ಲ. ಮಹಿಳೆಯರ ಜತೆಗೆ ಡ್ಯಾನ್ಸ್ ಮಾಡಿದ್ರೆ, ಡ್ರಗ್ಸ್ ತಗೊಂಡಂತೆ ಅಲ್ಲ. ಡ್ರಗ್ಸ್ ಮಾರೋದು ಅಪರಾಧ’ ಎಂದು ವಿವರಿಸಿದರು.
‘ಕೆಲವರ ಹೆಸರು ಕೆಡಿಸಲು ಅವರ ವಿರೋಧಿಗಳು ಹೆಸರು ಹೇಳುತ್ತಾರೆ. ನಿಜವಾಗಿ ಈ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ಶಿಕ್ಷೆಯಾಗಬೇಕು’ ಎಂದರು.