ದಾವಣಗೆರೆ: ಕೆಎಆರ್ಟಿಸಿ ದಾವಣಗೆರೆ ವಿಭಾಗದಿಂದ ಚಿತ್ರದುರ್ಗ, ಹಂಪಿ ಸಹಿತ ವಿವಿಧೆಡೆ ವಿಶೇಷ ಪ್ಯಾಕೇಜ್ ಬಸ್ಗಳನ್ನು ಕಲ್ಪಿಸಲು ನಿರ್ಧರಿಸಿದೆ.
ದಾವಣಗೆರೆಯಿಂದ ಪ್ರತಿ ಭಾನುವಾರ ಬೆಳಿಗ್ಗೆ 7ಕ್ಕೆ ಹೊರಡುವ ಬಸ್ ಚಿತ್ರದುರ್ಗದ ಕೋಟೆ, ಮುರುಘಾಮಠ, ಚಂದ್ರವಳ್ಳಿ ಹಾಗೂ ಹಿರಿಯೂರು ಸಮೀಪದ ವಾಣಿವಿಲಾಸ ಸಾಗರ ಜಲಾಶಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ರಾತ್ರಿ 8ಕ್ಕೆ ಹಿಂದಿರುಗಲಿದೆ. ಪ್ರಯಾಣ ದರ ₹ 350 ನಿಗದಿಪಡಿಸಲಾಗಿದೆ.
ದಾವಣಗೆರೆಯಿಂದ ಪ್ರತಿ ಭಾನುವಾರ ಬೆಳಿಗ್ಗೆ 7ಕ್ಕೆ ಹೊರಡುವ ಬಸ್ ಹೊಸಪೇಟೆ, ಹಂಪಿ, ಕಮಲಾಪುರ, ಹುಲಿಗಿ ದೇವಸ್ಥಾನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ರಾತ್ರಿ 9ಕ್ಕೆ ಹಿಂದಿರುಗಲಿದೆ. ಪ್ರಯಾಣ ದರ ₹ 500 ನಿಗದಿಪಡಿಸಲಾಗಿದೆ.
ದಾವಣಗೆರೆ, ಹರಿಹರದಿಂದ ಆಗಸ್ಟ್ 1ರಿಂದ ನಿತ್ಯ ಬೆಳಿಗ್ಗೆ 7ಕ್ಕೆ ಹೊರಡುವ ಬಸ್ ಶಿರಸಿಯ ಮಾರಿಕಾಂಬ ದೇವಸ್ಥಾನ, ಜೋಗಫಾಲ್ಸ್ ವೀಕ್ಷಣೆ ಮುಗಿಸಿ ರಾತ್ರಿ 8ಕ್ಕೆ ಹಿಂತಿರುಗಲಿದೆ. ₹ 500 ಪ್ರಯಾಣ ದರ ನಿಗದಿಪಡಿಸಲಾಗಿದೆ.
ಮುಂಗಡ ಬುಕ್ಕಿಂಗ್ ಕೌಂಟರ್ಗಳಲ್ಲಿ ಹಾಗೂ ಆನ್ಲೈನ್ www.ksrtc.inಮೂಲಕವೂ ಮುಂಗಡ ಸೀಟು ಕಾಯ್ದಿರಿಸಬಹುದು ಎಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.