<p><strong>ಉಚ್ಚಂಗಿದುರ್ಗ:</strong> ಇಲ್ಲಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉಚ್ಚೆಂಗೆಮ್ಮದೇವಿ ದೇವಸ್ಥಾನದಲ್ಲಿ ಸೋಮವಾರ ನಡೆದ ಕಾಣಿಕೆ ಹುಂಡಿ ಎಣಿಕೆಯಲ್ಲಿ ಹರಕೆ ಪತ್ರಗಳು ಗಮನ ಸೆಳೆದವು.</p>.<p>ಮುಜರಾಯಿ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿಗಳು ಹಾಗೂ ಉಚ್ಚೆಂಗೆಮ್ಮದೇವಿ ವ್ಯವಸ್ಥಾಪಕ ಸೇವಾ ಸಮಿತಿ ನೇತೃತ್ವದ ಎಣಿಕೆ ಕಾರ್ಯದಲ್ಲಿ ಕೇವಲ 3 ತಿಂಗಗಳಲ್ಲಿ ₹ 20,70,890 ಸಂಗ್ರಹವಾಗಿದೆ.</p>.<p><strong>ದಾಸೋಹ ಹುಂಡಿ</strong>: ದಾಸೋಹ ಕಾರ್ಯಕ್ರಮಕ್ಕೆ ಪ್ರತ್ಯೇಕ ಹುಂಡಿ ಇಡಲಾಗಿದ್ದು, ಎಣಿಕೆಯಲ್ಲಿ ₹ 1,84,685 ಸಂಗ್ರಹವಾಗಿದೆ. ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆ ದಿನಗಳಲ್ಲಿ ದಾಸೋಹ ನಡೆಸಲಾಗುತ್ತಿದೆ.<br />ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಯಿತು.<br /><br /><strong>ಹರಕೆ ಪತ್ರ</strong>: ಹುಂಡಿಯಲ್ಲಿ ಕಂಡ ಹರಕೆ ಪತ್ರಗಳು ಗಮನ ಸೆಳೆದವು. ಭಕ್ತರೊಬ್ಬರು ‘ಎರಡು ತಿಂಗಳಲ್ಲಿ ಉತ್ತಮ ಸಂಸ್ಕಾರವುಳ್ಳ ಕನ್ಯೆ ಸಿಕ್ಕಿ ವಿವಾಹವಾಗಿ, ನನಗೆ ಇರುವ ದುಷ್ಟರು ದೂರವಾಗುವ ರೀತಿಯಲ್ಲಿ ದೇವಿ ಕೃಪೆ ತೋರಿದರೆ ಊಹಿಸಲಾಗದ ಭಕ್ತಿ ಅರ್ಪಿಸುತ್ತೇನೆ’ ಎಂದು ಬರೆದಿದ್ದಾರೆ.</p>.<p>ಭಕ್ತೆಯೊಬ್ಬರು, 'ತನಗಿರುವ ಆರೋಗ್ಯದ ಸಮಸ್ಯೆ ದೂರವಾಗಿ, ಮಕ್ಕಳ ಓದಿನ ಭವಿಷ್ಯ ಉತ್ತಮವಾಗಿ ಸಾಗಿದರೆ, ಎರಡು ಚಿನ್ನದ ತಾಳಿ ಅರ್ಪಿಸುತ್ತೇನೆ’ ಎನ್ನುವ ಪತ್ರಗಳು ಪತ್ತೆಯಾದವು.<br /><br />ಕಂದಾಯ ನಿರೀಕ್ಷಕ ಶ್ರೀಧರ್, ಮುಜರಾಯಿ ಇಲಾಖೆ ಸಿಬ್ಬಂದಿ ಶಾಂತಮ್ಮ, ಕೊಟ್ರೇಶ್, ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಸೋಮಶೇಖರ್, ಸಿಬ್ಬಂದಿ ಸತೀಶ್, ತೆಗ್ಗಿನಮನೆ ರಮೇಶ್, ಸಮಿತಿ ಮಾಜಿ ಅಧ್ಯಕ್ಷ ಕೆಂಚಪ್ಪ ಸದಸ್ಯರಾದ ಕೆ. ಸಿದ್ದೇಶ್ವರಗೌಡ, ಸಿದ್ದಲಿಂಗಪ್ಪ, ದಂಡ್ಯಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಚ್ಚಂಗಿದುರ್ಗ:</strong> ಇಲ್ಲಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉಚ್ಚೆಂಗೆಮ್ಮದೇವಿ ದೇವಸ್ಥಾನದಲ್ಲಿ ಸೋಮವಾರ ನಡೆದ ಕಾಣಿಕೆ ಹುಂಡಿ ಎಣಿಕೆಯಲ್ಲಿ ಹರಕೆ ಪತ್ರಗಳು ಗಮನ ಸೆಳೆದವು.</p>.<p>ಮುಜರಾಯಿ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿಗಳು ಹಾಗೂ ಉಚ್ಚೆಂಗೆಮ್ಮದೇವಿ ವ್ಯವಸ್ಥಾಪಕ ಸೇವಾ ಸಮಿತಿ ನೇತೃತ್ವದ ಎಣಿಕೆ ಕಾರ್ಯದಲ್ಲಿ ಕೇವಲ 3 ತಿಂಗಗಳಲ್ಲಿ ₹ 20,70,890 ಸಂಗ್ರಹವಾಗಿದೆ.</p>.<p><strong>ದಾಸೋಹ ಹುಂಡಿ</strong>: ದಾಸೋಹ ಕಾರ್ಯಕ್ರಮಕ್ಕೆ ಪ್ರತ್ಯೇಕ ಹುಂಡಿ ಇಡಲಾಗಿದ್ದು, ಎಣಿಕೆಯಲ್ಲಿ ₹ 1,84,685 ಸಂಗ್ರಹವಾಗಿದೆ. ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆ ದಿನಗಳಲ್ಲಿ ದಾಸೋಹ ನಡೆಸಲಾಗುತ್ತಿದೆ.<br />ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಯಿತು.<br /><br /><strong>ಹರಕೆ ಪತ್ರ</strong>: ಹುಂಡಿಯಲ್ಲಿ ಕಂಡ ಹರಕೆ ಪತ್ರಗಳು ಗಮನ ಸೆಳೆದವು. ಭಕ್ತರೊಬ್ಬರು ‘ಎರಡು ತಿಂಗಳಲ್ಲಿ ಉತ್ತಮ ಸಂಸ್ಕಾರವುಳ್ಳ ಕನ್ಯೆ ಸಿಕ್ಕಿ ವಿವಾಹವಾಗಿ, ನನಗೆ ಇರುವ ದುಷ್ಟರು ದೂರವಾಗುವ ರೀತಿಯಲ್ಲಿ ದೇವಿ ಕೃಪೆ ತೋರಿದರೆ ಊಹಿಸಲಾಗದ ಭಕ್ತಿ ಅರ್ಪಿಸುತ್ತೇನೆ’ ಎಂದು ಬರೆದಿದ್ದಾರೆ.</p>.<p>ಭಕ್ತೆಯೊಬ್ಬರು, 'ತನಗಿರುವ ಆರೋಗ್ಯದ ಸಮಸ್ಯೆ ದೂರವಾಗಿ, ಮಕ್ಕಳ ಓದಿನ ಭವಿಷ್ಯ ಉತ್ತಮವಾಗಿ ಸಾಗಿದರೆ, ಎರಡು ಚಿನ್ನದ ತಾಳಿ ಅರ್ಪಿಸುತ್ತೇನೆ’ ಎನ್ನುವ ಪತ್ರಗಳು ಪತ್ತೆಯಾದವು.<br /><br />ಕಂದಾಯ ನಿರೀಕ್ಷಕ ಶ್ರೀಧರ್, ಮುಜರಾಯಿ ಇಲಾಖೆ ಸಿಬ್ಬಂದಿ ಶಾಂತಮ್ಮ, ಕೊಟ್ರೇಶ್, ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಸೋಮಶೇಖರ್, ಸಿಬ್ಬಂದಿ ಸತೀಶ್, ತೆಗ್ಗಿನಮನೆ ರಮೇಶ್, ಸಮಿತಿ ಮಾಜಿ ಅಧ್ಯಕ್ಷ ಕೆಂಚಪ್ಪ ಸದಸ್ಯರಾದ ಕೆ. ಸಿದ್ದೇಶ್ವರಗೌಡ, ಸಿದ್ದಲಿಂಗಪ್ಪ, ದಂಡ್ಯಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>