ಕಿಡಿಗೇಡಿಗಳು ಮಾರ್ಚ್ 15, 16 ಮತ್ತು 17ರಂದು ಮೂರು ದಿನಗಳು ರಾತ್ರಿ ಸಮಯದಲ್ಲಿ ಪ್ರತಿದಿನ ಇಬ್ಬರು ರೈತರ ಬಣವೆಗಳಿಗೆ ಬೆಂಕಿ ಹಚ್ಚಿದ್ದಾರೆ. ಶಂಭುಲಿಂಗಯ್ಯ, ಉಮಾಪತಿ, ಕೆ. ಬಿ. ಬಸವರಾಜಪ್ಪ, ಪಿ.ಬಸವರಾಜಪ್ಪ,ಎಚ್.ಎಸ್. ಹನುಮಂತಪ್ಪ ಮತ್ತು ಎಂ.ಜಿ. ಯೋಗೇಂದ್ರಪ್ಪ ಅವರಿಗೆ ಸೇರಿದ ಬಣವೆಗಳು ಸುಟ್ಟು ಭಸ್ಮವಾಗಿವೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎಸ್. ಹನುಮಂತಪ್ಪ ತಿಳಿಸಿದರು.