<p><strong>ಮಲೇಬೆನ್ನೂರು:</strong> ಪಟ್ಟಣದಲ್ಲಿ ಸಾಮಾಜಿಕ– ಶೈಕ್ಷಣಿಕ ಸಮೀಕ್ಷೆಗೆ ನಿಯೋಜಿಸಿದ್ದ ಶಿಕ್ಷಕಿ ಸಾಕಮ್ಮ ಮಂಗಳವಾರ ಅಸ್ವಸ್ಥರಾಗಿ ಬಿದ್ದಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ.</p>.<p>‘ಕಳೆದ ಒಂದು ವಾರದಿಂದ ಸಮೀಕ್ಷೆಯಲ್ಲಿ ಪಟ್ಟಣದ ವಿವಿಧಡೆ ಓಡಾಟ ನಡೆಸಿದ್ದ ಕಾರಣ ಮೊಣಕಾಲು, ಮಂಡಿ ನೋವು ಹಾಗೂ ಜ್ವರ ಬಂದಿದೆ. ಕೆಲಸ ಮಾಡಲು ಕಷ್ಟ ಆಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ</p>.<p>ವಿಷಯ ತಿಳಿಯುತ್ತಿದ್ದಂತೆ ಪಿಎಸ್ಐ ಹಾರೂನ್ ಅಖ್ತರ್ ಆಗಮಿಸಿ ಅಸ್ವಸ್ಥರಾಗಿದ್ದ ಶಿಕ್ಷಕಿಯನ್ನು ಆಸ್ಪತ್ರೆಗೆ ಕಳುಹಿಸಿ ನಾಗರಿಕರ ಪ್ರಶಂಸೆಗೆ ಪಾತ್ರರಾದರು.</p>
<p><strong>ಮಲೇಬೆನ್ನೂರು:</strong> ಪಟ್ಟಣದಲ್ಲಿ ಸಾಮಾಜಿಕ– ಶೈಕ್ಷಣಿಕ ಸಮೀಕ್ಷೆಗೆ ನಿಯೋಜಿಸಿದ್ದ ಶಿಕ್ಷಕಿ ಸಾಕಮ್ಮ ಮಂಗಳವಾರ ಅಸ್ವಸ್ಥರಾಗಿ ಬಿದ್ದಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ.</p>.<p>‘ಕಳೆದ ಒಂದು ವಾರದಿಂದ ಸಮೀಕ್ಷೆಯಲ್ಲಿ ಪಟ್ಟಣದ ವಿವಿಧಡೆ ಓಡಾಟ ನಡೆಸಿದ್ದ ಕಾರಣ ಮೊಣಕಾಲು, ಮಂಡಿ ನೋವು ಹಾಗೂ ಜ್ವರ ಬಂದಿದೆ. ಕೆಲಸ ಮಾಡಲು ಕಷ್ಟ ಆಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ</p>.<p>ವಿಷಯ ತಿಳಿಯುತ್ತಿದ್ದಂತೆ ಪಿಎಸ್ಐ ಹಾರೂನ್ ಅಖ್ತರ್ ಆಗಮಿಸಿ ಅಸ್ವಸ್ಥರಾಗಿದ್ದ ಶಿಕ್ಷಕಿಯನ್ನು ಆಸ್ಪತ್ರೆಗೆ ಕಳುಹಿಸಿ ನಾಗರಿಕರ ಪ್ರಶಂಸೆಗೆ ಪಾತ್ರರಾದರು.</p>