<p>ಪ್ರಜಾವಾಣಿ ವಾರ್ತೆ</p>.<p><strong>ನ್ಯಾಮತಿ</strong>: ‘ನಿತ್ಯದ ಜಂಜಾಟದಿಂದ ಮನಸ್ಸಿಗೆ ನೆಮ್ಮದಿ ಬೇಕಾದರೆ ಮಠ- ಮಂದಿರಗಳಿಗೆ ಭೇಟಿ ನೀಡಬೇಕು’ ಎಂದು ಹಿರೇಕಲ್ಮಠ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. </p>.<p>ಪಟ್ಟಣದಲ್ಲಿ ಬುಧವಾರ ಕುಂಬಾರ ಬೀದಿಯ ಅಮ್ಮನಮರದ ದೇವಿ ನೂತನ ಪ್ರತಿಷ್ಠಾಪನೆ, 23ನೇ ವರ್ಷದ ವಾರ್ಷಿಕೋತ್ಸವ, ಕಾರ್ತಿಕೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. </p>.<p>‘ಸಾಂಸಾರಿಕ ಒತ್ತಡದ ಜೀವನದಿಂದ ಹೊರಬರಲು ಇಚ್ಛಾಶಕ್ತಿ ತೋರಬೇಕು. ಶರಣರು ಸಂಸಾರದಲ್ಲಿ ಇದ್ದು ಸಾಧನೆಯ ಶಿಖರವನ್ನು ಏರಿದರು. ಬದುಕನ್ನು ಯಶಸ್ವಿ ಮಾಡಿಕೊಳ್ಳಬೇಕು, ಕರ್ತವ್ಯವನ್ನು ಪಾಲಿಸುವವರು ನಿತ್ಯ ಸುಖಿಗಳಾಗಿರುತ್ತಾರೆ’ ಎಂದರು. </p>.<p>ವರ್ತಕ ನುಚ್ಚಿನ ವಾಗೀಶ ಮಾತನಾಡಿದರು. ಟ್ರಸ್ಟ್ನ ಅಧ್ಯಕ್ಷ ಶಂಕರಪ್ಪ ಹೊಸಮನೆ ಅಧ್ಯಕ್ಷತೆ ವಹಿಸಿದ್ದರು. ಅಂತರ್ಜಲ ಸಂಶೋಧಕ ಕಂಕನಹಳ್ಳಿ ಕೆ.ಜಿ.ಚಂದ್ರಶೇಖರಪ್ಪ ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.</p>.<p>ಟ್ರಸ್ಟ್ನ ಸಹಕಾರ್ಯದರ್ಶಿ ಹೊಸಮನೆ ಮಲ್ಲಿಕಾರ್ಜುನ, ಕಾರ್ಯದರ್ಶಿ ಎಚ್.ಕೆ.ಚನ್ನೇಶಪ್ಪ, ಉಪನ್ಯಾಸಕ ಪ್ರವೀಣಕುಮಾರ ಮಾತನಾಡಿದರು. </p>.<p>ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ.ಸುರೇಂದ್ರಗೌಡ, ಬಯಲು ಸೀಮೆ ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಬಿ.ಮಂಜಪ್ಪ ಭೇಟಿ ನೀಡಿ ದೇವಿ ದರ್ಶನ ಪಡೆದರು. </p>.<p>ಟ್ರಸ್ಟ್ನ ಖಜಾಂಚಿ ಎನ್.ಎಂ.ಮಲ್ಲೇಶಪ್ಪ, ಸದಸ್ಯರಾದ ಜಿನಕೇರಿ ಮಲ್ಲಿಕಾರ್ಜುನಪ್ಪ, ಪುಟ್ಟಪ್ಪ ಶಿಕ್ಷಕರು, ಚನ್ನಬಸಪ್ಪ, ಡಿಪಿಕೆ ಸಿದ್ದಪ್ಪ, ಎಚ್.ರೇಣುಕಪ್ಪ, ಎಂ.ಕರಿಬಸಪ್ಪ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. </p>.<p>ದೇವಸ್ಥಾನಕ್ಕೆ ಸೇವೆ ಸಲ್ಲಿಸಿದ ವಿನಾಯಕ ಬಳಗದ ಯುವಕರು, ವೀರಗಾಸೆ ತಂಡದವರು, ಲಲಿತಾ ಸಹಸ್ರ ನಾಮಾವಳಿ ಬಳಗದ ಮಹಿಳೆಯರನ್ನು ಹಾಗೂ ಸೇವಾಕರ್ತರನ್ನು ಟ್ರಸ್ಟ್ ವತಿಯಿಂದ ಗೌರವಿಸಲಾಯಿತು. ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p><strong>ನ್ಯಾಮತಿ</strong>: ‘ನಿತ್ಯದ ಜಂಜಾಟದಿಂದ ಮನಸ್ಸಿಗೆ ನೆಮ್ಮದಿ ಬೇಕಾದರೆ ಮಠ- ಮಂದಿರಗಳಿಗೆ ಭೇಟಿ ನೀಡಬೇಕು’ ಎಂದು ಹಿರೇಕಲ್ಮಠ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. </p>.<p>ಪಟ್ಟಣದಲ್ಲಿ ಬುಧವಾರ ಕುಂಬಾರ ಬೀದಿಯ ಅಮ್ಮನಮರದ ದೇವಿ ನೂತನ ಪ್ರತಿಷ್ಠಾಪನೆ, 23ನೇ ವರ್ಷದ ವಾರ್ಷಿಕೋತ್ಸವ, ಕಾರ್ತಿಕೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. </p>.<p>‘ಸಾಂಸಾರಿಕ ಒತ್ತಡದ ಜೀವನದಿಂದ ಹೊರಬರಲು ಇಚ್ಛಾಶಕ್ತಿ ತೋರಬೇಕು. ಶರಣರು ಸಂಸಾರದಲ್ಲಿ ಇದ್ದು ಸಾಧನೆಯ ಶಿಖರವನ್ನು ಏರಿದರು. ಬದುಕನ್ನು ಯಶಸ್ವಿ ಮಾಡಿಕೊಳ್ಳಬೇಕು, ಕರ್ತವ್ಯವನ್ನು ಪಾಲಿಸುವವರು ನಿತ್ಯ ಸುಖಿಗಳಾಗಿರುತ್ತಾರೆ’ ಎಂದರು. </p>.<p>ವರ್ತಕ ನುಚ್ಚಿನ ವಾಗೀಶ ಮಾತನಾಡಿದರು. ಟ್ರಸ್ಟ್ನ ಅಧ್ಯಕ್ಷ ಶಂಕರಪ್ಪ ಹೊಸಮನೆ ಅಧ್ಯಕ್ಷತೆ ವಹಿಸಿದ್ದರು. ಅಂತರ್ಜಲ ಸಂಶೋಧಕ ಕಂಕನಹಳ್ಳಿ ಕೆ.ಜಿ.ಚಂದ್ರಶೇಖರಪ್ಪ ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.</p>.<p>ಟ್ರಸ್ಟ್ನ ಸಹಕಾರ್ಯದರ್ಶಿ ಹೊಸಮನೆ ಮಲ್ಲಿಕಾರ್ಜುನ, ಕಾರ್ಯದರ್ಶಿ ಎಚ್.ಕೆ.ಚನ್ನೇಶಪ್ಪ, ಉಪನ್ಯಾಸಕ ಪ್ರವೀಣಕುಮಾರ ಮಾತನಾಡಿದರು. </p>.<p>ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ.ಸುರೇಂದ್ರಗೌಡ, ಬಯಲು ಸೀಮೆ ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಬಿ.ಮಂಜಪ್ಪ ಭೇಟಿ ನೀಡಿ ದೇವಿ ದರ್ಶನ ಪಡೆದರು. </p>.<p>ಟ್ರಸ್ಟ್ನ ಖಜಾಂಚಿ ಎನ್.ಎಂ.ಮಲ್ಲೇಶಪ್ಪ, ಸದಸ್ಯರಾದ ಜಿನಕೇರಿ ಮಲ್ಲಿಕಾರ್ಜುನಪ್ಪ, ಪುಟ್ಟಪ್ಪ ಶಿಕ್ಷಕರು, ಚನ್ನಬಸಪ್ಪ, ಡಿಪಿಕೆ ಸಿದ್ದಪ್ಪ, ಎಚ್.ರೇಣುಕಪ್ಪ, ಎಂ.ಕರಿಬಸಪ್ಪ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. </p>.<p>ದೇವಸ್ಥಾನಕ್ಕೆ ಸೇವೆ ಸಲ್ಲಿಸಿದ ವಿನಾಯಕ ಬಳಗದ ಯುವಕರು, ವೀರಗಾಸೆ ತಂಡದವರು, ಲಲಿತಾ ಸಹಸ್ರ ನಾಮಾವಳಿ ಬಳಗದ ಮಹಿಳೆಯರನ್ನು ಹಾಗೂ ಸೇವಾಕರ್ತರನ್ನು ಟ್ರಸ್ಟ್ ವತಿಯಿಂದ ಗೌರವಿಸಲಾಯಿತು. ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>