‘ಕೂಡಲಸಂಗಮ ಪೀಠ ಹಾಗೂ ಹರಿಹರ ಪೀಠಗಳು ರಾಜ್ಯದ ಮಧ್ಯನಗರಿಯಲ್ಲಿ ಸಂಗಮವಾಗಬೇಕು ಎಂಬ ದೃಷ್ಟಿಯಿಂದ ಜ. 29ರಂದು ದಾವಣಗೆರೆಯಲ್ಲಿ ನಡೆಯುವ ಸಮಾವೇಶದಲ್ಲಿ ಎರಡೂ ಪೀಠಗಳ ಸ್ವಾಮೀಜಿಗಳನ್ನು ಕರೆತರಬೇಕು ಎಂದು ನಿರ್ಧರಿಸಿದ್ದೇವೆ. ಹರಿಹರದ ಪಂಚಮಸಾಲಿ ಪೀಠದ ಸಮಿತಿ ಸಮ್ಮತಿಸಿದೆ. ಭಾನುವಾರ ವಚನಾನಂದ ಸ್ವಾಮೀಜಿ ಅವರನ್ನು ಆಹ್ವಾನಿಸುತ್ತೇವೆ’ ಎಂದು ಪಾದಯಾತ್ರೆ ಸ್ವಾಗತಸಮಿತಿಯ ಗೌರವ ಅಧ್ಯಕ್ಷ ಎಚ್.ಎಸ್.ನಾಗರಾಜ್ ಶನಿವಾರ ತಿಳಿಸಿದರು.