ಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದಅವರು, ‘ಇಂತಹ ಆರೋಪ ಮಾಡುವುದಕ್ಕೂ ಮೊದಲು ಸರಿಯಾದ ಮಾಹಿತಿ ಪಡೆದು ನಂತರ ಹೇಳಬೇಕು.ಭಾರತದಿಂದ ಪಾಕಿಸ್ತಾನ ವಿಭಜನೆ ಆದಾಗ, ನಾವು ಭಾರತವನ್ನು ಒಪ್ಪಿಕೊಂಡು ಇಲ್ಲಿಯೇ ಉಳಿದೆವು. ಅಂದಿನಿಂದ ನಾವು ದೇಶದ ಭಾಗವಾಗಿಯೇ ಇದ್ದೇವೆ. ದೇಶಕ್ಕಾಗಿ ಪ್ರಾಣವನ್ನು ಕೊಡಲು ಸಿದ್ಧರಿದ್ದೇವೆ. ಆದರೆ ಶಾಸಕ ರೇಣುಕಾಚಾರ್ಯ ಮುಸ್ಲಿಮರ ವಿರುದ್ಧ ಪದೇಪದೇ ಹೇಳಿಕೆ ಕೊಡುವ ಮೂಲಕ ನಮಗೆ ನೋವುಂಟು ಮಾಡುತ್ತಿದ್ದಾರೆ’ ಎಂದು ದೂರಿದರು.