ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಬಿಎಸ್‌ಎನ್‌ಎಲ್ ನಿವೃತ್ತ ನೌಕರನ ಮನೆಯಲ್ಲಿ ಕಳ್ಳತನ

₹ 8.16 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ದೋಚಿದ ಕಳ್ಳರು
Last Updated 15 ಸೆಪ್ಟೆಂಬರ್ 2021, 4:39 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನಸರಸ್ವತಿ ನಗರ ’ಎ‘ ಬ್ಲಾಕ್‌ನಲ್ಲಿ ಬಿ.ಎಸ್‌.ಎನ್.ಎಲ್‌ ನಿವೃತ್ತ ನೌಕರನ ಮನೆಯ ಬೀಗ ಮುರಿದ ಕಳ್ಳರು ₹ 8.16 ಲಕ್ಷ ಮೌಲ್ಯದ ಬಂಗಾರದ ಆಭರಣ ಹಾಗೂ ₹ 15 ಸಾವಿರವನ್ನು ಕಳ್ಳತನ ಮಾಡಿದ್ದಾರೆ.

ಎಚ್. ಗಂಗಾಧರ ಚಾರಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಗಂಗಾಧರ ಚಾರಿ ಅವರು ಅತ್ತೆಯ ಪುಣ್ಯತಿಥಿಯ ಕಾರ್ಯಕ್ಕೆ ಅಣಬೇರು ಗ್ರಾಮಕ್ಕೆ ತೆರಳಿದ ವೇಳೆ ಕಳ್ಳತನ ನಡೆದಿದೆ.

ಕಬ್ಬಿಣದ ಆಯುಧದಿಂದ ಮನೆಯ ಬಾಗಿಲ ಬೀಗ ಮುರಿದ ಕಳ್ಳರು ಬೀರುವಿನ ಲಾಕರ್ ತೆಗೆದು ಒಂದು ಕೆಂಪು ಹವಳದ ಬಂಗಾರದ ಸರ, 40 ಗ್ರಾಂ ತೂಕದ ಬಂಗಾರದ ಬಳೆ, 30 ಗ್ರಾಂ ತೂಕದ ಬಂಗಾರದ ನೆಕ್ಲೆಸ್, 20 ಗ್ರಾಂ ತೂಕದ ಬಂಗಾರದ ಬ್ರಾಸ್‌ಲೆಟ್, 10 ಗ್ರಾಂ ತೂಕದ ಬಂಗಾರದ ನೀಲಿ ಹರಳಿನ ಉಂಗುರ, 10 ಗ್ರಾಂ ತೂಕದ ಒಂದು ಬಂಗಾರದ ಉಂಗುರ, ಎರಡು ಮಕ್ಕಳ ಉಂಗುರ, ಬಂಗಾರದ ಕಿವಿಯೋಲೆ, 540 ಗ್ರಾಂ ಬೆಳ್ಳಿಯ ಆಭರಣಗಳನ್ನು ಕದ್ದೋಯ್ದಿದ್ದಾರೆ.

ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT