ಈವರೆಗೆ ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ಮಾಹಿತಿ ಪಡೆದು ಶೀಘ್ರವೇ ಮತ್ತೊಂದು ಸಭೆ ನಡೆಸುತ್ತೇವೆ. ಚಾಲಕರು ಹಾಗೂ ಮಾಲೀಕರಿಗೆ ಮತ್ತೊಮ್ಮೆ ಕಟ್ಟುನಿಟ್ಟಿನ ಸೂಚನೆ ನೀಡುತ್ತೇವೆ
- ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ
ಜಿಲ್ಲೆಗೆ ಆ್ಯಪ್ ಆಧಾರಿತ ಆಟೊ ಮತ್ತು ಟ್ಯಾಕ್ಸಿ ಸೇವೆ ಕಾಲಿಡುತ್ತಿದೆ. ಮೀಟರ್ ಅಳವಡಿಸಿಕೊಂಡು ಸೇವೆ ನೀಡದೆ ಹೋದರೆ ಆಟೊ ಚಾಲಕರು ಮತ್ತು ಮಾಲೀಕರಿಗೇ ನಷ್ಟವಾಗಲಿದೆ.
- ಪ್ರಮುಥೇಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ
ಜನಸ್ನೇಹಿ ಸೇವೆ ಒದಗಿಸುವುದು ಆಟೊ ಚಾಲಕರು ಮತ್ತು ಮಾಲೀಕರ ಕರ್ತವ್ಯ. ನಮ್ಮ ಆದೇಶ ಪಾಲಿಸದಿದ್ದರೆ ಕಠಿಣ ಕ್ರಮ ಅನಿವಾರ್ಯ
- ಉಮಾ ಪ್ರಶಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಆಟೊ ಚಾಲಕರು ಹೆಚ್ಚುವರಿ ಹಣ ಕೇಳಿದರೆ ಅಥವಾ ಪ್ರಯಾಣಿಕರನ್ನು ಕರೆದೊಯ್ಯಲು ನಿರಾಕರಿಸಿದರೆ ಅವರ ಪರವಾನಗಿ ಅಮಾನತುಗೊಳಿಸುವಂತಹ ಕಠಿಣ ನಿಯಮ ನಗರದಲ್ಲಿ ಜಾರಿಯಾಗಬೇಕು
- ಚಿರಂಜೀವಿ ಕೆ.ಪಿ., ದಾವಣಗೆರೆಯ ವಿನೋಬನಗರ ನಿವಾಸಿ
ಆಟೊದವರು ಹಗಲು ದರೋಡೆಗೆ ಇಳಿದಿದ್ದಾರೆ. ಅಧಿಕಾರಿಗಳು ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿ ನಾಗರಿಕರ ಸುಲಿಗೆಗೆ ಕಡಿವಾಣ ಹಾಕಬೇಕು