<p><strong>ದಾವಣಗೆರೆ: </strong>ಸೋದೆ ವಾದಿರಾಜ ಮಠದ ವಿಶ್ವವಲ್ಲಭ ಸ್ವಾಮೀಜಿಗೆ ಇಲ್ಲಿನ ಗೌರಮ್ಮ ನರಹರಿಶೇಟ್ ಸಭಾಭವನದಲ್ಲಿ ಮಂಗಳವಾರ ತುಲಾಭಾರ ನಡೆಯುತ್ತಿದ್ದಾಗ ಕೊಂಡಿ ಕಳಚಿ ತಕ್ಕಡಿ ಬಿದ್ದಿದ್ದರಿಂದ ಸ್ವಾಮೀಜಿಗೆ ಸಣ್ಣ ಗಾಯಗಳಾಗಿವೆ.</p>.<p>ಉಡುಪಿ ಅಷ್ಟಮಠಗಳಲ್ಲಿ ಒಂದಾಗಿರುವ ಸೋದೆ ಮಠದ ದೈವಜ್ಞ ಬ್ರಾಹ್ಮಣ ಶಿಷ್ಯವೃಂದವು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಮಂಗಳವಾರ ಬೆಳಿಗ್ಗೆ ಪಟ್ಟದೇವರ ಪೂಜೆ, ಸಾಮೂಹಿಕ ಪಾದಪೂಜೆ ನಂತರ ತುಲಾಭಾರ ಏರ್ಪಡಿಸಲಾಗಿತ್ತು. ಭಕ್ತರು ಅಕ್ಕಿ, ಬೆಲ್ಲ, ಹಣ್ಣುಗಳೊಂದಿಗೆ ಶ್ರೀಗಳ ತುಲಾಭಾರ ನೆರವೇರಿಸಿ ಸಂಭ್ರಮಿಸುವ ಉತ್ಸಾಹದಲ್ಲಿದ್ದರು. ಈ ಸಂದರ್ಭದಲ್ಲಿ ತಕ್ಕಡಿ ಕೊಂಡಿ ಕಳಚಿದ್ದರಿಂದ ಸ್ವಾಮೀಜಿಯ ತಲೆಗೆ ಏಟು ಬಿತ್ತು. ಇದರಿಂದ ಕೆಲ ಕಾಲ ಭಕ್ತರಲ್ಲಿ ಆತಂಕ ಮೂಡಿತು.</p>.<p>ತಕ್ಷಣ ವೈದ್ಯರನ್ನು ಕರೆಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಬ್ಯಾಂಡೇಜ್ ಹಾಕಿಸಲಾಯಿತು. ಸುಧಾರಿಸಿಕೊಂಡ ಸ್ವಾಮೀಜಿ ಬಳಿಕ ಮುಂದಿನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.</p>.<p>ಕಾರ್ಯಕ್ರಮದಲ್ಲಿ ನಲ್ಲೂರು ಎಸ್. ರಾಜಕುಮಾರ್, ನಲ್ಲೂರು ಅರುಣಾಚಲ, ರಾಮಚಂದ್ರ ರಾಯ್ಕರ್ ಅವರೂ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ಸೋದೆ ವಾದಿರಾಜ ಮಠದ ವಿಶ್ವವಲ್ಲಭ ಸ್ವಾಮೀಜಿಗೆ ಇಲ್ಲಿನ ಗೌರಮ್ಮ ನರಹರಿಶೇಟ್ ಸಭಾಭವನದಲ್ಲಿ ಮಂಗಳವಾರ ತುಲಾಭಾರ ನಡೆಯುತ್ತಿದ್ದಾಗ ಕೊಂಡಿ ಕಳಚಿ ತಕ್ಕಡಿ ಬಿದ್ದಿದ್ದರಿಂದ ಸ್ವಾಮೀಜಿಗೆ ಸಣ್ಣ ಗಾಯಗಳಾಗಿವೆ.</p>.<p>ಉಡುಪಿ ಅಷ್ಟಮಠಗಳಲ್ಲಿ ಒಂದಾಗಿರುವ ಸೋದೆ ಮಠದ ದೈವಜ್ಞ ಬ್ರಾಹ್ಮಣ ಶಿಷ್ಯವೃಂದವು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಮಂಗಳವಾರ ಬೆಳಿಗ್ಗೆ ಪಟ್ಟದೇವರ ಪೂಜೆ, ಸಾಮೂಹಿಕ ಪಾದಪೂಜೆ ನಂತರ ತುಲಾಭಾರ ಏರ್ಪಡಿಸಲಾಗಿತ್ತು. ಭಕ್ತರು ಅಕ್ಕಿ, ಬೆಲ್ಲ, ಹಣ್ಣುಗಳೊಂದಿಗೆ ಶ್ರೀಗಳ ತುಲಾಭಾರ ನೆರವೇರಿಸಿ ಸಂಭ್ರಮಿಸುವ ಉತ್ಸಾಹದಲ್ಲಿದ್ದರು. ಈ ಸಂದರ್ಭದಲ್ಲಿ ತಕ್ಕಡಿ ಕೊಂಡಿ ಕಳಚಿದ್ದರಿಂದ ಸ್ವಾಮೀಜಿಯ ತಲೆಗೆ ಏಟು ಬಿತ್ತು. ಇದರಿಂದ ಕೆಲ ಕಾಲ ಭಕ್ತರಲ್ಲಿ ಆತಂಕ ಮೂಡಿತು.</p>.<p>ತಕ್ಷಣ ವೈದ್ಯರನ್ನು ಕರೆಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಬ್ಯಾಂಡೇಜ್ ಹಾಕಿಸಲಾಯಿತು. ಸುಧಾರಿಸಿಕೊಂಡ ಸ್ವಾಮೀಜಿ ಬಳಿಕ ಮುಂದಿನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.</p>.<p>ಕಾರ್ಯಕ್ರಮದಲ್ಲಿ ನಲ್ಲೂರು ಎಸ್. ರಾಜಕುಮಾರ್, ನಲ್ಲೂರು ಅರುಣಾಚಲ, ರಾಮಚಂದ್ರ ರಾಯ್ಕರ್ ಅವರೂ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>