<p><strong>ಜಗಳೂರು (ದಾವಣಗೆರೆ ವರದಿ):</strong> ತಾಲ್ಲೂಕಿನ ಅಸಗೋಡು ವಡ್ಡರಹಟ್ಟಿ ಗ್ರಾಮದಲ್ಲಿ ಸೋಮವಾರ ಜಮೀನಿನಲ್ಲಿ ಆಟವಾಡುತ್ತಿದ್ದ ಇಬ್ಬರು ಬಾಲಕಿಯರು ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದು, ಮತ್ತೊಬ್ಬ ಬಾಲಕಿಯನ್ನು ರಕ್ಷಿಸಲಾಗಿದೆ.</p><p>ಗ್ರಾಮದ ಕೂಲಿ ಕಾರ್ಮಿಕರಾದ ತಿಮ್ಮಪ್ಪ ಅವರ ಪುತ್ರಿ ತನುಜಾ (11), ರಾಮಚಂದ್ರಪ್ಪ ಅವರ ಪುತ್ರಿ ಗಂಗೋತ್ರಿ (11) ಮೃತಪಟ್ಟವರು. ಮತ್ತೊಬ್ಬ ಬಾಲಕಿ ಖುಷಿ ನೀರಲ್ಲಿ ಮುಳುಗುತ್ತಿದ್ದಾಗ ಗ್ರಾಮಸ್ಥರು ರಕ್ಷಿಸಿದ್ದಾರೆ.</p><p>ಶಾಲೆಯಿಂದ ಮನೆಗೆ ಮರಳಿದ್ದ ಈ ಬಾಲಕಿಯರು ಸಮೀಪದಲ್ಲೇ ಇದ್ದ ಜಮೀನೊಂದರಲ್ಲಿನ ಕೃಷಿ ಹೊಂಡದಲ್ಲಿ ಆಟವಾಡಲು ತೆರಳಿದ್ದರು. ಕೃಷಿ ಹೊಂಡ ಭರ್ತಿಯಾಗಿತ್ತು. ಕೃಷಿ ಹೊಂಡದ ಮೇಲೆ ಕುಳಿತು ಆಟ ಆಡುತ್ತಿದ್ದಾಗ ಕಾಲು ಜಾರಿ ಮೂವರೂ ನೀರಲ್ಲಿ ಬಿದ್ದಿದ್ದಾರೆ.</p><p>ಮಕ್ಕಳು ಕಿರುಚಿದಾಗ ಕೆರೆಯತ್ತ ಧಾವಿಸಿದ ಗ್ರಾಮಸ್ಥರು ಒಬ್ಬಳನ್ನು ಮಾತ್ರ ರಕ್ಷಿಸಿದ್ದಾರೆ. ಅಷ್ಟು ಹೊತ್ತಿಗಾಗಲೇ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿದ್ದರು. ಪಾಲಕರು ಹೊಟ್ಟೆಪಾಡಿಗಾಗಿ ಗುಳೆ ಹೋಗಿದ್ದರಿಂದ ಈ ಬಾಲಕಿಯರು ಸಂಬಂಧಿಕರ ಮನೆಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಗಳೂರು (ದಾವಣಗೆರೆ ವರದಿ):</strong> ತಾಲ್ಲೂಕಿನ ಅಸಗೋಡು ವಡ್ಡರಹಟ್ಟಿ ಗ್ರಾಮದಲ್ಲಿ ಸೋಮವಾರ ಜಮೀನಿನಲ್ಲಿ ಆಟವಾಡುತ್ತಿದ್ದ ಇಬ್ಬರು ಬಾಲಕಿಯರು ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದು, ಮತ್ತೊಬ್ಬ ಬಾಲಕಿಯನ್ನು ರಕ್ಷಿಸಲಾಗಿದೆ.</p><p>ಗ್ರಾಮದ ಕೂಲಿ ಕಾರ್ಮಿಕರಾದ ತಿಮ್ಮಪ್ಪ ಅವರ ಪುತ್ರಿ ತನುಜಾ (11), ರಾಮಚಂದ್ರಪ್ಪ ಅವರ ಪುತ್ರಿ ಗಂಗೋತ್ರಿ (11) ಮೃತಪಟ್ಟವರು. ಮತ್ತೊಬ್ಬ ಬಾಲಕಿ ಖುಷಿ ನೀರಲ್ಲಿ ಮುಳುಗುತ್ತಿದ್ದಾಗ ಗ್ರಾಮಸ್ಥರು ರಕ್ಷಿಸಿದ್ದಾರೆ.</p><p>ಶಾಲೆಯಿಂದ ಮನೆಗೆ ಮರಳಿದ್ದ ಈ ಬಾಲಕಿಯರು ಸಮೀಪದಲ್ಲೇ ಇದ್ದ ಜಮೀನೊಂದರಲ್ಲಿನ ಕೃಷಿ ಹೊಂಡದಲ್ಲಿ ಆಟವಾಡಲು ತೆರಳಿದ್ದರು. ಕೃಷಿ ಹೊಂಡ ಭರ್ತಿಯಾಗಿತ್ತು. ಕೃಷಿ ಹೊಂಡದ ಮೇಲೆ ಕುಳಿತು ಆಟ ಆಡುತ್ತಿದ್ದಾಗ ಕಾಲು ಜಾರಿ ಮೂವರೂ ನೀರಲ್ಲಿ ಬಿದ್ದಿದ್ದಾರೆ.</p><p>ಮಕ್ಕಳು ಕಿರುಚಿದಾಗ ಕೆರೆಯತ್ತ ಧಾವಿಸಿದ ಗ್ರಾಮಸ್ಥರು ಒಬ್ಬಳನ್ನು ಮಾತ್ರ ರಕ್ಷಿಸಿದ್ದಾರೆ. ಅಷ್ಟು ಹೊತ್ತಿಗಾಗಲೇ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿದ್ದರು. ಪಾಲಕರು ಹೊಟ್ಟೆಪಾಡಿಗಾಗಿ ಗುಳೆ ಹೋಗಿದ್ದರಿಂದ ಈ ಬಾಲಕಿಯರು ಸಂಬಂಧಿಕರ ಮನೆಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>