<p><strong>ದಾವಣಗೆರೆ:</strong> ‘ರಾಜ್ಯದಲ್ಲಿ ಬಾಕಿ ಇರುವ ಮೂರು ದಶಕಗಳಷ್ಟು ಹಳೆಯ ರೈಲ್ವೆ ಯೋಜನೆಗಳನ್ನು ₹ 39,000 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗುತ್ತಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.</p>.<p>‘ಹಂತ ಹಂತವಾಗಿ 2028ರ ಒಳಗಾಗಿ ಎಲ್ಲ ಬಾಕಿ ಕಾಮಗಾರಿಗಳನ್ನೂ ಮುಗಿಸುವ ತೀರ್ಮಾನ ಕೈಗೊಂಡಿದ್ದೇವೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. </p>.<p>‘ಇದೇ 15ರಂದು ಗದಗ – ತಳಕಲ್ – ಕುಷ್ಟಗಿ ಮಾರ್ಗದಲ್ಲಿ ರೈಲು ಸೇವೆಗೆ ಚಾಲನೆ ನೀಡಲಾಗುತ್ತಿದೆ. ಸಿಂಧನೂರು – ರಾಯಚೂರಿನ ರೈಲು ಮಾರ್ಗದ ಕಾಮಗಾರಿ ನಡೆದಿದೆ. ಲೋಕಾಪುರ – ಕಜ್ಜಿದೋಣಿ ರೈಲ್ವೆ ಹಳಿ ಕಾಮಗಾರಿಯೂ ನಡೆಯುತ್ತಿದೆ ಎಂದರು.</p>.<p>‘ತುಮಕೂರು – ದಾವಣಗೆರೆ ನೂತನ ಲು ಮಾರ್ಗಕ್ಕಾಗಿ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಶೇ 85ರಷ್ಟು ಮುಗಿದಿದೆ. ಈ ಬಗ್ಗೆ ಚರ್ಚೆಗೆ 17ರಂದು ಚಿತ್ರದುರ್ಗದಲ್ಲಿ ಸಭೆ ಕರೆಯಲಾಗಿದೆ. ‘ಸಂಸದ ಗೋವಿಂದ ಕಾರಜೋಳ ಸೇರಿದಂತೆ ರೈಲ್ವೆ, ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.</p>.<p>‘2027ರ ಡಿಸೆಂಬರ್ ವೇಳೆಗೆ 192 ಕಿ.ಮೀ. ಅಂತರದ ಈ ಮಾರ್ಗ ಹಾಗೂ ರಾಯದುರ್ಗ– ತುಮಕೂರು ಮಾರ್ಗದ ಲೋಕಾರ್ಪಣೆ ನಡೆಯಲಿದೆ’ ಎಂದರು.</p>.<p>‘ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 23 ಮೇಲ್ಸೇತುವೆ, ಕೆಳಸೇತುವೆಗಳ ಕಾಮಗಾರಿಯನ್ನು ₹ 960 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಶೇ 50ರಷ್ಟು ಕಾಮಗಾರಿ ಪೂರ್ಣಗೊಂಡಿದೆ' ಎಂದು ತಿಳಿಸಿದರು.</p>.<div><blockquote>ಈ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಭೂಮಿ ಒದಗಿಸಿದರೆ ಶೇ 100ರಷ್ಟು ಅನುದಾನವನ್ನು ರೈಲ್ವೆ ಇಲಾಖೆಯೇ ಭರಿಸಲು ನಿರ್ಧರಿಸಿದೆ</blockquote><span class="attribution">ವಿ.ಸೋಮಣ್ಣ ರೈಲ್ವೆ ಖಾತೆ ರಾಜ್ಯ ಸಚಿವ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ‘ರಾಜ್ಯದಲ್ಲಿ ಬಾಕಿ ಇರುವ ಮೂರು ದಶಕಗಳಷ್ಟು ಹಳೆಯ ರೈಲ್ವೆ ಯೋಜನೆಗಳನ್ನು ₹ 39,000 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗುತ್ತಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.</p>.<p>‘ಹಂತ ಹಂತವಾಗಿ 2028ರ ಒಳಗಾಗಿ ಎಲ್ಲ ಬಾಕಿ ಕಾಮಗಾರಿಗಳನ್ನೂ ಮುಗಿಸುವ ತೀರ್ಮಾನ ಕೈಗೊಂಡಿದ್ದೇವೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. </p>.<p>‘ಇದೇ 15ರಂದು ಗದಗ – ತಳಕಲ್ – ಕುಷ್ಟಗಿ ಮಾರ್ಗದಲ್ಲಿ ರೈಲು ಸೇವೆಗೆ ಚಾಲನೆ ನೀಡಲಾಗುತ್ತಿದೆ. ಸಿಂಧನೂರು – ರಾಯಚೂರಿನ ರೈಲು ಮಾರ್ಗದ ಕಾಮಗಾರಿ ನಡೆದಿದೆ. ಲೋಕಾಪುರ – ಕಜ್ಜಿದೋಣಿ ರೈಲ್ವೆ ಹಳಿ ಕಾಮಗಾರಿಯೂ ನಡೆಯುತ್ತಿದೆ ಎಂದರು.</p>.<p>‘ತುಮಕೂರು – ದಾವಣಗೆರೆ ನೂತನ ಲು ಮಾರ್ಗಕ್ಕಾಗಿ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಶೇ 85ರಷ್ಟು ಮುಗಿದಿದೆ. ಈ ಬಗ್ಗೆ ಚರ್ಚೆಗೆ 17ರಂದು ಚಿತ್ರದುರ್ಗದಲ್ಲಿ ಸಭೆ ಕರೆಯಲಾಗಿದೆ. ‘ಸಂಸದ ಗೋವಿಂದ ಕಾರಜೋಳ ಸೇರಿದಂತೆ ರೈಲ್ವೆ, ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.</p>.<p>‘2027ರ ಡಿಸೆಂಬರ್ ವೇಳೆಗೆ 192 ಕಿ.ಮೀ. ಅಂತರದ ಈ ಮಾರ್ಗ ಹಾಗೂ ರಾಯದುರ್ಗ– ತುಮಕೂರು ಮಾರ್ಗದ ಲೋಕಾರ್ಪಣೆ ನಡೆಯಲಿದೆ’ ಎಂದರು.</p>.<p>‘ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 23 ಮೇಲ್ಸೇತುವೆ, ಕೆಳಸೇತುವೆಗಳ ಕಾಮಗಾರಿಯನ್ನು ₹ 960 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಶೇ 50ರಷ್ಟು ಕಾಮಗಾರಿ ಪೂರ್ಣಗೊಂಡಿದೆ' ಎಂದು ತಿಳಿಸಿದರು.</p>.<div><blockquote>ಈ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಭೂಮಿ ಒದಗಿಸಿದರೆ ಶೇ 100ರಷ್ಟು ಅನುದಾನವನ್ನು ರೈಲ್ವೆ ಇಲಾಖೆಯೇ ಭರಿಸಲು ನಿರ್ಧರಿಸಿದೆ</blockquote><span class="attribution">ವಿ.ಸೋಮಣ್ಣ ರೈಲ್ವೆ ಖಾತೆ ರಾಜ್ಯ ಸಚಿವ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>