ಬೈಕ್ಗಳ ಮುಖಾಮುಖಿ ಡಿಕ್ಕಿಯಾಗಿ ತಾಲ್ಲೂಕಿನ ಮುಕ್ತೇನ
ಹಳ್ಳಿ ಗ್ರಾಮದ ನೀರಗಂಟಿ ಪ್ರಕಾಶ್, ರಾಂಪುರ ಗ್ರಾಮದ ಹಾಲೇಶ್ ಮತ್ತು ನ್ಯಾಮತಿ ತಾಲ್ಲೂಕಿನ ಕುಂಕುವ ಗ್ರಾಮದ ಚರಣ್, ಚಂದ್ರು ಗಾಯಗೊಂಡು ಒದ್ದಾಡುತ್ತಿದ್ದರು. ಅದೇ ಮಾರ್ಗದಲ್ಲಿ ಕಾರಿನಲ್ಲಿ ಸ್ವಗ್ರಾಮ ಅರಬಗಟ್ಟೆಗೆ ತೆರಳುತ್ತಿದ್ದ ನ್ಯಾಮತಿ ತಾಲ್ಲೂಕಿನ ಸವಳಂಗ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಕೆ.ಜಿ. ಗಣೇಶ್ ಅವರು ತಕ್ಷಣ ಗಾಯಾಳುಗಳ ಸಹಾಯಕ್ಕೆ ಧಾವಿಸಿದರು.