<p><strong>ದಾವಣಗೆರೆ</strong>: 21 ವರ್ಷಗಳ ಕಾಲ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ಊರಿಗೆ ಮರಳಿದ ಯೋಧ ಎಚ್. ಸುರೇಶ್ರಾವ್ ಘೋರ್ಪಡೆ ಅವರನ್ನು ಸೋಮವಾರ ಅದ್ಧೂರಿಯಾಗಿ ಸ್ವಾಗತಿಸಲಾಯಿತು.</p>.<p>ದಾವಣಗೆರೆ ತಾಲ್ಲೂಕಿನ ತೋಳಹುಣಸೆ ಗ್ರಾಮದವರಾದ ಸುರೇಶ ರಾವ್ ಘೋರ್ಪಡೆ ಅವರು ಸೇನೆಯಲ್ಲಿನ ಅನೇಕ ರೋಚಕ ಕ್ಷಣಗಳು, ಕಾರ್ಯಾಚರಣೆ ವೇಳೆಯ ರೋಮಾಂಚನ ಸಂದರ್ಭ, ಹಲವು ಸನ್ನಿವೇಶ, ಅನುಭವಗಳ ಸಿಹಿ-ಕಹಿ ನೆನಪಿನ ಬುತ್ತಿಯೊಂದಿಗೆ ನಿವೃತ್ತರಾಗಿ ಊರಿಗೆ ಮರಳಿದರು.</p>.<p>ದಾವಣಗೆರೆಯ ರೈಲ್ವೆ ನಿಲ್ದಾಣಕ್ಕೆ ಬಂದ ಸುರೇಶ್ರಾವ್ ಅವರನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು ಸ್ವಾಗತಿಸಿದರು.ಯೋಧನ ಸ್ನೇಹಿತರು, ಸಂಬಂಧಿಕರು, ಕುಟುಂಬದವರು ಪಾಲ್ಗೊಂಡಿದ್ದರು. ದಾವಣಗೆರೆಯ ರೈಲ್ವೆ ನಿಲ್ದಾಣಕ್ಕೆ ಬಂದು ಇಳಿಯುತ್ತಿದ್ದಂತೆ ಅಲ್ಲಿದ್ದವರೂ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.</p>.<p>ನಗರದೇವತೆ ದುರ್ಗಾಂಬಿಕಾ ದೇವಾಲಯ ಹಾಗೂ ಗಾಂಧಿನಗರದ ಹುಲಿಗೆಮ್ಮ ದೇವಾಲಯಕ್ಕೆ ಭೇಟಿ ದೇವರಿಗೆ ನಮಸ್ಕರಿಸಿದರು. ಆ ಬಳಿಕ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಆ ಬಳಿಕ ಬಾಡ ಕ್ರಾಸ್ ಬಳಿಯ ಅಂಧ ಮಕ್ಕಳ ಶಾಲೆಯ ಮಕ್ಕಳಿಗೆ ಸಿಹಿ ವಿತರಿಸಿದರು.</p>.<p>ಯೋಧನ ಆಗಮನವಾಗುತ್ತಿದ್ದಂತೆ ಗ್ರಾಮದಲ್ಲಿ ಸೋಮವಾರ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಬಾಡ ಕ್ರಾಸ್ನಿಂದ ತೋಳಹುಣಸೆಯವರೆಗೆ ಅವರನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಲಾಯಿತು. ಆಂಜನೇಯ ಕಾಟನ್ ಮಿಲ್ ಮಾಲೀಕರು, ನಿವೃತ್ತ ಸೈನಿಕರು, ಸೇವಾಲಾಲ್ ಸಮಿತಿಯವರು, ಮುಸ್ಲಿ ಸಮಾಜದವರು ಅವರನ್ನು ಅಭಿನಂದಿಸಿದರು.</p>.<p>ಇಬ್ಬರು ಪಾಕ್ ಉಗ್ರರನ್ನು ಗುಂಡಿಕ್ಕಿ ಹತ್ಯೆಗೈದ ತಂಡದಲ್ಲಿ ಸುರೇಶ್ ರಾವ್ ಇದ್ದರು. ನಕ್ಸಲರು ಹೂತಿಟ್ಟಿದ್ದ ಬಾಂಬ್ಗಳನ್ನು ಯಾವುದೇ ಸಲಕರಣೆ ಇಲ್ಲದೇ ಇವರು ಪತ್ತೆ ಮಾಡಿದರು. ಪ್ರಾಣದ ಹಂಗನ್ನೇ ತೊರೆದು ದೇಶಕ್ಕೆ, ಸೇನೆಗೆ ಎದುರಾಗಬಹುದಾಗಿದ್ದ ಭಾರಿ ಅಪತ್ತು ತಪ್ಪಿಸಿದ ಹಿರಿಮೆ ಇವರದ್ದು.</p>.<p>‘ಯೋಧನಾಗಿ ದೇಶ ಸೇವೆ ಮಾಡಿದ್ದು ನನ್ನ ಪುಣ್ಯ. ಅದೊಂದು ಅವಿಸ್ಮರಣೀಯ ಕ್ಷಣ. ಪ್ರತಿಯೊಬ್ಬ ಯುವಕರೂ ದೇಶ ಸೇವೆ ಮಾಡಬೇಕು. ಆ ಮೂಲಕ ಎಲ್ಲರಿಗೂ ಗೌರವ ಸಿಗುವಂತಾಗಬೇಕು’ ಎಂಬುದು ಸುರೇಶ್ರಾವ್ ಅವರ ಅಭಿಮತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: 21 ವರ್ಷಗಳ ಕಾಲ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ಊರಿಗೆ ಮರಳಿದ ಯೋಧ ಎಚ್. ಸುರೇಶ್ರಾವ್ ಘೋರ್ಪಡೆ ಅವರನ್ನು ಸೋಮವಾರ ಅದ್ಧೂರಿಯಾಗಿ ಸ್ವಾಗತಿಸಲಾಯಿತು.</p>.<p>ದಾವಣಗೆರೆ ತಾಲ್ಲೂಕಿನ ತೋಳಹುಣಸೆ ಗ್ರಾಮದವರಾದ ಸುರೇಶ ರಾವ್ ಘೋರ್ಪಡೆ ಅವರು ಸೇನೆಯಲ್ಲಿನ ಅನೇಕ ರೋಚಕ ಕ್ಷಣಗಳು, ಕಾರ್ಯಾಚರಣೆ ವೇಳೆಯ ರೋಮಾಂಚನ ಸಂದರ್ಭ, ಹಲವು ಸನ್ನಿವೇಶ, ಅನುಭವಗಳ ಸಿಹಿ-ಕಹಿ ನೆನಪಿನ ಬುತ್ತಿಯೊಂದಿಗೆ ನಿವೃತ್ತರಾಗಿ ಊರಿಗೆ ಮರಳಿದರು.</p>.<p>ದಾವಣಗೆರೆಯ ರೈಲ್ವೆ ನಿಲ್ದಾಣಕ್ಕೆ ಬಂದ ಸುರೇಶ್ರಾವ್ ಅವರನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು ಸ್ವಾಗತಿಸಿದರು.ಯೋಧನ ಸ್ನೇಹಿತರು, ಸಂಬಂಧಿಕರು, ಕುಟುಂಬದವರು ಪಾಲ್ಗೊಂಡಿದ್ದರು. ದಾವಣಗೆರೆಯ ರೈಲ್ವೆ ನಿಲ್ದಾಣಕ್ಕೆ ಬಂದು ಇಳಿಯುತ್ತಿದ್ದಂತೆ ಅಲ್ಲಿದ್ದವರೂ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.</p>.<p>ನಗರದೇವತೆ ದುರ್ಗಾಂಬಿಕಾ ದೇವಾಲಯ ಹಾಗೂ ಗಾಂಧಿನಗರದ ಹುಲಿಗೆಮ್ಮ ದೇವಾಲಯಕ್ಕೆ ಭೇಟಿ ದೇವರಿಗೆ ನಮಸ್ಕರಿಸಿದರು. ಆ ಬಳಿಕ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಆ ಬಳಿಕ ಬಾಡ ಕ್ರಾಸ್ ಬಳಿಯ ಅಂಧ ಮಕ್ಕಳ ಶಾಲೆಯ ಮಕ್ಕಳಿಗೆ ಸಿಹಿ ವಿತರಿಸಿದರು.</p>.<p>ಯೋಧನ ಆಗಮನವಾಗುತ್ತಿದ್ದಂತೆ ಗ್ರಾಮದಲ್ಲಿ ಸೋಮವಾರ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಬಾಡ ಕ್ರಾಸ್ನಿಂದ ತೋಳಹುಣಸೆಯವರೆಗೆ ಅವರನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಲಾಯಿತು. ಆಂಜನೇಯ ಕಾಟನ್ ಮಿಲ್ ಮಾಲೀಕರು, ನಿವೃತ್ತ ಸೈನಿಕರು, ಸೇವಾಲಾಲ್ ಸಮಿತಿಯವರು, ಮುಸ್ಲಿ ಸಮಾಜದವರು ಅವರನ್ನು ಅಭಿನಂದಿಸಿದರು.</p>.<p>ಇಬ್ಬರು ಪಾಕ್ ಉಗ್ರರನ್ನು ಗುಂಡಿಕ್ಕಿ ಹತ್ಯೆಗೈದ ತಂಡದಲ್ಲಿ ಸುರೇಶ್ ರಾವ್ ಇದ್ದರು. ನಕ್ಸಲರು ಹೂತಿಟ್ಟಿದ್ದ ಬಾಂಬ್ಗಳನ್ನು ಯಾವುದೇ ಸಲಕರಣೆ ಇಲ್ಲದೇ ಇವರು ಪತ್ತೆ ಮಾಡಿದರು. ಪ್ರಾಣದ ಹಂಗನ್ನೇ ತೊರೆದು ದೇಶಕ್ಕೆ, ಸೇನೆಗೆ ಎದುರಾಗಬಹುದಾಗಿದ್ದ ಭಾರಿ ಅಪತ್ತು ತಪ್ಪಿಸಿದ ಹಿರಿಮೆ ಇವರದ್ದು.</p>.<p>‘ಯೋಧನಾಗಿ ದೇಶ ಸೇವೆ ಮಾಡಿದ್ದು ನನ್ನ ಪುಣ್ಯ. ಅದೊಂದು ಅವಿಸ್ಮರಣೀಯ ಕ್ಷಣ. ಪ್ರತಿಯೊಬ್ಬ ಯುವಕರೂ ದೇಶ ಸೇವೆ ಮಾಡಬೇಕು. ಆ ಮೂಲಕ ಎಲ್ಲರಿಗೂ ಗೌರವ ಸಿಗುವಂತಾಗಬೇಕು’ ಎಂಬುದು ಸುರೇಶ್ರಾವ್ ಅವರ ಅಭಿಮತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>