<p><strong>ದಾವಣಗೆರೆ</strong>: ನಮ್ಮ ನಾಡಿನಲ್ಲಿ ಮಾತಿಗೆ ಬರವಿಲ್ಲ, ಕೃತಿಗಳಿಗೆ ಬರವಿದೆ. ನಾವು ಎಷ್ಟು ಮಾತನಾಡುತ್ತೇವೆ ಎನ್ನುವುದು ಮುಖ್ಯವಲ್ಲ. ಆಡಿದ ಮಾತುಗಳನ್ನು ಎಷ್ಟು ಸಾಕಾರಗೊಳಿಸುತ್ತೇವೆ ಎನ್ನುವುದು ಮುಖ್ಯವಾಗಿದೆ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ಮಾನವ ಬಂಧುತ್ವ ವೇದಿಕೆ, ಸತೀಶ್ ಜಾರಕಿಹೊಳಿ ಫೌಂಡೇಶನ್ ಸಹಯೋಗದೊಂದಿಗೆ ಬುಧವಾರ ನಡೆದ ‘ಬುದ್ಧನ ಬೆಳಕು’ ನಾಟಕ ಪ್ರದರ್ಶನ ಮತ್ತು ಕಲೆಗಳ ಕಲರವ ಶಿಬಿರದ ಸಮಾರೋಪವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಮಾತು ಕಡಿಮೆಯಾಗಬೇಕು, ಕೃತಿ ಹೆಚ್ಚಾಗಬೇಕು. ಸಾಧು ಸಂತರು ಹೇಳಿರುವುದು ಇದನ್ನೇ. ಗೌತಮ ಬುದ್ಧ ಹೆಚ್ಚು ಮಾತನ್ನು ಆಡಿ ಮನಸ್ಸನ್ನು ಅರಳಿಸುವ ಕಾರ್ಯ ಮಾಡಿದರು. ಈ ನಾಡಿನಲ್ಲಿ ಸ್ವಾಮೀಜಿಗಳು, ಸಾಹಿತಿಗಳು, ರಾಜಕಾರಣಿಗಳು ಸೇರಿದಂತೆ ಎಲ್ಲರೂ ಮನಸ್ಸಿಗೆ ಹಿತ ನೀಡುವ ಮಾತುಗಳನ್ನಾಡುತ್ತಾರೆ. ಆದರೆ ಮಾತಿಗೆ ಅನುಗುಣವಾಗಿ ವರ್ತನೆ ಇಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.</p>.<p>‘ಒಂದು ಸಂಘಟನೆಯ ಮೂಲಕ ಬೇರೆ ಬೇರೆ ರೀತಿಯ ಕ್ರಾಂತಿಗಳು ನಡೆಯುತ್ತಿವೆ. ಆದರೆ ಇಂದು ಕ್ರಾಂತಿಗಳು ಕಳೆಯನ್ನು ಕಳೆದುಕೊಳ್ಳುತ್ತಿವೆ. ಮಾಡುವ ಕೆಲಸದಲ್ಲಿ ಬದ್ಧತೆ ಇಲ್ಲದಿರುವುದು ಇದಕ್ಕೆ ಕಾರಣ. ಬದ್ಧತೆ ಇಲ್ಲದಿದ್ದರೆ ಏನನ್ನು ಮಾಡಲು ಸಾಧ್ಯವಿಲ್ಲ’ ಎಂದರು.</p>.<p>‘ಬುದ್ಧ ತನಗೆ ತಾನೇ ಬೆಳಕಾಗಿ ಲೋಕಕ್ಕೂ ಬೆಳಕಾದ. ಆದ್ದರಿಂದಲೇ ಆತನನ್ನು ‘ಏಷ್ಯಾದ ಬೆಳಕು’ ಎಂತಲೂ ಕರೆಯುತ್ತಾರೆ. ಆದರೆ ಭಾರತಕ್ಕಿಂತಲೂ ಹೊರ ದೇಶಗಳಲ್ಲಿ ಬುದ್ಧನ ಅಸ್ತಿತ್ವ ಜಾಸ್ತಿ ಇದೆ’ ಎಂದರು.</p>.<p>‘ನಮ್ಮ ದೇಶವನ್ನು ಬೆಳೆಸಿ, ಉಳಿಸಬೇಕಾದರೆ ಬುದ್ಧ, ಬಸವಣ್ಣ, ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳು ನಮಗೆ ಮಾರ್ಗದರ್ಶನ. ವಿಛಿದ್ರ ಸಮಾಜವನ್ನು ಕಾಣುತ್ತಿರುವ ಈ ವಿಕ್ಷಿಪ್ತ ಸಂದರ್ಭದಲ್ಲಿ ಬುದ್ಧನ ಬೆಳಕು ನಾಟಕ ಅಂಧಕಾರವನ್ನು ಹೋಗಲಾಡಿಸುತ್ತದೆ’ ಎಂದು ಜಾನಪದ ತಜ್ಞ ಎಂ.ಜಿ. ಈಶ್ವರಪ್ಪ ಅಭಿಪ್ರಾಯಪಟ್ಟರು.</p>.<p>‘ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಬುದ್ಧನ ಚಿಂತನೆಗಳು ಪರಿಹಾರ ರೂಪದಲ್ಲಿ ಇವೆ. ಬುದ್ಧನ ತತ್ವವನ್ನು ಓದಿಕೊಂಡು, ಅಳವಡಿಸಿಕೊಂಡರೆ ರಾಜಕೀಯ, ಧರ್ಮ, ಜಾತಿಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಆದರೆ ಓದುವ ವ್ಯವಧಾನ ಆಸಕ್ತಿ ಇಲ್ಲವಾಗಿವೆ’ ಎಂದು ಪತ್ರಕರ್ತ ಬಿ.ಎನ್. ಮಲ್ಲೇಶ್ ಹೇಳಿದರು.</p>.<p>‘ಸತೀಶ್ ಜಾರಕಿಹೊಳಿ ಫೌಂಡೇಶನ್ ಮೊದಲ ರಂಗ ಪ್ರಯೋಗ ಮಾಡಿದ್ದು, ರಾಜ್ಯದಾದ್ಯಂತ ಹೊತ್ತೊಯ್ಯಲಿದ್ದೇವೆ. ಸ್ವಸ್ಥ್ಯ ಸಮಾಜಕ್ಕೆ ಬೇಕಾದ ಚಿಂತನೆಗಳನ್ನು ಈ ಎರಡು ವೇದಿಕೆಗಳು ಮಾಡುತ್ತಿವೆ. ಸಾಹಿತ್ಯ ಹಾಗೂ ಕಲೆ ಆರೋಗ್ಯಪೂರ್ಣ ಸಮಾಜ ಕಟ್ಟಲು ನಿರಂತರ ಪ್ರಯತ್ನ ಮಾಡುತ್ತೇವೆ’ ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ ಹೇಳಿದರು.</p>.<p>ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕರ್ ವೇದಿಕೆಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ನಮ್ಮ ನಾಡಿನಲ್ಲಿ ಮಾತಿಗೆ ಬರವಿಲ್ಲ, ಕೃತಿಗಳಿಗೆ ಬರವಿದೆ. ನಾವು ಎಷ್ಟು ಮಾತನಾಡುತ್ತೇವೆ ಎನ್ನುವುದು ಮುಖ್ಯವಲ್ಲ. ಆಡಿದ ಮಾತುಗಳನ್ನು ಎಷ್ಟು ಸಾಕಾರಗೊಳಿಸುತ್ತೇವೆ ಎನ್ನುವುದು ಮುಖ್ಯವಾಗಿದೆ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ಮಾನವ ಬಂಧುತ್ವ ವೇದಿಕೆ, ಸತೀಶ್ ಜಾರಕಿಹೊಳಿ ಫೌಂಡೇಶನ್ ಸಹಯೋಗದೊಂದಿಗೆ ಬುಧವಾರ ನಡೆದ ‘ಬುದ್ಧನ ಬೆಳಕು’ ನಾಟಕ ಪ್ರದರ್ಶನ ಮತ್ತು ಕಲೆಗಳ ಕಲರವ ಶಿಬಿರದ ಸಮಾರೋಪವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಮಾತು ಕಡಿಮೆಯಾಗಬೇಕು, ಕೃತಿ ಹೆಚ್ಚಾಗಬೇಕು. ಸಾಧು ಸಂತರು ಹೇಳಿರುವುದು ಇದನ್ನೇ. ಗೌತಮ ಬುದ್ಧ ಹೆಚ್ಚು ಮಾತನ್ನು ಆಡಿ ಮನಸ್ಸನ್ನು ಅರಳಿಸುವ ಕಾರ್ಯ ಮಾಡಿದರು. ಈ ನಾಡಿನಲ್ಲಿ ಸ್ವಾಮೀಜಿಗಳು, ಸಾಹಿತಿಗಳು, ರಾಜಕಾರಣಿಗಳು ಸೇರಿದಂತೆ ಎಲ್ಲರೂ ಮನಸ್ಸಿಗೆ ಹಿತ ನೀಡುವ ಮಾತುಗಳನ್ನಾಡುತ್ತಾರೆ. ಆದರೆ ಮಾತಿಗೆ ಅನುಗುಣವಾಗಿ ವರ್ತನೆ ಇಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.</p>.<p>‘ಒಂದು ಸಂಘಟನೆಯ ಮೂಲಕ ಬೇರೆ ಬೇರೆ ರೀತಿಯ ಕ್ರಾಂತಿಗಳು ನಡೆಯುತ್ತಿವೆ. ಆದರೆ ಇಂದು ಕ್ರಾಂತಿಗಳು ಕಳೆಯನ್ನು ಕಳೆದುಕೊಳ್ಳುತ್ತಿವೆ. ಮಾಡುವ ಕೆಲಸದಲ್ಲಿ ಬದ್ಧತೆ ಇಲ್ಲದಿರುವುದು ಇದಕ್ಕೆ ಕಾರಣ. ಬದ್ಧತೆ ಇಲ್ಲದಿದ್ದರೆ ಏನನ್ನು ಮಾಡಲು ಸಾಧ್ಯವಿಲ್ಲ’ ಎಂದರು.</p>.<p>‘ಬುದ್ಧ ತನಗೆ ತಾನೇ ಬೆಳಕಾಗಿ ಲೋಕಕ್ಕೂ ಬೆಳಕಾದ. ಆದ್ದರಿಂದಲೇ ಆತನನ್ನು ‘ಏಷ್ಯಾದ ಬೆಳಕು’ ಎಂತಲೂ ಕರೆಯುತ್ತಾರೆ. ಆದರೆ ಭಾರತಕ್ಕಿಂತಲೂ ಹೊರ ದೇಶಗಳಲ್ಲಿ ಬುದ್ಧನ ಅಸ್ತಿತ್ವ ಜಾಸ್ತಿ ಇದೆ’ ಎಂದರು.</p>.<p>‘ನಮ್ಮ ದೇಶವನ್ನು ಬೆಳೆಸಿ, ಉಳಿಸಬೇಕಾದರೆ ಬುದ್ಧ, ಬಸವಣ್ಣ, ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳು ನಮಗೆ ಮಾರ್ಗದರ್ಶನ. ವಿಛಿದ್ರ ಸಮಾಜವನ್ನು ಕಾಣುತ್ತಿರುವ ಈ ವಿಕ್ಷಿಪ್ತ ಸಂದರ್ಭದಲ್ಲಿ ಬುದ್ಧನ ಬೆಳಕು ನಾಟಕ ಅಂಧಕಾರವನ್ನು ಹೋಗಲಾಡಿಸುತ್ತದೆ’ ಎಂದು ಜಾನಪದ ತಜ್ಞ ಎಂ.ಜಿ. ಈಶ್ವರಪ್ಪ ಅಭಿಪ್ರಾಯಪಟ್ಟರು.</p>.<p>‘ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಬುದ್ಧನ ಚಿಂತನೆಗಳು ಪರಿಹಾರ ರೂಪದಲ್ಲಿ ಇವೆ. ಬುದ್ಧನ ತತ್ವವನ್ನು ಓದಿಕೊಂಡು, ಅಳವಡಿಸಿಕೊಂಡರೆ ರಾಜಕೀಯ, ಧರ್ಮ, ಜಾತಿಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಆದರೆ ಓದುವ ವ್ಯವಧಾನ ಆಸಕ್ತಿ ಇಲ್ಲವಾಗಿವೆ’ ಎಂದು ಪತ್ರಕರ್ತ ಬಿ.ಎನ್. ಮಲ್ಲೇಶ್ ಹೇಳಿದರು.</p>.<p>‘ಸತೀಶ್ ಜಾರಕಿಹೊಳಿ ಫೌಂಡೇಶನ್ ಮೊದಲ ರಂಗ ಪ್ರಯೋಗ ಮಾಡಿದ್ದು, ರಾಜ್ಯದಾದ್ಯಂತ ಹೊತ್ತೊಯ್ಯಲಿದ್ದೇವೆ. ಸ್ವಸ್ಥ್ಯ ಸಮಾಜಕ್ಕೆ ಬೇಕಾದ ಚಿಂತನೆಗಳನ್ನು ಈ ಎರಡು ವೇದಿಕೆಗಳು ಮಾಡುತ್ತಿವೆ. ಸಾಹಿತ್ಯ ಹಾಗೂ ಕಲೆ ಆರೋಗ್ಯಪೂರ್ಣ ಸಮಾಜ ಕಟ್ಟಲು ನಿರಂತರ ಪ್ರಯತ್ನ ಮಾಡುತ್ತೇವೆ’ ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ ಹೇಳಿದರು.</p>.<p>ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕರ್ ವೇದಿಕೆಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>