ನ್ಯಾಮತಿ: ಹೊಟ್ಟೆ ನೋವಿನ ಬಾಧೆಯನ್ನು ತಾಳಲಾರದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಲ್ಲೂಕಿನ ಮಲ್ಲಿಗೇನಹಳ್ಳಿ ಗ್ರಾಮದ ಯುವಕ ಮನೋಜ (21) ಭಾನುವಾರ ಮೃತಪಟ್ಟಿದ್ದಾನೆ.
ಅನಾರೋಗ್ಯದ ನಿಮಿತ್ತ ಕಳೆದ ಬುಧವಾರ ಯುವಕ ಕ್ರಿಮಿನಾಶಕ ಸೇವಿಸಿದ್ದು, ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಾಲಕರು ನೀಡಿದ ದೂರಿನನ್ವಯ ನ್ಯಾಮತಿ ಪಿಐ ಎನ್.ಎಸ್.ರವಿ ಮಾರ್ಗದರ್ಶನದಲ್ಲಿ ಸಬ್ಇನ್ಸ್ಪೆಕ್ಟರ್ ಎಂ.ಜೆ.ಚಂದ್ರು ತನಿಖೆ ಕೈಗೊಂಡಿದ್ದಾರೆ.