ಸಂಜೆ 6.30ರ ಸುಮಾರಿಗೆ ಭಾರಿ ಪ್ರಮಾಣದಲ್ಲಿ ಬೀಸಿದ ಗಾಳಿಯಿಂದಾಗಿ ಬೇವಿನಕಟ್ಟೆಯ ಮರ ಟೊಂಗೆ ಮುರಿದು ಬಿದ್ದಿದೆ. ಮಳೆ ಪ್ರಮಾಣಕ್ಕಿಂತ ಹೆಚ್ಚು ಬಿರುಗಾಳಿ ಜೋರಾಗಿತ್ತು. ಅರಸನಾಳು ಗ್ರಾಮದಲ್ಲಿರುವ ರಂಗಮಂದಿರದ ಚಾವಣಿ ಕಿತ್ತುಹೋಗಿದೆ.
ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಆನಂದ ನಾಯ್ಕ, ಗ್ರಾಮ ಲೆಕ್ಕಿಗ ರಾಜಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಧಾಕರ ಬಂದು ಪರಿಶೀಲಿಸಿದ್ದಾರೆ.
ತಂಪೆರೆದ ಮಳೆ
ಸಂತೇಬೆನ್ನೂರು: ಸಂತೇಬೆನ್ನೂರು ಸೇರಿದಂತೆ ಹೋಬಳಿಯ ಹಲವೆಡೆ ಭಾನುವಾರ ಸಂಜೆ ಮಳೆಯ ಸಿಂಚನ ತಂಪೆರೆಯಿತು. ಒಂದು ವಾರದಿಂದ ತಾಪಮಾನ ಹೆಚ್ಚಿತ್ತು. ಬಿರು ಬಿಸಿಲಿಗೆ ಬಳಲಿದ ಮನಗಳಿಗೆ ಮಳೆ ಸಂತಸ ನೀಡಿತು. ಕೇವಲ 15 ನಿಮಿಷ ಕೆಲವೆಡೆ ಉತ್ತಮ ಮಳೆ ಆಗಿದೆ.