ಮಧ್ಯಾಹ್ನ ಹೊಸಕೋಟೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾ ದೇವಿ ಮತ್ತು ಇತರೆ ಆರೋಗ್ಯಾಧಿಕಾರಿಗಳ ಜೊತೆಯಲ್ಲಿ ಆಗಮಿಸಿದ ಮಂಜುನಾಥ್, ಡಿ. 15ರಂದು ತಾವು ಕರ್ತವ್ಯದಲ್ಲಿದ್ದಾಗ ರಾಜಕೀಯ ಮುಖಂಡ ಜಯರಾಜ್ ಮತ್ತು ಅವರ ಸಂಗಡಿಗರು ಆಸ್ಪತ್ರೆಗೆ ಬಂದು ತಾವು ಇತ್ತೀಚೆಗೆ ದಾಳಿ ಮಾಡಿದ್ದ ಸುಜಾತ ಕ್ಲಿನಿಕ್ ಕೇಸಿನ ವಿಷಯವಾಗಿ ಮಾತನಾಡಿದರು. ಅಲ್ಲಿ ಸೀಜ್ ಮಾಡಿದ್ದ ವಸ್ತುಗಳನ್ನು ವಾಪಸ್ ಕೊಡುವಂತೆ ತಮ್ಮ ಮೇಲೆ ಒತ್ತಡ ಹಾಕಿದರು. ಮತ್ತು ಅವಾಷ್ಯ ಶಬ್ದಗಳಿಂದ ತಮ್ಮನ್ನು ನಿಂದಿಸಿದರು ಎಂದು ಹೇಳಿದರು.